ಪುಟ:ನಾಸ್ತಿಕ ಕೊಟ್ಟ ದೇವರು.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಣ್ಣಿನ ಮಗ ಗನ್ನು ತೆoದ

೧೭




"ಹಾಗನ್ನಬಾರದು ಬೇಟಾ! ಹೋಗಿ ಬಾ. ನೀನು ಬರೀ ಅಂತ ನಿಮ್ಮೂರಿಗೆ ತಂತಿ ಕೊಡ್ತೀನಿ."

****

ಡಕೋಟಾ ವಿಮಾನ ಗುಲ್ಡುವನ್ನೂ ಜೊತೆಗೆ ಬೇರೆ ಹತ್ತೊಂಬತ್ತು ಜನರನ್ನೂ ಕಲ್ಕತ್ತೆಗೆ ತಂದುಬಿಟ್ಟಿತು. ಅಲ್ಲಿಂದ ಮದರಾಸಿಗೆ, ಮುಂದೆ ಬೆಂಗಳೂರಿಗೆ, ಬಳಿಕ ಮಂಡ್ಯಕ್ಕೆ.
ಸಿಪಾಯಿ ಉಡುಗೆಯ ಯುವಕ; ಕುಡಿ ಮಿಾಸೆ ಮುಖದ ಮೇಲೆ. ಜಗತ್ತನ್ನು ದಿಟ್ಟನೋಟದಿಂದ ನೋಡುವ ಸಾಮಥ್ಯ. ಭರಣಗಳೇನೋ ಎಂಬಂತೆ ಒಂದು ಗಂಟನ್ನು'ಭದ್ರವಾಗಿ ಹಿಡಿದಿದ್ದ ಠೀವಿ.
“ ಅದೇನು ?”
__ಕೆಲವರು ಕೇಳಿದರು.
"ಏನಿಲ್ಲ."
__ಉತ್ತರ.
"ಗನ್ನೇ ಇರಬೇಕು."
__ಊಹೆ.

****

ಊರು ಬಸ್ಸು ಮಂಡ್ಯ ಬಿಟ್ಟಿತು. ಧೂಳೇಳುವ ಮಣ್ಣು ದಾರಿ ಮಣ್ಣೂರಿಗೆ.
ಇಲ್ಲ, ಅವನ ಹಳ್ಳಿಯವರೊಬ್ಬರೂ ಇರಲಿಲ್ಲ ಬಸ್ಸಿನಲ್ಲಿ.
ಗ್ರಾಮದಿಂದ ಯಾರೂ ಈ ದಿನ ಹೊರಬಿದ್ದೇ ಇಲ್ಲವೇನೋ.[ಯುದ್ಧ ಅ೦ತ ಹೆದರೊ೦ಡಿರಬೇಕು ನನ್ಮಕ್ಳು] ಸೀತಮ್ಮನ, ತನ್ನ ಅಮ್ಮನ, ನೆನಪುಗಳು ಗುಲ್ಡುವನ್ನು ಕಾಡಿದವು.
[ಏನೇ ಆಗಲಿ, ಆದಷ್ಟು ಬೇಗ ವಾಪಸು ಹೊರಟ್ಟಿಡ್ಬೇಕು, ಬೆಂಗ ಳೂರಲ್ಲಿ ದಿವಸ ಕಳೆದು ಲೀವ್ ಪೀರೆಡ್ ಮುಗಿಸಿದರಾಯ್ತು.]
ಎದೆ ಸುಮ್ಮನೆ ಹೊಡೆದುಕೊಳ್ಳುತ್ತಿತ್ತು.
ಕಂಡಕ್ಟರಿಗೆ ವಿಷಯ ತಿಳಿಯುವ ಚಪಲ. ಬಾಯಿ ಬಿಚ್ಚಿದೆನೋ ಯುದ್ದದ ಕಥೆಯನ್ನೆಲ್ಲ ಹೇಳಬೇಕು. ಮಾತನಾಡುವ ಮನಸ್ಸಿಲ್ಲ, ಗುಲ್ಡುಗೆ.
[೨]