ಪುಟ:ನವೋದಯ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

476

ಸೇತುವೆ

ಜಯದೇವನಿಗೆ ಅರ್ಥವಾಗಲಿಲ್ಲ.
“ಮೂಕ ನಾಟಕವೆ?
“ಗಾಬರಿಯಾಗ್ನೆಡಿ. ಪಾತ್ರಗಳು ತೆರೆಯ ಮುಂದೆ ಬರ್ತಾ ಇರ್ಬೇಕು.ಹಿಂದಿ
ನಿಂದ ಹಾಡುಗಳನ್ನೋ ಶ್ಲೋಕಗಳನ್ನೋ ಹೇಳ್ತಾ ಇರ್ಬೇಕು.”
“ಹೂಂ.”
“ವಿಶ್ವದ ಮಹಾ ಪುರುಷರು_ಅಂತ ಹೆಸರಿಡೋಣ.”
“ಮಹಾ ಸ್ತ್ರೀಯರಿಲ್ವೇನು?”
“ಇಲ್ದೆ! ವಿಶ್ವದ ಮಾನವ ಮಣಿಗಳು_ಅಂತ ಹೆಸರಿಟ್ಟರಾಯ್ತು.”
ಅಷ್ಟರಲ್ಲೆ ತಿಮ್ಮಯ್ಯನವರಿಗೆ ಬೇರೊಂದು ವಿಷಯ ಹೊಳೆಯಿತು. ಅವ
ರೆಂದರು:
“ಅಂದಹಾಗೆ, ರಂಗಭೂಮಿ ಮೇಲೆ ಒಂದು ಸಲಕ್ಕೆ ಒಂದೇ ಪಾತ್ರ ಬರೋದ
ರಿಂದ ಸ್ತ್ರೀಪಾತ್ರ ಬೇಕಾದಾಗ ಹುಡುಗೀರ್ನೆ ಆರಿಸೋಣ. ಏನ್ಹೆಳ‍್ತೀರಾ?”
"ಅಷ್ಟು ಮಾಡಬಹುದೂಂತ ತೋರುತ್ತೆ.”
“ಇದನ್ನ ಬರೆಯೋಕೆ ನೀವು ಸಹಾಯ ಮಾಡ್ಬೇಕು, ನಮ್ಮ ದೇಶದ್ದೆಲ್ಲಾ
ಹೆಚ್ಚು ಕಡಮೆ ನನಗೆ ಗೊತ್ತಿದೆ. ಪರದೇಶಗಳ ಮಹಾ ಪುರುಷರು_ಮಹಾ ಸ್ತ್ರೀಯರ_
ವಿಷಯ ನೀವು ನನಗೆ ಮಾಹಿತಿ ಕೊಡಬೇಕು.”
“ಕೊಡೋಣ.”
“ನೇಪಥ್ಯದಲ್ಲಿ ನಿಂತ್ಕೊಂಡು ಕೆಲವು ಹಾಡುಗಳನ್ನ ನಾನು ಹಾಡ್ತೀನಿ. ಉಳಿದು
ವಕ್ಕೆ ಬೇರೆ ಯಾರನ್ನಾದರೂ ಗೊತ್ಮಾಡಬೇಕು.”
“ಯಾರನ್ನು?”
“ಅದೀಗ ಫಜೀತಿ. ಆಮೇಲೆ ನೋಡೋಣ.”
ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಜಯದೇವ ಸಂತೃಪ್ತನಾದ.
“ನಿಜವಾಗಿಯೂ ಈ ಪ್ರತಿಮಾ ನಾಟಕ ಚೆನ್ನಾಗಿರುತ್ತೆ ನೋಡಿ.”
“ನಂಜುಂಡಯ್ಯನವರನ್ನ ಕೇಳಿ. ಒಂದು ವಚನ ಇದೆ_ಹೊಗಳಿ ಹೊಗಳಿ
ಹೊನ್ನ ಶೂಲಕ್ಕೇರಿಸಿದರಯ್ಯ, ಅಂತ. ಈಗ್ಲೇ ಬೇಡಿ ಸ್ವಾಮೀ, ನಾಟಕ ಆಗೋ
ಕ್ಮುಂಚೇನೇ ಶೂಲಕ್ಕೇರೋದಕ್ಕೆ ನನಗಿಷ್ಟ ಇಲ್ಲ.”
“ಸರಿ. ಇನ್ನೊಂದ್ಸಲ ನಶ್ಯ ಹಾಕ್ಕೊತಿರೋ?”
ಕೈ ಬೆರಳುಗಳ ನಡುವೆ ಚಪ್ಪಟೆಯಾಗಿದ್ದ ನಶ್ಯವನ್ನು ಕಣ್ಣಿನಿಂದ ನೋಡುತ್ತ
ತಿಮ್ಮಯ್ಯ ಕೇಳಿದರು:
“ಯಾಕೆ?”
“ಹುಡುಗೀರಿಗೆ ಯಾವ ನಾಟಕ ಅಂತ ನೀವು ಹೇಳ್ಲೇ ಇಲ್ಲ.”
ತಿಮ್ಮಯ್ಯ, ಉಳಿದಿದ್ದ ಆ ನಶ್ಯವನ್ನು ಮೂಗಿಗೇರಿಸಿ ಕೈ ಕೊಡವಿ ಕರವಸ್ತ್ರದಿಂದ