ಪುಟ:ನನ್ನ ಸಂಸಾರ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ ತರಿಸಿ " ಇದರಲ್ಲಿರುವುದನ್ನು ನೀವು ತಿಳಿಸಬೇಕು; ಯಾರಮಾತು ಸುಳ್ಳಾಗುವುದದೋ ಅವರನ್ನು ಕಲ್ಲು ಗಾಣಕ್ಕೆ ಹಾಕಿಸಿ ಅರೆಯಿಸುತ್ತೇನೆ. ” ಎಂದು ಹೇಳಿ ಸಭೆಯನ್ನು ಬೀಳ್ಕೊಟ್ಟನು. - ಉಭಯಪಕ್ಷದವಗೂ ಸ್ವಸ್ವಗೃಹಾಭಿಮುಖರಾದರು, ಸೌಗತರು ಆ ರಾತ್ರಿ ಯೆಲ್ಲಾ ಒಂದು ಕೊಳದಲ್ಲಿ ಕಂಠಪರ್ಯಂತ ನೀರಿನಲ್ಲಿ ನಿಂತು ಸೂರ್ಯನಂ ಕುರಿತು ತಸವಂ ಗೈದು ನಿಶ್ಚಿತಾಂಶವನ್ನು ಸೂರ್ಯದೇವನಿಂದ ತಿಳಿದು ರಾಜನ ಸಭೆಗೆ ಪ್ರಾತಃ ಕಾಲ ಹೊತ್ತಿಗೆಮುಂಚೆ ಬಂದರು. - ಬ್ರಾಹ್ಮಣರು ಆ ರಾತ್ರಿಯೆಲ್ಲಾ ಸುಖವಾಗಿ ನಿದ್ರೆಮಾಡಿ ಸ್ವಕರ್ಮಾನಂತರ ರಾಜನ ಸಭೆಗೆ ಬಂದರು. ಸೌಗತರೆಲ್ಲರೂ ಆ ಕುಂಭದಲ್ಲಿ ಕರೀಘಟಸರ್ಪವಿದೆ ಎಂದರು. ಬ್ರಾಹ್ಮಣರು “ ನನ್ನ ಒಂದಂಶದಿಂದ ಈ ಪ್ರಪಂಚವನ್ನೆಲ್ಲಾ ವ್ಯಾಪಿಸಿದ್ಧೇನೆ" ಎಂಬ ಭಗವದ್ವಾಕ್ಯಪ್ರಾಮಾಣ್ಯದಿಂದ ಕುಂಭದಲ್ಲಿ ಸರ್ಪಶಾಯಿಯಾದ ಮಹಾವಿಷ್ಣು ವಿರುವನೆಂದರು. ರಾಜನು ಬ್ರಾಹ್ಮಣರನ್ನು ಕೊಲ್ಲಿಸಬೇಕೆಂದು ಬಹಳ ಖಿನ್ನನಾದನು. ಸೌಗೆ ತರು ಆ ಸರ್ಪದಿಂದಲೇ ಭ‌‌ಟ್ಟ ಪಾದನನ್ನು ಕೊಲ್ಲಿಸಬೇಕೆಂದು, “ ನಿನ್ನ ಮಾತು ನಿಜ ವಾಗಿದ್ದರೆ ಆ ಕುಂಭದಿಂದ ವಿಷ್ಣುವನ್ನು ತೆಗೆ” ಎಂದರು. ಆಗ ಭಟ್ಟಪಾದರು ಸಭಾಮಧ್ಯದಲ್ಲಿದ್ದ ಆ ಕುಂಭದಿಂದ ಶೇಷಶಯನನಾರ ವಿಷ್ಣು ಪ್ರತಿಮೆಯನ್ನು ತೆಗೆದು ತೋರಿಸಿದರು. ಅನಂತರ ರಾಜನು ಸೌಗತರನ್ನೆಲ್ಲಾ ಕೊಲ್ಲಿಸಿಬಿಟ್ಟನು. -~ ದ್ವಿತೀಯವಲ್ಲರೀ ಕೇರಳೇ ಸರಳೇ ದೇಶ ಕರುಣಾನೀರಧಿಃ ಶಿವಃ || ಪೂರ್ಣಾನದೀಪುಣ್ಯ ತಟೇ ಸ್ವಯಂಭೂ ರ್ಭಾತಿ ಸಂತತಮ್ || ರಳದೇಶದಲ್ಲಿ ವೃಷಭಾಚಲದೊಳಗೆ ಇರುವ ಪುರ್ಣವಾಹಿನೀನದಿಯ ದಡದಲ್ಲಿ ಮಹೇಶ್ವರನು ಬ್ಯೊತಿಲಿಂಗರೂಪದಿಂದ ಅವತರಿಸಿದ್ದನು. ಭಕ್ತರವಾಂಛಿತಾರ್ಥಗಳಂ ಕೊಡುತ್ತಾ ಪ್ರಸಿದ್ಧನಾಗಿ