ಪುಟ:ನಾಸ್ತಿಕ ಕೊಟ್ಟ ದೇವರು.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಯಾವ ಜನ್ಮದ ಶಾಪ ?

೯೩

"ಬುದ್ಧಿವಂತ! ತಿಳಕೊಂಡ್ಬಿಟ್ಟೆಯಲ್ಲ . . .”
ಪ್ರಸಾದ ನಿಟ್ಟುಸಿರುಬಿಟ್ಟ. ಬಟ್ಟೆ ಬದಲಿಸಿ, ಬೂಟುಗಳೊಳಕ್ಕೆ ಕಾಲು ಚೀಲ ಧರಿಸಿದ - ಪಾದಗಳನ್ನು ತುರುಕಿ, ಲೇಸ್ ಕಟ್ಟಿ, ಸೂಟ್ಕೇಸಿನಿಂದ ಪಾಕೆಟನ್ನೆತ್ತಿಕೊಂಡ. ಹೊರಗೆ ಚಂದ್ರಶೇಖರಯ್ಯನವರ ಧ್ವನಿ ತನ್ನ ವಿಹಾರವನ್ನು ನಡೆಸಿಯೇ ಇತ್ತು.
"ನೀವು ಮಗನನ್ನು ಇಂಜಿನಿಯರಿಂಗ್ ಓದಿಸಿ ಒಳ್ಳೆ ಕೆಲಸ ಮಾಡಿದ್ರಿ, ವಿಶ್ವನಾಥಯ್ಯನವರೆ. ನನ್ನ ಮೂರನೆಯವನಿಗೆ ಸೀಟು ಸಿಗುತ್ತೇನೋಂತ ಈ ವರ್ಷ ನೋಡಿದೆ. ಸಿಗಲಿಲ್ಲ. ಯಾವುದಕ್ಕೂ ಅದೃಷ್ಟ ಬೇಕು. ಘಳಿಗೆ ಕೂಡಿಬರಬೇಕು.”
ಮಾತಿನ ಪ್ರವಾಹದ ನಡುವೆ ಕಲ್ಲುಬಂಡೆಯಾಗಿ ಕುಳಿತಿದ್ದರು ವಿಶ್ವನಾಥಯ್ಯ.
ಬೂಟುಗಳ ಸಪ್ಪಳ ಕೇಳಿಸಿತು. ಪ್ರಸಾದ ಹೊರಗೆ ಬಂದ.
ಈತ ಹೊರಟೇಬಿಟ್ಟನಲ್ಲ - ಎಂದು ಚಂದ್ರಶೇಖರಯ್ಯ ವಿವಂಚನೆಗೆ ಗುರಿಯಾದರು. ಉಗುಳು ನುಂಗಿ ಹಲ್ಲುಗಳನ್ನೆಲ್ಲ ತೋರಿಸುತ್ತ ಅವರೆಂದರು:
"ನಮಸ್ಕಾರ ಪ್ರಸಾದು. ನನ್ನ ನೆನಪಿದೆಯೇನಪ್ಪ ?
"ನಮಸ್ಕಾರ ಸರ್,” ಎಂದ ಪ್ರಸಾದ.
ತಂದೆಯತ್ತ ತಿರುಗಿ, "ರೈಲ್ವೆ ಸ್ಟೇಷನಿಗೆ ಹೋಗ್ಬರ್ತೀನಿ,” ಎಂದು ನುಡಿದು, ಮೆಟ್ಟಲಿಳಿದುನಡೆದೇಬಿಟ್ಟ.
ಚಂದ್ರಶೇಖರಯ್ಯ ತಡವರಿಸುತ್ತ ಅಂದರು:
"ಇದೇನು ಈಗ ಸ್ಟೇಷನಿಗೆ?”
ವಿಶ್ವನಾಥಯ್ಯ ತುಟಿತೆರೆದು ಅಂದರು:
"ಟಿಕೆಟು ಕೊಳ್ಳೋದಕ್ಕೆ.”
"ಟಿಕೆಟು? ಎಲ್ಲಿಗೆ?”
"ಜರ್ಮನಿಗೆ."
"ಜರ್ಮನಿಗೆ?”
"ಹ, ಜರ್ಮನಿಗೆ! ಪ್ರಸಾದ ಉಚ್ಚಶಿಕ್ಷಣಕ್ಕೆ ಹೋಗ್ತಾನೆ.”
"...ಹೌದೆ? – ಸರಿ . . . ಮದುವೆ ಮಾಡ್ಕೊಂಡೇನೇ...”
"ಚಂದ್ರಶೇಖರಯ್ಯ, ಆ ಮಾತು ಬಿಟ್ಬಿಡಿ. ಪ್ರಸಾದ ಈಗ ಮದುವೆ