ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಂದಿಮಹಾತ್ಮ ಏ - ೬ ಕ. ಕವಿಚರಿತೆ :- ಈ ಗ್ರಂಥದ ಪ್ರಥಮಸಂಧಿ : « ಹರುಷವ:೦ ತಾಳೀ ಮಹಾತ್ಮಯಂ ಪೇಳನಾ ದರದಿ ವಿಶ್ವಾಮಿತ್ರನೋತ್ರಂ ಭೀಮರಥಿ • ವರತೀರದೊಳ: ತೊಳಪ ಬೇಡ ಬುಯ್ಯರದ ಕರಣಿಕ ಜೋತಿಯಾತ್ಮಭವನು | ಸರಿಸಿರುಹನೇತ್ರ ಶ್ರೀಮದನಗೋಪಾಲಕನ | ಕರುಣದಿಂ ಗೋವಿಂದನೆಂಬೊರ್ವವಂ ... . (೧-೨) ಎಂಬ ಪದ್ಯದಿಂದ ಈ ಗ್ರಂಥವನ್ನು ರಚಿಸಿದವನು ವಿಶ್ವಾಮಿತ್ರತ್ರರ ಕರ ಣಿಕನಾದ ಜ್ಯೋತಿಯಂಬ ಬ್ರಾಹ್ಮಣ ಮಗನೆಂದೂ, ಕೊವಿಂದನೆಂಬ ಹೆಸರು ಇವನೆಂದೂ, ಶ್ರೀಮದನಗೋಪಾಲಸ್ವಾಮಿಯ ಭಕ್ತನೆಂದೂ ತಿಳಿಯಬರುತ್ತದೆ. ಈ ಕವಿಗೆ ಗೋಪನೆಂದು ಪ್ರಸಿದ್ದವಾದ ಮತ್ತೊಂದು ಹೆಸರುಂಟು. ಈ ಭೀಮ ಕಥಿತೀರದೊಳ್ ತೊಳಪ ಬೇಡ ಬುಯ್ಯರದ ಎಂಬುದರಿಂದ ಕೃಷ್ಣಾ ನದಿಗೆ ಉಪ ನದಿಯಾದ ಭೀಮನದಿಯ ತೀರದಲ್ಲಿರುವ ಬುಯ್ಯರವೆಂಬ ಗ್ರಾಮದಲ್ಲಿದ್ದವನೆಂದೂ ತೋರುತ್ತದೆ ( ಭೀಮರಥೀತೀರ ಎ೦ಬ:ದರಿಂದ ಒಂದುವೇಳೆ ಜೋಲಾರ ರದ ಜಿಲ್ಲೆಯ ಈತನ ದೇಶವಾಗಿರಬಹುದು; ಬುಯ್ಯರವೆಂಬುದು ಆಜಿಲ್ಲೆಯಲ್ಲಿ ಪ್ರಸಿದ್ದವಾದ ಈಗಿನ ಬಾAF 11 ಎಂಬ ಗ್ರಾಮವಾಗಿ ಇದ್ದರೂ ಇರಬಹುದು; ಆಜಿಲ್ಲೆಯಲ್ಲಿರುವ ಪ್ರಸಿದ್ಧವಾದ ಪಂಡರಾಪುರದ ಪಾಂಡುರಂಗನೇ ಈತನಿಗೆ ಪ್ರಸನ್ನನಾದ ಶ್ರೀಮವನಗೊಪಾಲನಾಗಿದ್ದರೂ ಇರಬಹುದು. 1 ವಿಶ್ವಾಮಿತ ಗೋತ್ರಜ ” ನೆಂಬುದರಿಂದಲೂ, ಈ ಗ್ರಂಥದ ವರ್ಣನೆಯಿಂದಲೂ ಈತನು ಸ್ಮಾರ್ತ ಬಾಹ್ಮಣನೆಂದು ಊಹಿಸುವುದಕ್ಕೆ ಬಹಳ ಅವಕಾಶವುಂಟು. ಈತನು ಸಂಸ್ಕೃತ ಕವಿಗಳಲ್ಲಿ ಕಾಳಿದಾಸ ಮಲ್ಲಣ ಮಯೂರ ಬಾಣ ಭೂ ಜರುಗಳನ್ನೂ ಕರ್ಣಾಟಕವಿಗಳಲ್ಲಿ ಕೇಶಿರಾಜ ಸಂಹ ಭಾಟರನ್ನೂ (೧೧೪) ಸ್ಮ ರಿಸುತ್ತಾನೆ. ಅಧುನಿಕರಲ್ಲಿ ಯಾರನ್ನೂ ಸ್ಮರಿಸಿ ಇಲ್ಲ. ಆದರೂ ಈ ಗ್ರಂಥದ ಶೈಲಿಯ ಲಕ್ಷ್ಮೀಶನ ಜೈಮಿನಿಭಾರತದ (ಕ್ರಿ. ಶ. ೧೭ಶತಮಾನ) ಶೈಲಿಯ ಛಾಯೆ ಯಾಗಿರುವುದರಿಂದಲೂ, ಅಭಿಪ್ರಾಯವು ಅದರಿಂದ ತಗದ೦ತ ಇರುವುದರಿಂದ ಲೂ (ಸಂಧಿ, ೧-೧೧, ೧೩, ೨೪, ೨೬, ೪-೫,೭ ಇತ್ಯಾದಿ) ಕವಿಯು ಆ ಜೈಪಿ