ಪುಟ:ನನ್ನ ಸಂಸಾರ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

1V ರಾದ ಮಂಡನಮಿಶ್ರೋಭಯಭಾರತಿಗಳನ್ನು ಶಾಪದಿಂದ ವಿಮೋಚನಮಾಡಿ, ಮಂಡನ ಮಿಶ್ರರನ್ನು ಶಿಷ್ಯತ್ವೇನಪರಿಗ್ರಹಿಸಿ, ಸರಸ್ವತಿಯನ್ನು ಗುರುಪೀಠದಲ್ಲಿ ಪ್ರತಿಷ್ಠಿಸಿ, ಷಣ್ಮ ತಗಳಂ ಸ್ಥಾಪನೆಮಾಡಿ, ಷಣ್ಮತಸ್ಥಾಪನಾಚಾರ್ಯರೆನಿಸಿಕೊಂಡು, ಸರ್ವಜ್ಞ ಪೀಠಾರೋ ಹಣವಂ ಮಾಡಿ, ಸರ್ವಜ್ಞರೆನಿಸಿಕೊಂಡು, ಗುರುಪೀಠಗಳಂ ನಿರ್ಮಾಣಮಾಡಿ, ಬ್ರಹ್ಮೇಂದ್ರೊಪೇಂದ್ರಾದಿಗಳಿಂದ ಪ್ರಾರ್ಥಿಸಲ್ಪಟ್ಟು ಸಶರೀರನಾಗಿ ಕೈಲಾಸಕ್ಕೆ ತೆರ ದನು. « ದೈವಾಧೀನಂಜಗತ್ಸರ್ವಂಮನ್ತ್ರಾಧೀನಂತು ದೈವತಮ್ | ತನ್ಮನ್ತ್ರಂಬ್ರಾಹ್ಮಣಾಧೀನಂ ಬ್ರಾಹ್ಮಣೋಮಮೆದೇವತಾ ” || ಎಂಬ ಭಗವದ್ವಾ ಕ್ಯಪ್ರಾಮಾಣ್ಯದಂತೆ ಬ್ರಾಹ್ಮಣರನ್ನು ದ್ಧರಿಸಿದ ಆ ಮಹನೀಯರ ಚರಿತ್ರೆಯು ಯಾರಿಂದತಾನೇ ಶ್ಲಾಘಿಸಲ್ಪ ಡುವುದಿಲ್ಲ ? ಈ ಮಹನೀಯರ ಚರಿತ್ರೆಯು ಮಾತೃಭಾಷೆಯಾದ ಸಂಸ್ಕೃತದಲ್ಲಿ ಪದ್ಯ ಪಾದ, ಚಿದ್ವಿಲಾಸ, ವ್ಯಾಸಾಚಲ, ಆನಂದಗಿರಿ, ಮಾಧವಾಚಾರ್ಯ ರೇ ಮೊದಲಾದ ಅನೇಕ ಮಹನೀಯರಿಂದ ವಿಶದವಾಗಿಯೂ, ರಸಭರಿತವಾಗಿಯೂ ರಚಿಸಲ್ಪಟ್ಟಿದೆ. ಆದರೆ ಅವೆಲ್ಲಾ ಸಂಸ್ಕೃತಭಾಷಾಭ್ಯಾಸವಿಲ್ಲದವರಿಗೆ ತಿಳಿಯವು. ದೇಶಭಾಷೆಯಾದ ಕನ್ನ ಡದಲ್ಲಿ ಕೆಲವಿದ್ದರೂ, ಅವುಗಳಲ್ಲಿ ಕೆಲವು ಎಲ್ಲಿ ವಿಸ್ತರಿಸಲ್ಪಟ್ಟಿರಬೇಕೋ ಅಲ್ಲಿ ವಿಸ್ತೃ ತವಾಗದೆಯೂ, ಎಲ್ಲಿ ಸಂಕ್ಷೇಪವಾಗಿರಬೇಕೋ ಅಲ್ಲಿ ಸಂಕ್ಷಿಪ್ರವಾಗದೆಯೂ, ಮತ್ತೆ ಕೆಲವು ವಿಷಯಗನೇನಕಗಳಿಂದ ದೂರವಾಗಿಯ, ಇವೆ. ಇದನ್ನು ನೋಡಿ ನಾನು ಈ ಕುಂದಕಗಳನ್ನೆಲ್ಲಾ ಪರಿಹರಿಸಿ ಆರ್ಯಮಹನೀಯರಿಗೆ ಆಚಾರ್ಯರ ಚರಿತ್ರೆಯು ವಿಶದವಾಗಿ ತಿಳಿಯಲೆಂದು, ಅನೇಕ ಸಂಸ್ಕೃತ, ಕನ್ನಡ, ತೆಲುಗು, ಇಂಗ್ಲಿಷ್ ಪುಸ್ತಕಗಳ ಸಹಾ ಯದಿಂದ • ಶಂಕರಕಥಾಸಾರ ವೆಂಬ ಈ ಗ್ರಂಥವನ್ನು ರಚಿಸಿರುವೆನು. - ಈ ಗ್ರಂಥರಚನೆಗೆ ಆಧಾರಗ್ರಂಥಗಳು:- () ಮಾಧವೀಯ ಶಂಕರದಿಗ್ವಿಜಯ (2) ಶಂಕರವಿಜಯವಿಲಾಸ (ಚಿದ್ವಿಲಾಸಶಂಕರವಿಜಯ)ರ್ ಸಂಸ್ಕೃತಪದ್ಯ (3) ಮಣಿಮಂಜರಿಭೇದಿನೀ (4) ಶ್ರೀಮದಾಚಾರ್ಯಚರಿತ } ಸಂಸ್ಕೃತಗದ್ಯ (5) ಶ್ರೀ ಶಂಕರಾಚಾರ್ಯ ಚರಿತ್ರಮ್ (6) ಶ್ರೀ ಶಂಕರಾಕಥಾಮೃತ ಕನ್ನಡಗದ್ಯ (7) ಶ್ರೀ ಶಂಕರಭಗವತ್ಪಾದಾಚಾರ್ಯ ಚರಿತ್ರೆ (8) ಶ್ರೀ ಶಾಂಕರಮಠ ತತ್ವ ಪ್ರಕಾಶಿಕಾರ್ಥಸಂಗ್ರಹಮು-ತೆನುಗು