ಪುಟ:ನಾಸ್ತಿಕ ಕೊಟ್ಟ ದೇವರು.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೫೧

"ಅವನು ನಿನ್ನ ಅಣ್ಣ ಅಲ್ವಾ?”
“ಹೌದು ! ಅల్ల ಅಂತಾರಾ? "
ಅಮ್ಮಾವ್ರ ಬಾಯಿ ಕಟ್ಟಿಹೋಯಿತು.
ಮಲ್ಲಿ ಮತ್ತೂ ಒಂದು ಮಾತು ಅಂದಳು :
"ನೀವು ಎ೦ಗಾರೂ ಒಬ್ರೇ ಇರ್ತೀರೋ ಅಮ್ಮಾವ್ರೇ ... ದೆವ್ವಗಿವ್ವ ಬರ್ತೇತೇನೋಂತ ಎದರ್ಕೇನೇ ಆಗ್ತೈತೆ."
"ಹೋಗು ನಿನ್ನ ಕೆಲಸ ಮಾಡು.”
ಆ ಹಗಲು ನಾಗಪ್ಪ ಕಛೇರಿಗೆ ಹೋಗಲಿಲ್ಲ. ಅವನಿಗೆ ಬಂಗಲೆ ಡ್ಯೂಟಿ .
ಅಡುಗೆಯ ನಂಜಪ್ಪನನ್ನು ವೀಣಾ ಪ್ರಶ್ನಿಸಿದರು:
"ರಾತ್ರಿ ನಿನಗೇನಾದರೂ ಸಪ್ಪಳ ಕೇಳಿಸ್ತಾ?”
"ಒಮ್ಮೆ ಅಡುಗೆಮನೆ ಬಾಗಿಲು ಹಾಕಿ ಮಲಕೊಂಡೆ ಅಂದ್ರೆ ನನಗೆ ಈ ಲೋಕದ ಗ್ಯಾನಾನೆ ಇರೋದಿಲ್ಲ, ಅಮ್ಮಾವ್ರೆ. .. "ಎ೦ದ ನಂಜಪ್ಪ. ಅದು ನಿಜವಾದ ಸಂಗತಿ .
ಸ್ವಹಿತ ರಕ್ಷಣೆಗಾಗಿ ಮುಂದೆ ತಾನಿಡಬೇಕಾದ ಹೆಜ್ಜೆ ಯಾವ ದಿಕ್ಕಿನಲ್ಲೆಂಬುದನ್ನು ಆ ಸಂಜೆಯೊಳಗಾಗಿ ನಾಗಪ್ಪ ನಿರ್ಧರಿಸಿದ.
ಅಮಾವಾಸ್ಯೆಯನ್ನು ಇದಿರುನೋಡುತ್ತ ಚಂದ್ರ ಆಗಲೇ ಒಂದು ವಾರ ಕಳೆದಿದ್ದ. ನಡು ಇರುಳಿನವರೆಗೂ ಕಗ್ಗತ್ತಲು. ನಾಗಪ್ಪನ ಯೋಜನೆಗೆ ಇದು ಅನುಕೂಲವೇ ಆಗಿತ್ತು
ಆ ರಾತ್ರಿ ವಿಕಾರ ಧ್ವನಿಗಳು ವೀಣಾಗೆ ಕೇಳಿಸಿದುವು. ಛಾವಣಿಯ ಮೇಲೆ ಕಲ್ಲುಗಳು ಬಿದ್ದುವು. ಅವರು ಕಿರಿಚಿಕೊಂಡೆದ್ದು ದೀಪ ಹಾಕಿದರು. ಗಾಢನಿದ್ರೆಯಲ್ಲಿದ್ದಂತೆ ನಟಿಸುತ್ತಿದ್ದ ಮಲ್ಲಿಯನ್ನೆಬ್ಬಿಸಿದರು. ನಾಗಪ್ಪ ಓಡಿ ಬ೦ದ. ಅಮ್ಮಾವ್ರು ಕೊಟ್ಟ ಟಾರ್ಚು ಹಿಡಿದು ಮನೆಯ ಸುತ್ತಲೆಲ್ಲ ಹೋಗಿ ನೋಡಿದ.
" ಏನೂ ಇಲ್ಲ, ಅಮ್ಮಾವ್ರೆ... "
ವೀಣಾ ಒರಗು ಕುರ್ಚಿಯ ಮೇಲೆ ಕುಸಿದು ಕುಳಿತರು.
“ ಅಯ್ಯೋ! ನನ್ನ ಕಿವಿಯಾರೆ ಕೇಳಿದೆನಲ್ಲ ! ”
"ಎದರ್ಬೇಡಿ, ಅಮ್ಮಾನ್ರೆ. ನಾನಿದೀನಿ. ಮನಿಕೊಳ್ಳಿ.”