ಪುಟ:ನಾಸ್ತಿಕ ಕೊಟ್ಟ ದೇವರು.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಪ್ಪು ಎಣಿಕೆ

೫೩

ಅಮ್ಮಾವ್ರು ಮೂರ್ಛೆ ಹೋದರು. ಮಲ್ಲಿ ಅವರ ಮುಖಕ್ಕೆ ನೀರು ಹನಿಸಿ ಪ್ರಜ್ಞೆ ಮರಳುವಂತೆ ಮಾಡಿದಳು.
ನಂಜಪ್ಪನೊಡನೆ ನಾಗಪ್ಪನೆಂದ:
"ಭೂತಚೇಷ್ಟೆಯೇ, ಸಂಸಯ ಇಲ್ಲ. ನನ್ನ ಗುರುತಿನ ಒಬ್ಬ ಮಂತ್ರವಾದಿ ಅವ್ನೆ. ನಾಳೆಯೇ ಕರಸ್ತೀನಿ. ಭೂತ ಇನ್ನು ಯಾವತ್ತೂ ಈ ಕಡೆಗೆ ಹಾಯದ ಹಾಗೆ ಮಾಡ್ತೀನಿ.”
"ಅಷ್ಟು ಮಾಡಪ್ಪ," ಎಂದ ಅಡುಗೆಯವನು.
ತಗ್ಗಿದ ಸ್ವರದಲ್ಲಿ ನಾಗಪ್ಪನೆಂದ :
"ಆದರೆ ಒಸಿ ಖರ್ಚಾಗ್ತದೆ.”
"ಎಷ್ಟು ?"
"ನೂರು ರೂಪಾಯಿ ಆಗ್ಬೋದು.”
"ನಾಗಪ್ಪ, ಏನಾದರೂ ಮಾಡಿ ನನ್ನ ಉಳ್ಸು, ಅವರು ಬರೋತನಕ ನಾನು ಬದುಕಿರ್ತೀನೋ ಇಲ್ವೋ . . . ಖರ್ಚಿನ ಯೋಚ್ನೆ ನೀನು ಮಾಡ್ಬೇಡ.”
"ಇಲ್ಲಾ ಅಮ್ಮಾವ್ರೆ, ಇವತ್ತೇ ಕಡೇ ರಾತ್ರೆ. ಭೂತದ ಆಟ ಆಯ್ತೂಂತ ಇಟ್ಕೊಳ್ಳಿ. ನಾಳೆ ಬೆಳಿಗ್ಗೆನೇ ಎಲ್ಲಾ ಮಾಡಿಸ್ತೀನಿ. ಇನ್ನು ನೀವು ಮನಿಕೊಳ್ಳಿ. ನಾನು ಕಾವಲು ಕುಂತಿರ್ತೀನಿ.”
ವೀಣಾ ಮಲಗಲಿಲ್ಲ. ಕಂಬಳಿ ಹೊದೆದು ನಡುಗುತ್ತ ಕುಳಿತುಕೊಂಡೇ ಉಳಿದ ಇರುಳನ್ನು ಕಳೆದರು.
ನಸುಕು ಹರಿಯುತ್ತಲೇ ನಾಗಪ್ಪ ಚಟುವಟಿಕೆ ತೋರಿದ. ಭೂತಕ್ಕೆ ಶಾ೦ತಿ ಮಾಡುವ ಸಡಗರ. ಅಂದೇ ಆಗಲೇ ಅದಾಗಬೇಕು. ಮಾರನೆಯ ದಿನಕ್ಕೆ ಮುಂದೂಡುವಂತಿರಲಿಲ್ಲ.
ಮಂತ್ರವಾದಿ బంದು బంಗಲೆಯ ಹಿಂబದಿಯಲ್ಲಿ అಕ್ಕಿ, ತೆಂಗಿನಕಾಯಿ, ಕುಂಬಳಕಾಯಿಗಳನ್ನಿರಿಸಿಕೊಂಡು ಹೋಮ ಧೂಮಗಳನ್ನು ಪ್ರಾರಂಭಿಸಿದ.
"ಅಮ್ಮಾವ್ರೆ, ನೀವು ಸ್ನಾನಮಾಡಿ ಒಳಗೆ ಕುಂತ್ಬಿಡಿ. ಎಲ್ಲಾ ಮುಗಿದ್ಮ್ಯಾಕೆ ಬಸ್ಮ ಈಟು ಕೊಡ್ತವ್ನೆ. ಅದನ್ನು ಅಚ್ಕೊಂಡು ಊಟ ಮಾಡಿ ಮನಿಕ್ಕೊಂಡ್ಬಿಡಿ—" ಎ೦ದ ನಾಗಪ್ಪ ಒಡತಿಯೊಡನೆ.