ಪುಟ:ನವೋದಯ.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೊದಯ

477


ಮೂಗೊರೆಸಿ, ಮುಗುಳುನಗುತ್ತ ಕುಳಿತರು.
"ಹೋಗಲಿ, 'ಕೃಷ್ಣಪ್ರೇಮ'ವೇ ಹಾಕಿ ಬಿಡೊಣ್ವೊ?" ಎಂದು ಜಯದೇವ
ಕೇಳಿದ.
ತಿಮ್ಮಯ್ಯನವರಿಗೆ ಆ ಸಲಹೆ ಒಪ್ಪಿಗೆಯಾಗಲಿಲ್ಲ.
“ಛೆ! ಛೆ! ಬೇರೆಯೇ ಒಂದು ಬರೆಯೋಣ.ಹಳೇದು ಯಾತಕ್ಕೆ?"
"ನಿಮ್ಮಿಷ್ಟ."
"ಸೂತ ಪುತ್ರ ಕರ್ಣ_ಅಂತ. ಕುಂತಿ, ಮಗನನ್ನ ಬಿಟ್ಟು ಬರೋದು; ಆಮೇಲೆ
ನಾನೇ ನಿನ್ನ ತಾಯೀಂತ ಹೇಳೋಕೆ ಹೋಗೋದು. ಅಷ್ಟೆ. ಹ್ಯಾಗಿರ್ಬೇಕು
ಅಂತೀರಾ ತಾಯಿ ಮಗನ ಸಂವಾದ? ಬಾಣ ಬಿಟ್ಟ ಹಾಗೆ ಹೃದಯಕ್ಕೆ ನೆಡಬೇಕು!"
ಯೋಗ್ಯವಾಗಿಯೇ ಇತ್ತು. ಆ ಕಥಾ ವಸ್ತುವಿನ ನಾಟಕವೂ.
ಇಷ್ಟೆಲ್ಲ ಮಾತನಾಡಿದ್ದರೂ ಆ ಮಾತುಕತೆಯನ್ನೆಲ್ಲ ನಿಷ್ಫಲಗೊಳಿಸುವ
ಬೇರೊಂದು ದೊಡ್ಡ ಪ್ರಶ್ನೆ ಜಯದೇವನ ಮುಂದಿತ್ತು.
"ಗೊತ್ತೆ ತಿಮ್ಮಯ್ಯನವರೆ? ಲೆಕ್ಕ ಹಾಕಿದೀರಾ? ಇನ್ನು ನಮಗಿರೋದು ಎಂಟೇ
ದಿನಗಳ ಕಾಲಾವಕಾಶ."
"ಸೂತ ಪುತ್ರ ಕರ್ಣ ನಾಳೆ ಕೊಡ್ತೀನಿ. ನಾಡದು ಒಂದು ದಿನ ಇಬ್ಬರೂ ರಜಾ
ತಗೊಂಡ್ಬಿಡೋಣ. ఆ ಸಾಯಂಕಾಲದೊಳಗೆ 'ವಿಶ್ವದ ಮಾನವ ಮಣಿಗಳು'
ತಯಾರಾಗುತ್ತೆ."
ತಿಮ್ಮಯ್ಯನವರ ಸೃಷ್ಟಿ ಸಾಮರ್ಥ್ಯದಲ್ಲಿ ಸಂಪೂರ್ಣ ನಂಬುಗೆ ಇದ್ದ ಜಯ
ದೇವ, ಆ ಆಶ್ವಾಸನೆಯ ಬಳಿಕ ನಿಶ್ಚಿಂತನಾದ.
....ಸುನಂದಾ ವಿವಿಧ ವಿನೋದಾವಳಿಯ ವಿವರ ತಿಳಿದು ಸಂತೋಷಪಟ್ಟಳು.
ಮನೆಗೆಲಸದಲ್ಲಿ ನೆರವಾಗಲು ಒಬ್ಬ ಹೆಂಗಸು ಬರತೊಡಗಿದ ಮೇಲಂತೂ ಆಕೆಗೆ
ಹೆಚ್ಚಿನ ಕೆಲಸವಿರಲಿಲ್ಲ.
ಗಂಡನೊಡನೆ ಆಕೆಯೆಂದಳು:
"ನಾಳೆ ತಿಮ್ಮಯ್ಯ ಮೇಸ್ಟ್ರು ನಾಟಕ ತಂದ್ಕೊಡ್ತಾರಲ್ವೆ?"
"ಹೌದು."
"ಬೇಕಿದ್ದರೆ ಅದರದು ಮೂರು ನಾಲ್ಕು ಪ್ರತಿ ಮಾಡ್ಕೊಡ್ತೀನಿ."
ಆಕೆ ಮೊದಲ ವರ್ಷ ಇಂಟರಿನಲ್ಲಿದ್ದಾಗ ಕಾಲೇಜು ದಿನಾಚರಣೆಯ ಸಂಬಂಧ
ದಲ್ಲಿ 'ಶಾಕುಂತಲ' ನಾಟಕವಾಡಿದುದು; ಅದರಲ್ಲಿ ಆಕೆ ಸಖಿಯ ಪಾತ್ರವಹಿಸಿದುದು;
ಆಗ ಸಾಕಷ್ಟು ಪ್ರತಿಗಳಿಲ್ಲದೆ ಮಾತುಗಳನ್ನು ಗಟ್ಟಿಮಾಡಿಕೊಳ್ಳಲು ತೊಂದರೆ
ಯಾದುದು_ಇವೆಲ್ಲವೂ ನೆನಪಾದುವು ಸುನಂದೆಗೆ.
“ಸರಿ ಕಣೇ. ಒಳ್ಳೇ ಸಲಹೆ," ಎಂದು ಜಯದೇವ.
ಕೀಟಲೆ ಮಾಡಬೇಕೆಂದು ಆತನೆಂದ: