ಪುಟ:ನನ್ನ ಸಂಸಾರ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸಾರ ನದಿಂದ ಸಹಾಯಮಾಡುವನು. ಇಂದ್ರನೂ ಸುಧನ್ವನೆಂಬ ಅರಸನಾಗಿ ನಿನ್ನನ್ನು ನಿರೀಕ್ಷಿಸುತ್ತಾ ಸೌಗತರಂ ಗುಂಪುಕೂಡಿಸುತ್ತಲಿರುವನು” ಎಂದುಸುರಿದನು. ಮಹೇಶ್ವರನ ಈ ಪ್ರಕಾರವಾದ ಆಜ್ಞೆಯಂ ಕುಮಾರಸ್ವಾಮಿಯು ಮಹಾಪ್ರಸಾದವೆಂದಂಗೀಕರಿಸಿದನು. ಬಳಿಕ ಆ ವಿಶಾಖನು "ಭಟ್ಟಪಾದಾಚಾರ್ಯ” ರೆಂ‌ಬ ಹೆಸರಿನಿಂದ ಭೂಲೋಕದಲ್ಲಿ ಅವತಾರವಂ ಮಾಡಿದನು. ಆತನು, ವಾದಗಳಲ್ಲಿ ಯುಕ್ತಿಯುಕ್ತವಾದ ಶಾಸ್ತ್ರನಿದರ್ಶಗಳಿಂದ ಶತ್ರುಗಳಂ ಗೆಲ್ಲುತ್ತ ದಿಗ್ವಿಜಯವಂ ಮಾಡಿಕೊಂಡು ಸುಧನ್ವರಾಯನ ರಾಜಧಾನಿಗೆ ಬಂದನು. ಬಹಳಕಾಲದಿಂದ ನಿರೀಕ್ಷಿಸಿಕೊಂಡಿದ್ದ ರಾಜನು ಅವರನ್ನು ಅರ್ಥ್ಯಪಾದ್ಯಾಚಮನಾದಿಗಳಿಂದ ಪೂಜಿಸಿ ಸಿಂಹಾಸನದ ಮೇಲೆ ಕುಳ್ಳಿಲಿಸಿದನು. ಆಗ ಭಟ್ಟಪಾದರು ಸಮೀಪದಲ್ಲಿದ್ದ ಒಂದು ಮರದಮೇಲೆ ಕುಳಿತು ಕೂಗುತಿದ್ದ ಒಂದು ಕೋಗಿಲೆಯನ್ನು ಕಂಡು "ಮಲಿನೈಶ್ವೇನ್ನಸಂಗಸ್ತೆ ನೀಚೈಃ ಕಾಕ ಕುಲೈಃ ಪಿಕ ಶ್ರುತಿದೂಷಕನಿರ್ಹ್ವಾರ್ದೈಶ್ಚಾಘನೀಯಸ್ತದಾ ಭವೇಃ"|| ಎಲೈ ಕೋಗಿಲೆಯೇ ! ಮಲಿನವಾಗಿಯೂ, ನೀಚವಾಗಿಯೂ, ಶ್ರುತಿದೂಷಕವಾಗಿಯೂ ಇರುವ ಈ ಕಾಗೆಗಳ ಸಂಬಂಧವಿಲ್ಲದಿದ್ದರೆ ನೀನು ಶ್ಲಾಫ್ಯನಾಗುವಿ. ಎಂದರ್ಧವುಳ್ಳ ಶ್ಲೋಕದಿಂದ "ಶ್ರುತಿದೂಷಕರಾದ ಬೌದ್ಧರ ಸಂಬಂಧವಿಲ್ಪದಿದ್ದರೆ ನೀನು ಕೀರ್ತಿವಂತನಾಗುವಿ” ಎಂದು ಹೇಳಿದರು. ಅದನ್ನು ಕೇಳಿ ಬೌದ್ಧರೆಲ್ಲರೂ ಮತವಿಷಯಕವಾದ ವಾಗ್ವಾದಕ್ಕಾರಂಭಿಸಿದರು. ಭಟ್ಟಪಾದರು ಅದನ್ನೆಲ್ಲಾ ಯುಕ್ತಿಸಹಿತವಾದ ಪ್ರಮಾಣಗಳಿಂದ ಖಂಡಿಸಿ ರಾಜನಿಗೆ ವೇದತತ್ವವನ್ನು ಬೋಧಿಸಲಾರಂಭಿಸಿದರು. ಆಗ ರಾಜನು “ ಯಾರು ತಮ್ಮ ಮತವು ಸತ್ಯವನ್ನುತ್ತಾರೋ ಅವರು ಪರ್ವತದ ತುದಿಯಿಂದ ಧುಮುಕಿ ಜೀವ ಸಹಿತವಾಗಿ ಬದುಕಿ ಬಂದರೆ ಅವರ ಮತವೇ ಸತ್ಯವೆನ್ನುತ್ತೇನೆ ” ಎಂದನು. ಬೌದ್ಧರು ಇದಕ್ಕೆ ಹೆದರಿದರು. ಆಗ ಭಟ್ಟಪಾದರು ಪರ್ವತದ ತುದಿಗೆ ಹತ್ತಿ "ವೇದಗಳು ಪ್ರಮಾಣವಾಗಿದ್ದರೆ ನನಗೇನೂ ಆಗಬೇಡ” ಎಂದು ಬಿದ್ದು, ಯಾವ ಉಪಯತಿಯೂ ಇಲ್ಲದೆ ರಾಜನಲ್ಲಿಗೆ ಬಂದರು. ಆಗ ಬೌದ್ಧರು "ಇವನು ಯಾವುದೋ ಮಣಿಮಂತ್ರೌಷಧದ ಸಹಾಯದಿಂದ ಬದುಕಿಬಂದಿದ್ದಾನೆ" ಎನ್ನಲು, ರಾಜನು ಗುಟ್ಟಾಗಿ ಒಂದು ಕುಂಭದಲ್ಲಿ ಒಂದು ಕರಿನಾಗರಾವನ್ನು ಹಾಕಿಸಿ ಭದ್ರವಾಗಿ ಬಾಯಿಕಟ್ಟಿದಮೇಲೆ ಸಭೆಗೆ