ಪುಟ:ನವೋದಯ.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

320

ಸೇತುವೆ

 ಜಾವ ದ್ಯಾವನೂರಿನಿ೦ದ ಒಂಟು ಇಲ್ಲಿಗ್ಬತ್ತದೆ."
“ಹಾಗೇನು?"ಎಂದ ಜಯದೇವ.
ನಿತ್ಯಾನಂದ ಸರ್ವೀಸಿನಲ್ಲಿ ಪ್ರವಾಸ-ಸುನಂದಾ ಅನುಭವಿಸಲು ಬಯಸಿದ್ದ ಸುಖ
ಗಳಲ್ಲೊಂದು. ಜಯದೇವ ಹಿಂದೆ ಬರೆದಿದ್ದ ಕಾಗದದಲ್ಲಿ ಆ ವಿವರವನ್ನು ಆಕೆ ಓದಿ
ದ್ದುದು, ಈಗಲೂ ಕಣ್ಣಿಗೆ ಕಟ್ಟಿತ್ತು. ಹಿಂತಿರುಗಿ ಬಂದ ಬಳಿಕ ಬಾಯ್ದೆರೆಯಾಗಿಯೂ
ಅದನ್ನು ಆತ ಬಣ್ಣಿಸಿದ್ದ. ಈಗ__
"ನಿತ್ಯಾನ೦ದ ಬಸ್ಸು ಇಲ್ವ೦ತೆ ಕಣೇ."
ಆ ಧ್ವನಿಯಲ್ಲಿತ್ತು ನಗೆಯಾಟದ ವಿಷಾದ. ಸುನಂದಾ ಮುಗುಳು ನಕ್ಕಳು.
ಅದರ ಹಿನ್ನೆಲೆ ಅರ್ಥವಾಗದ ಆಳು ಹೇಳಿದ:
"ಯಾಕ್ಬುದ್ಧೀ... ಸರ್ಕಾರಿ ಬಸ್ಸು ಪಸಂದಾಗೈತೆ. ದೊಡ್ಬಸ್ಸು ಆಕವ್ರೆ."
"ಸೀಟು ಸಿಗುತ್ತೇನಯ್ಯ?"
"ಓ..."
ಭಾರವನ್ನೆತ್ತಲು ಜಯದೇವ ನೆರವಾದ. ಒಂದೊಂದು ಸಾರೆ ಒಂದೊಂದು.
ಡಬ್ಬ ಪಾತ್ರೆಗಳ ಸದ್ದಾದಾಗ ಸುನಂದಾ ಹೌಹಾರಿ ಬಿದ್ದಳು.
"ಮೆತ್ಗಪ್ಪಾ. ಕೆಳಕ್ಕೆ ಕುಕ್ಬೇಡ."
ಹೋಟೆಲಿಗೆ ಸ್ವಲ್ಪ ದೂರದಲ್ಲೆ ಇತ್ತು ಬಸ್ಸು ನಿಲ್ಲುವ ಜಾಗ. ಅಲ್ಲಿ ಜನರ
ದೊಂದು ಗುಂಪು ನೆರೆದಿತ್ತು. ಸುನಂದೆಯೊಡನೆ ಜಯದೇವ ಅತ್ತ ಬಂದಂತೆ ಯಾರೋ
ಅಂದರು:
"ನಮಸ್ಕಾರ. ಬೆಂಗಳೂರಿಂದ ಬರೋಣವಾಯ್ತೆ?"
ಪ್ರತಿ ನಮಸ್ಕಾರ ಮಾಡುತ್ತ, ಆ ವ್ಯಕ್ತಿ ಯಾರಿರಬಹುದೆ೦ದು ಜಯದೇವ,
ನೆನಪುಗಳ ರಾಶಿಯನ್ನು ಕೆದರಿದ. ಮುಖವೇನೋ ಪರಿಚಿತವಾಗಿತ್ತು. ತಾನು ಪಾಠ
ಹೇಳಿದ್ದ ಯಾವನೋ ವಿದ್ಯಾರ್ಥಿಯ ತಂದೆ. ಯಾವುದೋ ಹೆಸರು...
ಯಾರಾದರೇನು? ಶಿಷ್ಟಾಚಾರಕ್ಕೆ ಕೊರತೆಯೆ?
"ಬೆಂಗಳೂರಿಂದ್ಲೆ ಬಂದ್ವಿ.. ತಾವು?"
"ಅರಸೀಕೆರೆಗೆ ಹೋಗಿದ್ದೆ. ಸ್ವಲ್ಪ ಕೆಲಸವಿತ್ತು... ಈಗ ನಮ್ಮೂರು ಕಡೇನೇ
ಹೊರಟಿದೀರಿ ಅಂತ ಕಾಣುತ್ತೆ."
"ಹೌದು."
ಆ ವ್ಯಕ್ತಿ"ಸಂತೋಷ" ಎಂದ. ಸುನಂದೆಯ ಕಡೆಗೊಮ್ಮೆ ನೋಡಿ ಪುನಃ
"ಸಂತೋಷ"ಎಂದ.
ಸುನಂದೆ ತಾನು ಕೈಹಿಡಿದ ಹೆಂಡತಿ_ಎಂದು ಜಯದೇವ ಆತನಿಗೆ ಬಿಡಿಸಿ
ಹೇಳುವ ಅಗತ್ಯವೇ ಇರಲಿಲ್ಲ. ಅವರು ಅನ್ಯೋನ್ಯವಾಗಿದ್ದ ರೀತಿಯೆ ಸಾರುತಿತ್ತು,
ಆ ಇಬ್ಬರೂ ನವ ವಧೂವರರೆಂಬುದನ್ನು. ಯಾವ ಸಂದೇಹಕ್ಕೂ ಎಡೆ ಇರದ ಹಾಗೆ