ಪುಟ:ನವೋದಯ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

321

ಆಕೆಯ ವಕ್ಷಸ್ಥಲವನ್ನು ಆಲಂಕರಿಸಿತ್ತು ಮಾಂಗಲ್ಯ ಸೂತ್ರ.
ಆಳು ಹೇಳಿದ:
"ನೀವು ಕಾಫಿಗೀಫಿ ಕುಡ್ಕಂಬನ್ನಿ ಬುದ್ಧಿ. ಸಾಮಾನು ನಾನು ನೋಡ್ಕೊಂತೀನಿ."
ಜಯದೇವನ ಮನಸ್ಸಿನಲ್ಲಿದ್ದುದೂ ಅದೇ ವಿಚಾರ. ಉಡುಪಿಮಾವನ ಆ
ಹೋಟೆಲಿನ ಪರಿಚಯ ಮಾಡಿಕೊಡುವೆನೆಂದು ಸುನಂದೆಗೆ ಆತ ಮಾತು ಕೊಟ್ಟಿದ್ದ
ಬೇರೆ. ಆದರೆ ಈಗ, ನಮಸ್ಕರಿಸಿದ ಪರಿಚಿತರೊಬ್ಬರು ಅಲ್ಲೇ ಇದ್ದರು. ಅವರನ್ನು
ಕರೆಯದೆ ಇಬ್ಬರೇ ಹೋಟೆಲಿಗೆ ಹೋಗುವುದು ಸಾಧ್ಯವಿರಲಿಲ್ಲ.
ಪುಣ್ಯಾತ್ಮ ನಿರಾಕರಿಸಲಪ್ಪ_ಎಂದು ಮನಸ್ಸಿನಲ್ಲೆ ಪ್ರಾರ್ಥಿಸುತ್ತ ಜಯದೇವ
ನೆಂದ:
"బన్ని."
ಎಲ್ಲಿಗೆ ಎಂಬುದನ್ನು ವಿವರಿಸಿ ಹೇಳಲಿಲ್ಲ ಆತ. ದೃಷ್ಟಿ ಮಾತ್ರ ಹೋಟೆಲಿನ
ಕಡಿಗೆ ಸರಿದು 'ಅಲ್ಲಿಗೆ' ಎಂದಿತು.
"ಬೇಡಿ ಬೇಡಿ.ಬೆಳಗ್ಗೆ ಸ್ನಾನಮಾಡದೆ ನಾನೇನೂ ತಗೊಳ್ಳೋದಿಲ್ಲ."
ಆಚಾರದ ಮಾತು ಎಂದ ಬಳಿಕ ಆಗ್ರಹದ ಪ್ರಶ್ನೆ ಎಲ್ಲಿಯದು? ಮಡಿಯವರಿಗೆ
ಮೌನವಾಗಿಯೆ ವಂದಿಸಿ, ಸುನಂದೆಯೊಡನೆ ಜಯದೇವ ಹೋಟೆಲಿನ ಕಡೆಗೆ ಸಾಗಿದ.
ಸುನಂದಾ ಕೇಳಿದಳು:
"ಯಾರೂಂದ್ರೆ ಸ್ನೇಹಿತರು?"
"ನನಗೆ ಗೊತ್ತಿದ್ದರೆ!"
"ಮತ್ತೆ! ಕಾಫಿಗೆ ಕೂಡಾ ಕರೆದಿರಿ..."
"ಅವರಾಗಿ ಮಾತನಾಡಿಸಿದಾಗ ಇನ್ನೇನು ಮಾಡೋಣ? ಆ ಊರಿನವರೇ ಇರ
ಬೇಕು ಯಾರೋ."
"ಸರಿಹೋಯ್ತು!"
ಹೆಂಗಸು ಒಳಗೆ ಬಂದಳೆಂದು ಅತ್ತ ಮುಖ ತಿರುಗಿಸಿ ಮಿಕಿಮಿಕಿ ನೋಡುವವರೇ
ಎಲ್ಲರೂ. ಹುಡುಗನೊಬ್ಬ ಬಂದು "ಹೀಗ್ಬನ್ನಿ ಸಾರ್" ಎಂದು, ಪ್ರತ್ಯೇಕವಾಗಿ
ದ್ದೊಂದು ಕೊಠಡಿಗೆ ಅವರನ್ನು ಕರೆದೊಯ್ದ.
"ಹೊಲಸು ಹೋಟೆಲು,"ಎಂದಳು ಸುನಂದಾ,ಮೂಗಿನಿಂದ ಸ್ವರ ಹೊರಡಿಸಿ.
ಆದರೆ ವಾಸ್ತವವಾಗಿ ಆ ಊರಿನ 'ಸುಂದರ' ಮುಖಕ್ಕೆ ಮೂಗುಬಟ್ಟಾಗಿದ್ದ
ಹೋಟೆಲು ಅದು.
"ಇನ್ನು ಹ್ಯಾಗಿರುತ್ತೇಂತಿದ್ದೆ?"
"ಕೆಟ್ಟ ವಾಸ್ನೆ!"
“ಒಂದು ನಿಮಿಷ ಸಹಿಸ್ಕೊ."


41