ಪುಟ:ನಾಸ್ತಿಕ ಕೊಟ್ಟ ದೇವರು.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಾವ ಜನ್ಮದ ಶಾಪ?

೮೯

" ನಾನು ಹೇಳೋದನ್ನು ಇಷ್ಟು ಕೇಳ್ತೀಯೇನಯ್ಯ? ನೀನು ಬೆಂಗಳೂರಿಗೆ ವಾಪಸು ಬಂದು ಇಲ್ಲೇ ನೆಲೆಸಬೇಕೂಂತ ನನ್ನ ಅಪೇಕ್ಷೆ. ಇರೋದಕ್ಕೆ ಸ್ವಂತದ ಮನೆ ಇದೆ. ಇಂಜಿನಿಯರ್ ಕೆಲಸ ఇಲ್ಲಿಯೇ ಸಿಕ್ಕುತ್ತೆ. ಇನ್ನೇನಪ್ಪ? ಬೇಕಿದ್ದರೆ ವಿದೇಶಕ್ಕೂ ಹೋಗಿ ಬರಬಹುದು, ನಿಧಾನವಾಗಿ.”
ಉತ್ತರ ರೂಪವಾಗಿ ಪ್ರಸಾದ ಸಣ್ಣನೆ ನಕ್ಕ.
"ಎಲಾ! ನಗ್ತೀಯಲ್ಲ ನೀನು? ನಾನೇನು ಡೊಂಬರಾಟ ಆಡ್ತಿದೀನಾ?"
"ಇಲ್ಲ, ಅಣ್ಣಯ್ಯ. ನನ್ನನ್ನು ನೀವು ಅರ್ಥ ಮಾಡ್ಕೊಂಡಿಲ್ಲ.”
"ನೀನು ನನ್ನನ್ನು ಅರ್ಥಮಾಡ್ಕೊಂಡ್ಬಿಟ್ಟಿದೀಯೋ?”
"ಹಾಗೇಂತ ತಿಳಕೊಂಡಿದೀನಿ."
ಮೌನದ ಕಂದಕ. ತಮ್ಮೊಳಗೇ ನರಳುತ್ತ ವಿಶ್ವನಾಥಯ್ಯ ಅನ್ನುದ ದಾಟಿದರು. ಜಗಲಿಯ ಗೋಡೆಯಲ್ಲಿ ಗಾರೆ ಕಿತ್ತು ಬಂದಿದ್ದ ಕಡೆಗೆ ಬಿರುನೋಟ ಬೀರಿ ಅವರೆಂದರು :
"ಇನ್ನೊಂದು ವಾರದೊಳಗೆ ಹೆಣ್ಣು ಗೊತ್ಮಾಡ್ತೀನಿ. ನಾಲ್ಕೈದು ಜನ ಕೇಳ್ಕೊಂಡು ಹೋಗಿದಾರೆ. ಹುಡುಗಿಯರನ್ನ ನೀನೂ ನೋಡು. ಮದುವೆ ಮಾಡ್ಕೊಂಡು ಜರ್ಮನಿಗೋ ವಿಲಾಯತಿಗೋ ಎಲ್ಲಿಗೆ ಬೇಕಾದರೂ ಹೋಗು."
ಪ್ರಸಾದನ ಮುಖ ಗಂಭೀರವಾಯಿತು.
"ಅದು ಸಾಧ್ಯವಿಲ್ಲ ಅಣ್ಣಯ್ಯ,” ಎಂಬ ಪದಗಳನ್ನು ಹೊರಹಾಕಿ, ಅವನ ತುಟಿಗಳು ಒಂದನ್ನೊಂದು ಬಲವಾಗಿ ಆತುಕೊಂಡುವು.
ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ವಿಶ್ವನಾಥಯ್ಯ ಮಗನತ್ತ ಹೊರಳಿದರು.
ಅವರ ನೋಟದೆದುರು ಪ್ರಸಾದ ತುಸು ಬಾಗಿದ.
ಅವನೆಂದ :
“ನಿಮ್ಮ ಮನಸ್ಸು ನೋಯಿಸ್ತಿರೋದಕ್ಕೆ ವ್ಯಥೆಯಾಗ್ತಿದೆ, ಅಣ್ಣಯ್ಯ. ಆದರೆ ನಾನೇನೂ ಮಾಡುವಂತಿಲ್ಲ."
"ಸತ್ತಾಗ ಗಂಗೋದಕ ?”