ಪುಟ:ನನ್ನ ಸಂಸಾರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಂಕರಕಥಾಸಾರ ೨೩ ಸಪ್ತಮವಲ್ಲರೀ. ವ್ಯಾಸೇ ವೃದ್ಧಮಹೀಸುರಾಕೃತಿಯುತೇ ಭಾಷ್ಯಾದಿ ವೀಕ್ಷ್ಯ ಸ್ವಕಂ ಪ್ರಾಪ್ತೇಂತರ್ಧಿಮಥಪ್ರಯಾಗಮುಪಲಭ್ಯಾರ್ಯೋ ತುಷಾಗ್ನೌಸ್ಥಿತಂ। ಭಟ್ಟಾರಂ ಹ್ಯುಪದಿಶ್ಯ ತತ್ರ ಚ ತತತಶ್ಶ್ರೀ ಮಂಡನಂಶಾರದಾಂ ಮಾಹಿಷ್ಮತ್ಯಭಿಧೇ ವಿಜಿತ್ಯ ನಗರೇ ಪ್ರಾಯಾದ್ದಿಶಂ ದಕ್ಷಿಣಾಮ್||

ಒಂ ದಾನೊಂದುದಿನ ಆಚಾರ್ಯರು, ಗಂಗಾತೀರದಲ್ಲಿ ಶಿಷ್ಯರಿಗೆ ಭಾಷ್ಯ ಪ್ರವಚನಮಾಡಿಸುತ್ತಿದ್ದಾಗ ಮಧ್ಯಾಹ್ನ ವಾಗಲು, ಆಯಾಸ ಗೊಂಡು, ಮಾಧ್ಯಾಹ್ನಿಕ ಸ್ನಾನಕ್ಕೆ ಏಳುತ್ತಿರುವಾಗ ಓರ್ವ ವೃದ್ಧಬ್ರಾಹ್ಮಣನು ಬಂದು ಆಚಾರ್ಯರನ್ನು ಕುರಿತು ನೀನು ಯಾರು ? ಇವರಿಗೆ ಏನು ಹೇಳುತ್ತೀಯೆ ?” ಎನ್ನಲು ಪದ್ಮಪಾದಾದಿಗಳು ' ಇವರು ನಮ್ಮ ಗುರುಗಳು; ವೇದಾಂತಭಾಷ್ಯಕಾರರು; ಬ್ರಹ್ಮ ಸೂತ್ರಭಾಷ್ಯವನ್ನು ನಮಗೆ ಬೋಧಿಸುತ್ತಿದ್ದಾರೆ' ಎಂದರು. ಅದನ್ನು ಕೇಳಿ ಆ ವೃದ್ಧ ಬ್ರಾಹ್ಮಣನು ಯಾವುದಾದರೂ ಒಂದು ಸೂತ್ರಕ್ಕೆ ಅರ್ಥವನ್ನು ಹೇಳೆನ್ನಲು ಶಂಕರರು' ನನಗೆ ಅರ್ಥಜ್ಞನೆಂಬ ಅಹಂಕಾರವಿಲ್ಲ; ತಾವು ಯಾವುದಾದರೂ ಒಂದು ಸೂತ್ರವನ್ನು ಕೇಳಬಹುದು' ಎಂದರು. ಆಗ ವೃದ್ಧಬ್ರಾಹ್ಮಣನು ' ತದಂತರ ಪ್ರತಿಪತ್ತೌರಂಹತಿಸಂಪರಿಷ್ವಕ್ತ‌ಃ ಪ್ರಶ್ನನಿ ರೂಪಣಾಭ್ಯಾಮ್ ' ಎಂಬ ಸೂತ್ರವನ್ನು ಕೇಳಿ, ಶಂಕರರು ಹೇಳಿದ ಅರ್ಥದಮೇಲೆ ಅನೇಕ ವಿಕಲ್ಪಗಳನ್ನು ತೋರಿಸಿದರು. ಶಂಕರರು ಅವುಗಳನ್ನೆಲ್ಲಾಖಂಡಿಸಲು ಇಬ್ಬರಿಗೂ ವಾದವು ಆರಂಭವಾಯಿತು. ಸಮಿಾಪದಲ್ಲಿದ್ದ ಪದ್ಮಪಾದನು ಅವರಿಬ್ಬರನ್ನೂ ಧ್ಯಾನಿಸಿನೋಡಿ ಅವರನ್ನು ಹರಿಹರಸ್ವರೂಪರೆಂದು ತಿಳಿದು (ಶಂಕರಃ ಶಂಕರಃ ಸಾಕ್ಷಾತ್ ವ್ಯಾಸೋನಾರಾಯಣೋ ಹರಿಃ | ತಯೋರ್ವಿವಾದೆ ಸಂಪ್ರಾಪ್ತೆ ಕಿಂಕರಃ ಕಿಂಕರೋಮ್ಯಹಂ) "ಶಂಕರಾವತಾರಿಗಳಾದ ಶಂಕರಾಚಾರ್ಯರಿಗೂ, ನಾರಾಯಣಾವತಾರಿಗಳಾದ ವ್ಯಾಸರಿಗೂ ವಿವಾದಪ್ರಾರಂ ಭವಾದರೆ ಕಿಂಕರನಾದ ನಾನು ಏನುಮಾಡಲು ಶಕ್ತನು ?” ಎನ್ನಲು ಶಂಕರರು ತಕ್ಷಣದಲ್ಲಿ ವ್ಯಾಸರಿಗಭಿವಂದಿಸಿ ಸ್ತುತಿಸಲು ವ್ಯಾಸರು ತಮ್ಮ ನೈಜರೂಪವನ್ನು ತೋರಿಸಿದರು.