ಪುಟ:ನವೋದಯ.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

512

ಸೇತುವೆ

ಕತ್ತಲು ಕಳೆದು ಬೆಳಕಾಗಲೇಬೇಕು.

****

ಮನೆಗೆ ಬಂದ ಜಯದೇವ ಕದ ತೆರೆದಾಗ, ಅಂಚೆಯವನು ಒಳಕ್ಕೆಸೆದು
ಹೋಗಿದ್ದ ಲಕೋಟೆ ಸಿಕ್ಕಿತು.
[ವೇಣುವಿನ ಹಸ್ತಾಕ್ಷರ. ಶಾಲೆಗೆ ತಾನು ಹೋಗುವುದಕ್ಕೆ ಮುಂಚೆಯೆ ತನ್ನ
ಕೈಸೇರಬೇಕೆಂದು ಮನೆಯ ವಿಳಾಸಕ್ಕೆ ಬರೆದಿದ್ದನೇನೊ. ಆದರೆ ತನಗೆ ಅದು ತಲಪಿದುದು
ಮಾತ್ರ ತಡವಾಗಿ, ಈಗ.]
ಕಾತರ. ಏನಾಗಿದೆಯೊ, ಏನಾಗಿದೆಯೊ ಸುನಂದೆಗೆ?
ದೀಪ ಹಚ್ಚಿಕೊಳ್ಳದೆಯೇ ಜಯದೇವ ಲಕೋಟೆ ಹರಿದ.
ಆ ಮಬ್ಬು ಬೆಳಕಿನಲ್ಲೂ ಅಕ್ಷರಗಳು ಸ್ಪಷ್ಟವಾಗಿ ಕಾಣಿಸಿದುವು:
"ಸುನಂದೆಗೆ ಹೆರಿಗೆಯಾಯಿತು. ಗಂಡು. ಸುಖಪ್ರಸವ. ತಾಯಿ ಮಗು
ಇಬ್ಬರೂ ಆರೋಗ್ಯವಾಗಿದಾರೆ. ರಜಾ ದೊರಕಿಸಿಕೊಂಡು ಬಂದು ಹೋಗು."


.