ಪುಟ:ನಾಸ್ತಿಕ ಕೊಟ್ಟ ದೇವರು.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ನಾಸ್ತಿಕ ಕೊಟ್ಟ ದೇವರು

ಶಾಂತಿ ಹೋಮದ ಅವಶೇಷಗಳು ಅಲ್ಲಿದ್ದುವು.
ನಾಗಪ್ಪ ಕೈಜೋಡಿಸಿ ನಿಂತಿದ್ದ.
" ಎಲ್ಲಾ ಮುಗಿಯಿತೇ ?" ಎಂದು ಉಮಾಪತಿ ಶಾಂತವಾಗಿ ಕೇಳಿದರು.
"ಹೂಂ ಬುದ್ದಿ."
['ಗೆದ್ದೆ'-]
" ಅಮ್ಮಾವ್ರಿಗೆ ಪ್ರಸಾದ ಕೊಡಿಸು.”
ಮರೆಯಲ್ಲಿದ್ದ ಮಂತ್ರವಾದಿಯನ್ನು ಉಮಾಪತಿ ದಿಟ್ಟಿಸಿದರು.
ನಾಗಪ್ಪ ಸಾಹೇಬರನ್ನು ಹಿಂಬಾಲಿಸಿ ಭಸ್ಮದೊಡನೆ ಬಂದ.
" ತಗೋ, ವೀಣಾ,' ಎಂದರು ಉಮಾಪತಿ.
ವೀಣಾ ನಡುಗುವ ಬೆರಳುಗಳಿ೦ದ ಚಿಟಿಕೆ ಭಸ್ಮ ತೆಗೆದುಕೊಂಡು ಹಣೆಗೆ ಮುಟ್ಟಿಸಿದರು.
ಉಮಾಪತಿ, ಒಂದು ಚೆಕ್ ಬರೆದುಕೊಟ್ಟ ಡ್ರೈವರನ್ನು ಬ್ಯಾಂಕಿಗೆ ಕಳುಹಿಸಿ ಹಣ ತರಿಸಿದರು.
ನೂರು ರೂಪಾಯಿಗಳನ್ನೆಣಿಸಿ ನೋಟುಗಳನ್ನು ನಾಗಪ್ಪನಿಗೆ ಕೊಡ ಬ೦ದರು.
" ಬ್ಯಾಡಿ ಬುದ್ದೀ. ಮಂತ್ರವಾದಿ ನನ್ನ ಪರಿಚಿತ. ಅವನಿಗೆ ಯೋಳ್ತೀನಿ,” ಎಂದ ನಾಗಪ್ಪ,
" ಛೆ-ಛೆ! ತಗೋ. ಕೊಟ್ಬಿಡು.”
ನಾಗಪ್ಪ ಹಣ ಪಡೆದಮೇಲೆ ಸಾಹೇಬರೆಂದರು:
" ನಾಲ್ಕು ದಿವಸ ಬಹಳ ಕಷ್ಟಪಟ್ಟಿ. ನೀನಿನ್ನು ಮನೆಗೆ ಹೋಗು. ನಾಳೆ ಕಚೇರಿಗೆ ಬಾ.”
ಸಾಹೇಬರ ಸ್ನಾನವಾದ ಮೇಲೆ ದಂಪತಿಗಳು ಊಟಮಾಡಿದರು. ಊಟವಾದೊಡನೆಯೇ ಪವಡಿಸಿದ ವೀಣಾ ಘಂಟೆಗಟ್ಟಲೆ ಎಳೆಯ ಮಗುವಿನಂತೆ ನಿದ್ರಿಸಿದರು. ಉಮಾಪತಿಗೆ ಮಾತ್ರ ಮಂಪರು ಬಾಧೆಯೂ ಇರಲಿಲ್ಲ.

****