೧೩೨ ನೋವು
ಮನಸ್ಸು ಪ್ರಶಾಂತವಾಗಲು ಕಾರಣವಿಷ್ಟೆ: ಅಂತೂ ಮೈದುನರಿಗೆ ಮದುವೆ ಖಚಿತ
ವಾಯಿತಲ್ಲ. ಇನ್ನೂ ಇಬ್ಬರು ಸೊಸೆಯರು ಈ ಮನೆಗೆ ಬಂದೇ ಬರುತ್ತಾರೆ. ಅವರನ್ನು ಒಳಕ್ಕೆ ಬಿಡಲು ತಾನು ಸಿದ್ದಳಾಗಲೇಬೇಕು.
ಮುಂದೆ ಹಾಗೆ ಆದರೆ ಹೀಗೆ ಆದರೆ ಎಂದು ಚಿ೦ತಿಸುತ್ತ ಸೊರಗುವುದರ ಬದಲು,
ಆಪತ್ತುಗಳನ್ನು ಇದಿರಿಸಲು ಅಣಿಯಾಗುವುದಲ್ಲವೆ ಮೇಲು ?
ತಾನು ಕನಸಿನಲ್ಲಿ ಕಂಡಂತೆಯೇ.ಹೋಟೆಲ್ ಮಾಲಿಕನ ಮಗಳು ಒಬ್ಬಳು; ಲಾಯರಿಯ
ಮಗಳು ಇನ್ನೊಬ್ಬಳು.
ಆಕೆ ಕಂಡ ಆಕೃತಿಗಳು : ಧಡೂತಿ ಹುಡುಗಿ ಹಾಗೂ ದೊರೆಸಾನಿ. ಇದೂ ನಿಜವೇನೊ? ನೋಡಬೇಕು. ವಧು ಪರೀಕ್ಷೆ ಎಲ್ಲಿ ನಡೆಯುವುದೊ ? ದೊಡ್ಡಮ್ಮನಂತೂ ಅದಕ್ಕೋಸ್ಕರ ನಗರಕ್ಕೆ
ಹೋಗಲಾರರು. ಹೆಣ್ಣು ಹೆತ್ತವರೇ ಇಲ್ಲಿಗೆ ಕರೆದುಕೊಂಡು ಬರುವರೇನು ? ಯಾಕೆ ಬಂದಾರು? ಎರಡು ಮೈಲು ದೂರ ನಡೆಯಬೇಕು ಬೇರೆ. ಸ್ವತಃ ತನ್ನ ತಂದೆ ಕಣಿವೇ ಹಳ್ಳಿಗೆ ತನ್ನನ್ನು ಕರೆದುಕೊಂಡು ಬಂದಿರಲಿಲ್ಲ, ತೋರಿಸಲು. ಇವರು ಬರುತ್ತಾರೆಯೆ ?
ನಿಶ್ಚಿತಾರ್ಥ ಯಾವತ್ತು ? ಏನು ? ದೊಡ್ಡಮ್ಮ ಕೇಳಲಿಲ್ಲ, ಮಾವ ಹೇಳಲಿಲ್ಲ. ಬಹುಶಃ ಊಟಕ್ಕೆ ಕುಳಿತಾಗ ಆ ಪ್ರಸ್ತಾಪ ಬರಬಹುದು. " ತಾತ, ತಾತ..." "ಸ್ನಾನ ಮುಗಿಸಿ ಬಂದ ಶ್ರೀನಿವಾಸಯ್ಯನವರ ಗಮನವನ್ನು ಶ್ರೀಪಾದ ಸೆಳೆದ. " ಬಂದೆ ಮರೀ," ಎನ್ನುತ್ತ ಶ್ರೀನಿವಾಸಯ್ಯ ದೇವರ ಮನೆಗೆ ನಡೆದರು. ದೇವರ ಸನ್ನಿಧಿಯಲ್ಲಿದ್ದ ಎರಡು ನಿಮಿಷಗಳ ಕಾಲ, 'ನಗರಕ್ಕೆ ಹೋದೆ. ಆದರೆ
ಶ್ರೀಪಾದನಿಗೋಸ್ಕರ ಏನೂ ತರಲಿಲ್ಲವೇ' ಎಂದು ಕೆಡುಕೆನಿಸಿತು. ಕೊನೇ ಘಳಿಗೆಯವರೆಗೂ ವಿಷ್ಣುಮೂರ್ತಿ ಜತೆಯಲ್ಲಿದ್ದರು ; ಮಾರ್ಕೆಟಿಗೆ ಹೋಗೋಣವೆ? ಏನಾದರೂ ಕಟ್ಟಿಸಲೆ? ಎಂದರು. ತಾನು ಏನೂ ಬೇಡವೆಂದೆ. ಶ್ರೀಪಾದನಿಗಾಗಿ ಒಂದು ಆಟದ ಸಾಮಾನು ತರ ಬಹುದಿತ್ತು. 'ಸರಿ. ಇನ್ನು ಹೇಗೂ ಬರೋದು ಹೋಗೋದು ಇದ್ದೇ ಇರುತ್ತಲ್ಲ'-ಎಂದರು ವಿಷ್ಣುಮೂರ್ತಿ. ತಾನು ನಕ್ಕುಬಿಟ್ಟಿದ್ದೆ...
ಶ್ರೀನಿವಾಸಯ್ಯ ಅಂದುಕೊಂಡರು: "ಮನೆ ಬಿಟ್ಟು ಹೋಗುವ ಅಭ್ಯಾಸ ಇಲ್ಲದವರ ಗತಿಯೇ ಇಷ್ಟು." ಹೊರಗೆ ಬಂದ ಅವರು, " ಬಾ ಶ್ರೀಪಾದ, ಬಾ," ಎನ್ನುತ್ತ ಮೊಮ್ಮಗನನ್ನು ಎತ್ತಿ
ಕೊಂಡರು.
ಮಾವ ಶ್ರೀಪಾದನನ್ನ ಎತ್ತಿ ಆಡಿಸಿದರೆಂದು ಭಾಗೀರಥಿಗೆ ಸಮಾಧಾನ. ತನ್ನ
ಮಗನಿಗಾಗಿ ನಗರಕ್ಕೆ ,ಹೋದವರೆಲ್ಲ ಏನನ್ನಾದರೂ ತರುತ್ತಾರೆ-ಎಂದು ಅವಳೆಂದೂ ನಿರೀಕ್ಷಿಸಿದವಳಲ್ಲ. ಇದ್ದ ಒಂದೆರಡು ರಬ್ಬರ್ ಬೊಂಬೆಗಳನ್ನು ತಂದುಕೊಟ್ಟವನು ಪದ್ಮ. ಶ್ರೀಪಾದ ಒಂದನ್ನು ಹೊಸತಾಗಿ ಮೂಡಿದ್ದ ಹಲ್ಲುಗಳಿಂದ ಕಚ್ಚಿ ಹರಿದು ಬಿಟ್ಟಿದ್ದ. ತನಗಾಗಿ ಸೀರೆ ಗೀರೆ... ಅದೆಲ್ಲಾ ಮಾವ ತರುತ್ತಾರೆಯೆ ?
ಅಂತಹ ಯಾವ ಯೋಚನೆಯನ್ನೂ ಮಾಡಲಿಲ್ಲ ಭಾಗೀರಥಿ. ಆದರೆ ಮಾವ, ತನ್ನ