ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನೋವು ೧೩೧
" ಹೂಂ,” ಎಂದರು ದೊಡ್ಡಮ್ಮ. ಆದರೆ ಅವರು ತಮ್ಮದೇ ಯೋಚನೆಯ
ಜಾಡು ಹಿಡಿದು ಸಾಗಿದ್ದರು.
ಅಡ್ಡಕ್ಕೆ ತಿರುಗಿ ಮತ್ತೆ ಸರಿದಾರಿಗೆ ಬಂದವರಂತೆ ಅವರೆಂದರು: "ವಿಷ್ಣುಮೂರ್ತಿಯ ಮಗಳ್ನ ನೋಡಿದಿಯಾ ?” " ನೋಡಿದೆನಪ್ಪ. ಗೋವಿಂದ ಅಲ್ಲಿ ಮನೆಯವರ ಥರಾನೇ ಓಡಾಡ್ತಾನೆ. ನನ್ನ ಎದುರಿಗೆ
ಆ ಹುಡುಗಿ ಅಷ್ಟಾಗಿ ಕಾಣಿಸ್ಕೊಳ್ಲಿಲ್ಲ. ಆದರೂ. ಗೋವಿಂದ ಈ ಮೊದಲೇ ಅವಳನ್ನ ಒಪ್ಪಿರಬೇಕು ಅನಿಸ್ತು."
"ಕಲಿಕಾಲ. ಮೊನ್ನೆ ಗೋವಿಂದನೇ ಹೇಳ್ವಿಲ್ವೆ, ಮದುವೆ ಆದರೆ ಅದೇ ಹುಡುಗೀನ
ಅಂತ.”
" ಏನೋ. ಗೌರವಸ್ಥನಾಗಿ ಗೋವಿಂದ ಬಾಳಿದರೆ ಸಾಕು. " " ವಿಷ್ಣುಮೂರ್ತಿಯ ಹೋಟ್ಲು ವ್ಯವಹಾರವೆಲ್ಲ ಹ್ಯಾಗೆ ?" "ಕೈತುಂಬ ಸಂಪಾದ್ನೆ ಇದೆ. ಖರ್ಚೂ ಜೋರಾಗೇ ಇರ್ಭೇಕು.” " ಅವರ ಮನೆ ಬೇರೆ, ಹೋಟ್ಲು ಬೇರೆ-ತಾನೆ ?” “ ಹೌಹೌದು : ವಿಷ್ಣುಮೂರ್ತಿಗಳ ಹೆಂಡತೀದೇ ರಾಜ್ಯಭಾರ ಮನೇಲಿ.” " ಮಕ್ಕಳ್ನ ಸೊಂಪಾಗಿ ಬೆಳೆಸಿದಾರೋ ಅಥವಾ—” " ಅಮ್ಮ, ಹಳ್ಳಿ ಹುಡುಗೀರ ಹಾಗೆ ಅವು ದುಡಿತವೆ ಅಂತ ನೀನು ತಿಳ್ಕೊಂಡಿದ್ರೆ—" " ಇಲ್ಲವಪ್ಪ ! ಅಂಥ ಆಸೆ ಇಟ್ಟೊಂಡಿಲ್ಲ !' " ಏನೇ ಇರಲಿ, ನೀರಿಗೆ ಇಳಿದಾಯ್ತಲ್ಲ." “ ದೈವೇಚ್ಛೆ ಇದ್ದ ಹಾಗೆ ಆಗುತ್ತೆ ಶೀನ...ನೀನು ಸ್ನಾನಕ್ಕೇಳು, ಅಡುಗೆ ಆಗ್ತಾ ಬಂತು." " ಹೂನಮ್ಮ," ಎಂದು ನುಡಿದು, ಶ್ರೀನಿವಾಸಯ್ಯ ಎದ್ದರು. " ಪದ್ಮ ಮನೇಲಿಲ್ವೆ ?" ಎಂದು ಕೇಳಿದರು. ಕಿರಿಯ ಮಗನ ಬಗೆಗೆ ಅವರು ಆತ್ಮೀಯ ವಾಗಿ ವಿಚಾರಿಸಿ ಎಷ್ಟೋ ದಿನಗಳಾಗಿದ್ದುವು. " ಗೋಪೂ ಜತೆ ಹೊಲದ ಕಡೆಗೆ ಹೋದವನು ಇನ್ನೂ ಬಂದಿಲ್ಲ.” " ಹೊಲದ ಕಡೆಗೆ !? ಇದೇನು ಇಂಥಾ బుದ್ದಿ ?" " ಯಾಕೋ ಬೇಸರ; ಹೋಗ್ಬರ್ತೀನಿ–ಅಂದ." " ಸರಿ, ಸರಿ !" ಎಂದು ನುಡಿದು, ಶ್ರೀನಿವಾಸಯ್ಯ ಸ್ನಾನದ ಮನೆಗೆ ನಡೆದರು. ಸಾಧಾರಣವಾಗಿ ಇಂತಹ ಪ್ರವಾಸದಿಂದ ಬಳಲಬೇಕಾಗಿದ್ದ ಅವರು ಈ ದಿನ ಲವಲವಿಕೆ
ಯಿಂದಿದ್ದರು. ಸಂಸಾರಕ್ಕೆ ಸಂಬಂಧಿಸಿ ಮಾಡಲಾದ ಮಹತ್ವದ ನಿರ್ಧಾರಗಳು ಅವರಿಗೆ ಮನಶಾಂತಿಯನ್ನು ಒದಗಿಸಿದ್ದುವು.
ತಂದೆ ಮನೆಯಲ್ಲಿಲ್ಲದ ದಿನ ಮನೆ ದೇವರಿಗೆ ಪೂಜೆ ಸಲ್ಲಿಸುವವನು ಗೋಪಾಲ. ಈ ದಿನ
ಆ ಕೆಲಸವನ್ನು ಬೆಳಗ್ಗೆ ಎದ್ದೋಡನೆಯೇ ಅವನು ಮಾಡಿ ಮುಗಿಸಿದ್ದ...
... ಮಾವ ಸ್ನಾನದ ಮನೆಗೆ ಹೋದೊಡನೆಯೇ ಭಾಗೀರಥಿ ಒಂದೆರಡು ಒಗ್ಗರಣೆ
ಗಳನ್ನು ಕೊಟ್ಟು ಬಡಿಸಲು ಅಣಿಯಾದಳು.
ಕೆಲ ದಿನಗಳಿಂದ ಅವಳೊಳಗೆ ಭೋರ್ಗರೆಯುತ್ತಿದ್ದ ಬಿರುಗಾಳಿ ಈಗ ಶಾಂತವಾಗಿತ್ತು.