ಪುಟ:ನಾಸ್ತಿಕ ಕೊಟ್ಟ ದೇವರು.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ನಾಸ್ತಿಕ ಕೊಟ್ಟ ದೇವರು

ದಾರಿ ಮುಗಿಯುತ್ತು ಬಂತು.
ಆ ಗುಡ್ಡ ದಾಟ ಆಚೆಗಿಳಿದರೆ.
ಫಸ್ಟ್ ಗೇರಿನಲ್ಲಿ ಬಸ್ಸು ಹೊರಟಿತು, ಕೊರ್ಯೋ ಎಂದು ಸದ್ದುಮಾಡುತ್ತ.
ಗುಡ್ಡ ದಾಟಿದಾಗ—
ಒಬ್ಬರೆಂದರು:
"ಇಲ್ಲೇನಪ್ಪಾ ಜಾತ್ರೆ ಇದು?”
[ಜಾತ್ರೆ? ಹಳ್ಳಿಯ ಜಾತ್ರೆಗೆ ಇನ್ನೂ ತಿಂಗಳಿದೆ.]
"ಯಾರೋ ಮಿನಿಸ್ಟರು ಬರ್ತ್ತೈರೆಬೆಕು. "ಅಕೋ ಬಾವುಟ.”
ಅಲಂಕರಿಸಿದ ಎತ್ತಿನ ಬಂಡಿಗಳು ಹಲವು. ಬಾವುಟ ವಾದ್ಯ...
ಬಸ್ಸು ನಿಂತಿತು.
"ಎಲಾ! ಬಸ್ಸಿನ ಕಡೆಗೇ ಓಡಿ ಬರ್ತಿದರಲ್ಲಾ."
ಕಂಡಕ್ಟರೆಂದ :
"ಮಣ್ಣೂರ್!”
ಇಳಿಯಲಿದ್ದವನು ಸಿಪಾಯಿಯೊಬ್ಬನೇ.
ಹಲವರು ಯೋಚಿಸಿದರು :
"ಈತನಿಗೋಸ್ಕರ ಇರಲಾರದು ಈ ಸ್ವಾಗತ."
ಆತನಿಗೋಸ್ಕರವೇ!
ಜನ ಓಡಿ ಬರುತ್ತಿದ್ದರು-ಮಾರಪ್ಪ,ಈಶ್ವರಪ್ಪ,ರಂಗಣ್ಣ,ಶಾಲೆಯಮೇಷ್ಟ್ರು...
ಸೀತಮ್ಮ, ಅಮ್ಮ....
[ಎಲ ಎಲಾ!]
ಕೈಯಲ್ಲಿ ಹಾರಗಳು.
ಜಯಕಾರ.
"ಭಾರತಮಾತೆಗೆ ಜಯವಾಗಲಿ!"
ಗುಲ್ಡು ಬೀರಣ್ಣನಿಗೆ ಜಯವಾಗಲಿ!”
ಗುಲ್ಡು ತನ್ನನ್ನು ತಾನೇ ನಂಬದಾದ. ಕತ್ತಿನ ನರಗಳು ಬಿಗಿದುವು. ಉಸಿರು ಕಟ್ಟಿತು.