ಪುಟ:ನಾಸ್ತಿಕ ಕೊಟ್ಟ ದೇವರು.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಣ್ಣಿನ ಮಗ ಗನ್ನು ತಂದ

೧೯


ಮಣ್ಣೂರಿಗೆ ಮಣ್ಣೂರೇ ಅಲ್ಲಿ ನೆರೆದಿತ್ತು.
ನಿಂತು ಮುಂದೆ ಹೊರಟ ಬಸ್ಸು ಮತ್ತೆ ನಿ೦ತಿತು. ಜನ ಇಳಿದುಸ್ವಾಗತದ ದೃಶ್ಯವನ್ನು ನೋಡಿದರು. ಕಂಡಕ್ಟರ್ ಖಾಲಿ ಕ್ಯಾನನ್ನೆತ್ತಿಕೊಂಡು ಹಳ್ಳಿಯಿಂದ ನೀರು ತರುವ ನೆಪಮಾಡಿ ಸಂದಣಿಯತ್ತ ನಡೆದು
ಹೋದ.

****

ಮಣ್ಣೂರು ಬದಲಾಗಿತ್ತು. ಹಿಂದೆಂದೂ ಇದ್ದಿರದ ಐಕಮತ್ಯವಿತ್ತುಈಗ.
ಅಮ್ಮ ಅಂದಳು
"ಸೀತಮ್ಮನ ಸೊಸೆಯಾಗಿ ಕರಕೋತೀವಿ ಅಂತ ಎಷ್ತೋ ಜನಕೇಳವರೆ.”
ನಾಚಿ ಚೇತರಿಸಿಕೊಂಡ ಸೀತಮ್ಮ ಅ೦ದಳು :
" ಯುದ್ಧ ಮುಗಿದ್ಮ್ಯಾಕೆ ನಿನಗೂ ಎಣ್ಣು, ಕೊಡ್ತಾರಂತೆ ಗುಲ್ಡು.”
"ಸುಮ್ಕಿರು !”
ಅಮ್ಮ ಅಂದಳು :

" ಸರಕಾರ ನಮಗೆ ಹೊಲ ಕೊಡುತ್ತಂತಪ್ಪ.”
ಗುಲ್ಡು ತಂದ ಚೀಣೀ ಗನ್ನು ಮಣ್ಣೂರಿನ ಮನೆ ಮಾತಾಯಿತು.
ಅದನ್ನು ಹಟ್ಟಿಯ ಒಳಗಿನ ಕೊಠಡಿಯಲ್ಲಿಟ್ಟು ಗುಲ್ಡು ಬೀಗ ತಗಲಿ ಸಿದ, ದೃಷ್ಟಿಯಾಗದಿರಲಿ ಎಂದು.
... ಮಾರನೆಯ ಸಂಜೆ ಶಾಲೆಯ ಆವರಣದಲ್ಲಿ ಮೇಷ್ಟ್ರ ಅದ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನೆರೆಯಿತು.
ಆ ಕಲರವದ ಕಡೆಗೆ ಮದುವೆಯ ಗಂಡಿನಂತೆ ಗುಲ್ಡುವನ್ನು ಕರೆದುತಂದರು.

ಬೊಂಬುಗಳ ಸಣ್ಣ ಅಟ್ಟಣಿಗೆಯ ಮೇಲೆ ಅದೇನನ್ನೋ ಇರಿಸಿಶಾಲು ಹೊದಿಸಿ ಮುಚ್ಚಿದ್ದರು.

ಕ್ಯಾಮರಾ ಇರಬೇಕು ಎಂದುಕೊಂಡ ಗುಲ್ಡು.
ವಾದ್ಯಗಳು ಮೊಳಗುತ್ತಿದಾಗ ಸಭೆಯ ಅಧ್ಯಕ್ಷರು ಶಾಲನ್ನು ಎತ್ತಿದರು.