ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೧೩೩
ಮಗನನ್ನು ಎತ್ತಿಕೊಂಡರೆಂದು ಅವಳಿಗೆ ಸಂತೋಷವಾಯಿತು.
ದೊಡ್ಡಮ್ಮ ಅಂದರು : " ಬಾ ಶ್ರೀಪಾದೂ, ನಿನ್ನ ತಾತ ಊಟ ಮಾಡ್ಲಿ..." " ಗೋಪಾಲು– ಪದ್ಮ ಬರಲಿ ಆಗದೆ?" ಎಂದರು ಶ್ರೀನಿವಾಸಯ್ಯ. " ಅವರು ಆಮೇಲೆ ಊಟ ಮಾಡ್ತಾರೆ. ನೀನು ಕೂತ್ಕೋ." " ಹುo." ಶ್ರೀಪಾದ ದೊಡ್ಡಮ್ಮನ ಮಡಿಲಿಗೆ ಹೋದ. ಶ್ರೀನಿವಾಸಯ್ಯ ಎಲೆಯ ಮುಂದೆ ಕುಳಿತರು. [ಮನೆಯಲ್ಲಿ ತಟ್ಟೆಗಳಿದ್ದುವು. ಆದರೆ,
ಬೇಕು ಬೇಕೆಂದಾಗ ಎಲೆ ಕತ್ತರಿಸಲು ಬಾಳೆಯ ತೋಟವೇ ಇದ್ದಾಗ ತಟ್ಟೆಗಳನ್ನು ಯಾರು ಮುಟ್ಟುತ್ತಿದ್ದರು ?] ದೊಡ್ಡಮ್ಮ ಶ್ರೀಪಾದನೊಡನೆ ಮಗನ ಎದುರುಗಡೆ ಗೋಡೆಗೊರಗಿ ಕುಳಿತರು.
ಭಾಗೀರಥಿ ಬಡಿಸಿದಳು. " ನಗರಕ್ಕೆ ಹೋದೆ. ನೋಡ್ಕೊಂಡು ಬಂದೆ. ನಿನಗೆ ತೃಪ್ತಿಯಾಯ್ತು ತಾನೆ?”
ಎಂದರು ದೊಡ್ಡಮ್ಮ.
" ತೃಪ್ತಿ ಅಂತಲೇ ಅನ್ನೋಣ. ಕಾಲ ಮೊದಲಿದ್ದ ಹಾಗೆ ಈಗ ಇಲ್ಲ. ಹಳ್ಳಿಯ
ಸಂಬಂಧವೇಬೇಕು ಅಂದರೆ ಆಗುತ್ಯೆ?"
" ನಿಜ, ಅನ್ನು." " ಹುಡುಗೀರನ್ನ ನೀನು ನೋಡೋದು ಬೇಡ್ವೆ, ಅಮ್ಮ?" " ನಾನು ? ನಾನು ನೋಡಿ ಆಗ್ವೇಕಾದ್ದೇನು?" "ಹಾಗಲ್ಲ--” " ಏನೂ ಬೇಡ. ಪದ್ಮನನ್ನ ನೀನು ಒಮ್ಮೆ ಮೋಹನರಾಯರಲ್ಲಿಗೆ ಕರಕೊಂಡು
ಹೋಗು."
ಉಣ್ಣುತ್ತ ಶ್ರೀನಿವಾಸಯ್ಯ ಅಂದರು : " ಇನ್ನೆರಡು ತಿಂಗಳಾದ ಮೇಲೆ ಮುಹೂರ್ತಗಳಿವೆ. ಆದಷ್ಟು ಬೇಗನೆ ಮದುವೆ
ನಡೀಬೇಕೂಂತ ಅವರ ಅಭಿಪ್ರಾಯ."
" ಆಗಲಿ. ಅದಕ್ಕೇನಂತೆ ? ತಯಾರಿಗೆ ಎರಡು ತಿಂಗಳು ಸಾಕು.” " ಮದುವೆಗಳು ಒಟ್ಟಿಗೇ, ನಗರದಲ್ಲೇ, ಯಾವುದಾದರೂ ಒಳ್ಳೆಯ ಕಲ್ಯಾಣ
ಮಂಟಪದಲ್ಲಿ ಏರ್ಪಾಟು ಮಾಡ್ತಾರಂತೆ."
" ಹುಂ." ತುತ್ತನ್ನು ಗಂಟಲೊಳಕ್ಕೆ ಇಳಿಸಿ, ಸಣ್ಣಗೆ ನಕ್ಕು, ಶ್ರೀನಿವಾಸಯ್ಯ ಅಂದರು : " ಒಂದೇ ದಿವಸದ ಮದುವೆ, ಸಾಂಗೋಪಾಂಗವಾಗಿ ನಡೆಸಿಬಿಡ್ತಾರೆ." " ನನಗೆ ಗೊತ್ತಿಲ್ವೆ !" ಎಂದರು ದೊಡ್ಡಮ್ಮ, ಒಣಗಿದ್ದ ತುಟಿಗಳ ಮೇಲೆ ಕಿರುನಗೆ
ಯೊಂದನ್ನು ಮೂಡಿಸಿ.
" ಮೋಹನರಾಯರು ಏನೆಂದರು ಗೊತ್ತೆ ಅಮ್ಮ ?”