ಪುಟ:ನವೋದಯ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



508

ಸೇತುವೆ

"ಏನು ವಿಶೇಷ?"
"ಅಕ್ಟೋಬರ್ ಮೊದಲ್ನೆ ತಾರೀಕು ಕರ್ನಾಟಕ ರಾಜ್ಯ ಸ್ಥಾಪನೆಯಾಗುತ್ತೆ.
ಲೋಕಸಭೇಲಿ ಇವತ್ತು ಮಸೂದೆ ಮಂಡಿಸಿದಾರೆ."
"ಸಂತೋಷದ ವಿಷಯ. ಬನ್ನಿ. ಕೂತ್ಕೊಳ್ಳಿ."
ಸುರುಳಿ ಸುತ್ತಿದ್ದ ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತ ನಂಜುಂಡಯ್ಯ
ಹೇಳಿದರು:
"ಆದರೆ ಒಂದು ವಿಷಯದಲ್ಲಿ ಮಾತ್ರ ನಾವು ಸೋತಿದೀವಿ. ಹೊಸ ಪ್ರಾಂತಕ್ಕೆ
ಹೆಸರು ಮೈಸೂರು ರಾಜ್ಯ ಅಂತಲೇ ಇರುತ್ತೆ."
ದೊರೆತಿದ್ದುದು ಅಮೃತವೇ. ಆದರೆ ಆ ಹೆಸರಿನಿಂದ ಕರೆಯುವ ಹಾಗಿರಲಿಲ್ಲ
ಅದನ್ನು!
ಸರಕಾರ ಮಾಡಿದ ಅನ್ಯಾಯವನ್ನು ಖಂಡಿಸುತ್ತ,ಮುಖಂಡರನ್ನು ಟೀಕಿಸುತ್ತ,
ನಂಜುಂಡಯ್ಯ ಬಹಳ ಹೊತ್ತು ಮಾತನಾಡಿದರು.
ಅದನ್ನೆಲ್ಲ ಕೇಳಿ ಜಯದೇವನೆಂದ:
"ಸರಕಾರ ತಾನೆ ಹೆಸರು ಇಟ್ಟಿರೋದು? ಜನ ಕರ್ನಾಟಕ ಅನ್ನೋ ಪದವನ್ನೆ
ಬಳಸಿದರೆ, ಅದೇ ಹೆಸರು ತನ್ನಿಂತಾನಾಗಿಯೇ ಸ್ಥಿರವಾಗುತ್ತೆ."
"ನಿಜ ಅನ್ನಿ. ಅಂತೂ ಆ ಮಂಡ್ಯದವರಿಗೆ ಮಂಗಳಾರತಿಯಾಯ್ತು."
[ಇನ್ನು ಅಣಕಿಸಿ ಆಗುವುದಾದರೂ ಏನು? ಅದರ ಅಗತ್ಯವಾದರೂ ಏನು?"
ಅವರು ಅಂತಹ ಮಾತನ್ನಾಡಿದರೆಂದು ಸುಮ್ಮನಿರುವುದೂ ಸಾಧ್ಯವಿರಲ್ಲಿಲ್ಲ.
"ಮೈಸೂರು ಹೀಗೆಯೇ ಉಳೀಬೇಕೂಂತ ಸಾಕಷ್ಟು ಪ್ರಯತ್ನ ಮಾಡಿದ್ರು,"
ಎಂದ ಜಯದೇವ. ಹಿಂದೆಯೊಂದು, ಮುಂದೆಯೊಂದು ಸಲ್ಲದು; ನಂಜುಂಡಯ್ಯ
ನೆದುರು ಆಡಿದ ಮಾತನ್ನು ಲಕ್ಕಪ್ಪಗೌಡರೆದುರೂ ಹೇಳುವಂತಿರಬೇಕು; ಈಗ ಆಡಿರುವ
ಮಾತು ಅಂಥದೇ - ಎಂದು ಜಯದೇವ ತನ್ನನ್ನೆ ಸಮಾಧಾನಪಡಿಸಿಕೊಂಡ.
ಆದರೆ ನಂಜುಂಡಯ್ಯನಿಗೆ ಆ ಮಾತು ಒಪ್ಪಿಗೆಯಾಗಲಿಲ್ಲ.
"ಅವರು ಪ್ರಯತ್ನಪಟ್ಟದ್ದು ಮೈಸೂರು ಹೀಗೆಯೇ ಉಳೀಬೇಕೂಂತ ಅಲ್ಲ-
ತಮ್ಮ ಅಧಿಕಾರ ಉಳೀಬೇಕೊಂತ."
ಆ ಅಭಿಪ್ರಾಯವನ್ನೊಪ್ಪುವ ಅಥವಾ ಟೀಕಿಸುವ ಗೊಡವೆಗೆ ಹೋಗದೆ
ಜಯದೇವನೆಂದ:
"ಈ ರಾಜಕೀಯ ಅನ್ನೋದು ಬಹಳ ಕೆಟ್ಟದ್ದು. ಮನುಷ್ಯನ ಕೈಲಿ ಅದು
ಮಾಡಿಸದ ಕೆಲಸವಿಲ್ಲ."
ನಂಜುಂಡಯ್ಯನವರು ಸ್ವಲ್ಪ ಭಿನ್ನವಾದ ರೀತಿಯಲ್ಲಿ ಅದೇ ಅಭಿಪ್ರಾಯವನ್ನು
ವ್ಯಕ್ತಪಡಿಸಿದರು:
"ರಾಜಕೀಯ ಒಂದು ಅನಿವಾರ್ಯವಾದ ಅನಿಷ್ಟ ಜಯದೇವ್.ಕೆಟ್ಟದು;