ಪುಟ:ನವೋದಯ.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

516

ಪ್ರಥಮ ఆವೃತ್ತಿಯ ಮುನ್ನುಡಿ
ಓದುಗರೊಡನೆ

ಸೇತುವೆ



ಈಗ ನನ್ನ ಇನ್ನೊಂದು ಕಾದಂಬರಿ ನಿಮ್ಮ ಮುಂದಿದೆ. 'ವಿಮೋಚನೆ',
'ಬನಶಂಕರಿ', 'ಅಭಯ' ಕಾದಂಬರಿಗಳಿಗೆ ಸಹೃದಯರಾದ ನೀವು ನೀಡಿದ ಸ್ವಾಗತವೇ
'ದೂರದ ನಕ್ಷತ್ರ'ಕ್ಕೂ ದೊರೆಯುವುದೆಂದು ನಾನು ನಂಬಿದ್ದೇನೆ.
ಉಪಾಧ್ಯಾಯರ [ಶಾಲಾ ಶಿಕ್ಷಕರು, ಅಧ್ಯಾಪಕರು, ಮಾಸ್ತರರು] ಜೀವನದ
ಮೇಲೆ ಕನ್ನಡದಲ್ಲಿ ಸಣ್ಣ ಕತೆ, ಕಾದಂಬರಿ, ಏಕಾಂಕ ನಾಟಕಗಳು ಈಗಾಗಲೇ ಪ್ರಕಟ
ವಾಗಿವೆ. ಅವುಗಳಲ್ಲಿ ನನಗೆ ಬಹಳ ಮೆಚ್ಚುಗೆಯಾದಂಥವು: ಕಾರಂತರ 'ಮುಗಿದ
ಯುದ್ಧ' ಮತ್ತು ಮಿರ್ಜಿ ಅಣ್ಣಾರಾಯರ 'ರಾಮಣ್ಣ ಮಾಸ್ತರು.' ಕಾರಂತರ
ಕೃತಿಯ ತತ್ತ್ವಜ್ಞಾನವನ್ನು ಒಪ್ಪುವುದು ಸಾಧ್ಯವಾಗದೇ ಹೋದರೂ ಅದೊಂದು
ವಾಸ್ತವವಾದಿ ಪರಂಪರೆಯ ಒಳ್ಳೆಯ ಕಲಾಕೃತಿ ಎ೦ದು ಧಾರಾಳವಾಗಿ ಹೇಳಬಹುದು.
ಅಣ್ಣಾರಾಯರ ಕೃತಿಗೆ ಹಿನ್ನೆಲೆ, ೧೯೪೬ ರಲ್ಲಿ ಮುಂಬಯಿ ಪ್ರಾಂತದಲ್ಲಿ ನಡೆದ
೪೦,೦೦೦ ಪ್ರಾಥಮಿಕ ಶಿಕ್ಷಕರ ಮುಷ್ಕರ. ಅದರಲ್ಲಿ ಪ್ರಧಾನವಾಗಿರುವುದು ಉಪಾ
ಧ್ಯಾಯ ಜೀವನದ ಆರ್ಥಿಕ ಮುಖ, ರಚನೆಯಲ್ಲಿ ನೀಳ್ಗತೆಯ ಸ್ವರೂಪವನ್ನಷ್ಟೇ
ತೋರಿದರೂ ಆ ಕೃತಿ ವಾಸ್ತವವಾದಿ ಪರಂಪರೆಯದೇ ಆದ ಒಳ್ಳೆಯ ಕೃತಿ. ಇಲ್ಲಿ
ಇನ್ನೊಂದು ಕಾದಂಬರಿಯನ್ನು ಉಲ್ಲೇಖಿಸಬಹುದು. ಅದು ತ. ರಾ. ಸು. ಅವರ
'ಬೆಂಕಿಯ ಬಲೆ'. ಈ ಪುಸ್ತಕ, ಪೂರ್ಣವಾಗಿ ಅಲ್ಲವಾದರು ಹೆಚ್ಚಿನಂಶ, ಉಪಾಧ್ಯಾಯ
ಜೀವನವನ್ನು ವಾಸ್ತವಿಕವಾಗಿ ಚಿತ್ರಿಸಿದೆ.
ಇಷ್ಟಿದ್ದರೂ ವಿದ್ಯಾ ಕ್ಷೇತ್ರದಿಂದಲೇ ಈ ಕಾದಂಬರಿಗೆ ವಸ್ತುವನ್ನು ಆಯ್ದು
ಕೊಂಡಿದ್ದೇನೆ. ಇದಕ್ಕೆ ಕಾರಣ ಆ ಕ್ಷೇತ್ರದ ವೈಶಾಲ್ಯ, ಇದೊಂದೇ ಅಲ್ಲ, ಇನ್ನಷ್ಟು
ಕೃತಿಗಳಿಗೆ ಆ ಕ್ಷೇತ್ರ ವಸ್ತುವನ್ನೊದಗಿಸುವುದರಲ್ಲೂ ಸಂದೇಹವಿಲ್ಲ.
ಈ ಕಾದಂಬರಿ, ಹಲವು ಉಪಾಧ್ಯಾಯರೊಡನೆ ನನ್ನ ಒಡನಾಟದ ಹಾಗೂ
ದೀರ್ಘಕಾಲದ ಸೂಕ್ಷ್ಮ ನಿರೀಕ್ಷಣೆಯ ಫಲ. ನನ್ನ ಪಾತ್ರಗಳು ಜೀವಂತ ವ್ಯಕ್ತಿಗಳ
ವ್ಯಂಗ್ಯ ಚಿತ್ರಗಳಲ್ಲ, ಅಥವಾ ಪ್ರತಿರೂಪಗಳೂ ಅಲ್ಲ. ವಾಸ್ತವತೆಯ ಕುಂಚದಲ್ಲಿ
ಈ ಕಾಲ್ಪನಿಕ ಚಿತ್ರಗಳನ್ನು ಬರೆದಿದ್ದೇನೆ. ವಿದ್ಯಾ ಸಮಸ್ಯೆಯ ಹಿನ್ನಲೆಯಲ್ಲಿ ಮಾನವೀ
ಯವಾದ ಕಥೆಯನ್ನು ಬರೆಯಲು ಯತ್ನಿಸಿದ್ದೇನೆ.
ಇತ್ತೀಚೆಗೆ, 'ದೂರದ ನಕ್ಷತ್ರ'ವನ್ನು ನಾನು ಬರೆಯುತ್ತಿದ್ದಾಗಲೆ ಬೆಂಗಳೂರಲ್ಲಿ
ಮೈಸೂರು ಸಂಸ್ಥಾನದ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ಉಪಾಧ್ಯಯರೆಲ್ಲರ
ಸಮ್ಮೇಳನ ಜರಗಿತು. ಹಿರಿಯ ವಿದ್ಯಾತಜ್ಞರೊಬ್ಬರ ಆಹ್ವಾನದ ಮೇರೆಗೆ ಸಂದರ್ಶಕ
ನಾಗಿ ಹೋಗಿ ಉಪಾಧ್ಯಾಯರ ಜತೆಯಲ್ಲಿ ಕುಳಿತು ವಿಧವಿಧದ ಭಾಷಣಗಳಿಗೆ ಕಿವಿ
ಗೊಟ್ಟೆ. ಅಲ್ಲಿ ನನ್ನ ಕಾದಂಬರಿಯ ಪಾತ್ರಗಳ ಸಾಮೂಹಿಕ ಸ್ವರೂಪವನ್ನು ಕಂಡೆ.