ಪುಟ:ನವೋದಯ.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

335

 “ಓಹೋ, ಒಂದು ಗಾಡೀನೆ ಹಟ್ಟಿಸ್ಕೊಂಡ್ಬಾ!"
ಆಕೆಯೇನೋ ಹಾಗೆ ಮಾತಾಡಿದರು. ಆದರೂ ಮನಸ್ಸಿನ ಸಾಗರದಲ್ಲಿ ಆಸೆಯ
ದೋಣಿ ಇನ್ನೂ ಅನಿರ್ದಿಷ್ಟವಾಗಿಯೆ ಚಲಿಸುತ್ತಿತ್ತೆಂದು ಅವರಿಗೆ ಸಂಕಟವಾಗಿತ್ತು.
ಇಂದಲ್ಲ ನಾಳೆ, ಬಾಯಿಬಿಟ್ಟು ಹೇಳಲೇ ಬೇಕಾದ, ಕೇಳಲೇ ಬೇಕಾದ, ವಿಷಯ.
ಜಯದೇವನ ತಂದೆ ಬೇರೇನಾದರೂ ಏರ್ಪಾಟು ಮಾದುವುದಕ್ಕೆ ಮುಂಚೆಯೇ___
....ಕನಕಪುರದಲ್ಲಿ ಮಗನನ್ನು ಕಂಡು ತಂದೆಗೆ ಸಂತೋಷವೇ ಆಯಿತು. ಆದರೂ
ಮಾತುಗಳಲ್ಲಿ ಅದನ್ನು ವ್ಯಕ್ತಪಡಿಸುವ ಸ್ವಭಾವ ಅವರದಲ್ಲ.
"ಚೆನ್ನಾಗಿದೀಯೇನೊ?" ಎಂದರು. ಅದೊಂದು ಪ್ರಶ್ನೆಯಲ್ಲೆ ಅಡಕವಾಗಿತ್ತು
ಮಗನನ್ನು ಕುರಿತಾದ ಅವರ ಎಲ್ಲ ಒಲವು.
"ಹೂಂ," ಎಂದ ಜಯದೇವ.
ಆತನ ಮಲತಾಯಿ ಮಾತ್ರ ರಾಗವೆಳೆದರು:
"ನಿನ್ನ ಪಾಲಿಗೆ ನಾವು ಯಾರೂ ಬದುಕಿಯೇ ಇಲ್ಲ ಅನ್ನೋ ಹಾಗೆ ಮಾಡಿದಿ
ಯಲ್ಲೋ. ಅಮ್ಮ ಅಪ್ಪ ಅಂದ್ಮೇಲೆ ತಿಂಗಳಿಗೊಂದಾದರೂ ಕಾಗದ ಬರೀ ಬೇಡ್ವೆ
ನೀನು? ನಿನ್ನ ಸಂಬಳ ಕಳಿಸ್ಕೊಡೂಂತ ನಾವೇನೂ ಕೇಳ್ಲಿಲ್ಲ. ಆದರೆ ಕಾಗದಾನಾರೂ-"
ಅದರ ಜತೆಯಲ್ಲೆ ಅರ್ಧ ನಿಮಿಷದ ಅಳು ಬೇರೆ.
ಜಯದೇವ ಏನನ್ನೂ ಹೇಳಲಿಲ್ಲ. ಆದರೆ ತಂಗಿಯನ್ನೂ ತಮ್ಮನನ್ನೂ
ಕಂಡಾಗ, 'ಇವರಿಗೋಸ್ಕರ ಏನಾದರೂ ತರಬೇಕಿತ್ತು' ಎನಿಸಿತು. ಮರುಕ್ಷಣವೇ,
"ಹಿಂದೆಯೂ ತ೦ದವನಲ್ಲ. ಈಗಲೂ ಅಷ್ಟೆ,"ಎಂದು ಸುಮ್ಮನಾದ.
ಹೈಸ್ಕೂಲಿನ ಕೊನೆಯ ಹಂತವನ್ನು ತಲುಪಿಯೇ ಇರಲಿಲ್ಲ ಅವನ ತಂಗಿ ಸತ್ಯ
ವತಿ. ಒಂದು ವರ್ಷ ತೇರ್ಗಡೆಯಾಗಲಿಲ್ಲವೆಂದು, ಯಾವನೋ ಉಪಾಧ್ಯಾಯನ
ಮೇಲೆ ರೇಗಿ, ಆತನನ್ನು ಹೀನಾಯವಾಗಿ ಬಯ್ದು, ಮಗಳನ್ನು ಶಾಲೆಬಿಡಿಸಿಬಿಟ್ಟಿ
ದ್ದರು ಜಯದೇವನ ಚಿಕಮ್ಮ. ಹೀಗೆ ಓದು ನಿಂತು ಹೋಯಿತೆ೦ದು ಆ ಹುಡುಗಿ,
ಬೇಸರಪಟ್ಟವಳೇನೂ ಅಲ್ಲ. ಅದೇ ಹೊತ್ತಿಗೆ, ಆ ಊರಿಗೆ ಬಂದು ಡೇರೆ ಹೊಡೆ
ದಿತ್ತು ಒಂದು ಟೂರಿಂಗ್ ಟಾಕೀಸು. ಬರುತ್ತಿದ್ದ ಚಿತ್ರಗಳು ಹಳೆಯವೇ ಆದರೂ ಆ
ಹೊಸ ಲೋಕದಲ್ಲಿ ಸತ್ಯವತಿ ಸುಖಿಯಾಗಿದ್ದಳು.
ಆಕೆ ಕೇಳಿದಳು:
"ಅಲ್ಲಿ ಸಿನಿಮಾ ಇದೆಯಾ ಜಯಣ್ಣ?"
“ಊಹೂಂ."
"ಅಷ್ಟೇನಾ? ಬೇಜಾರು ಹಾಗಾದರೆ."
“ಹೂಂ."
"ಬರ್ತಾ ಬೆಂಗಳೂರಲ್ಲಿ ಸಿನಿಮಾ ನೋಡಿದಿಯಾ?"
ನೋಡೋಣವೆಂದು ವೇಣು ಸಲಹೆಮಾಡಿದ್ದ. ಆದರೆ ಆತನ ಪರೀಕ್ಷೆ ಪೂರ್ತಿ