ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೧೭೨ ನೋವು
ಕೊಠಡಿಯಲ್ಲಿ ಮೌನ. ಇವರು ಪುನಃ ಮಾತು ಆರಂಭಿಸಬೇಕು ಎನ್ನುವಷ್ಟರಲ್ಲೆ ಅಲ್ಲಿಂದ ಮತ್ತೆ ಧ್ವನಿ : " ನನ್ನ ಎಳೆದ್ಹಾಕ್ತೀರಿ ಅಲ್ವೆ? ಟಿಸ್ ಪಿಸ್ ಮಾತಾಡ್ಬಿಟ್ರೆ ಹೆದರ್ತೀನಿ ಅಂದ್ಕೊಂಡ್ರಾ ?" ಶ್ರಿನಿವಾಸಯ್ಯಾ ಗಾಬರಿಯಾಗಿ ತಾಯಿಯನ್ನು ಕರೆದಿದ್ದರು : " ಅಮ್ಮಾ, ಇಲ್ಬಾ !" ಕರೆಯುವ ಅಗತ್ಯವೂ ಇರಲಿಲ್ಲ. ಭಾಗೀರಥಿಯ ಮಾತು ದೊಡ್ಡಮ್ಮನಿಗೆ ಕೇಳಿಸಿತ್ತು.
ಅವರು ತಕ್ಷಣವೇ ಅತ್ತ ಬಂದರು.
" ಏನೇ ಅದು ಭಾಗೀ? ಏನಾಯ್ತಮ್ಮಾ ?" ಬಾಗಿಲಿನ ಚೌಕಟ್ಟಿನಲ್ಲಿ ನಿಂತಿದ್ದ ದೊಡ್ಡಮ್ಮನನ್ನು ಬದಿಗೆ ತಳ್ಳಿ ಭಾಗೀರಥಿ ಪಡಸಾಲೆಗೆ ಧಾವಿಸಿ ಬಂದಿದ್ದಳು, " ಹೊರಡಿ ! ಹೊರಡಿ ಇಲ್ಲಿಂದ !" ಎಂದು ಚೀರುತ್ತ. ಕುಳಿತಿದ್ದ ಗಂಡಸರು ಥಟ್ಟನೆ ಎದ್ದು ನಿಂತರು. ಭಾಗೀರಥಿ ಕೂಗಾಡುತ್ತ ಕುಸಿದು ಬಿದ್ದಳು. ಅತಿಥಿಗಳು, ಶ್ರಿನಿವಾಸಯ್ಯನವರನ್ನು ಅಲ್ಲಿಯೇ ಬಿಟ್ಟು ಜಗಲಿಯತ್ತ ಸರಿದರು. ಶ್ರಿಪಾದನನ್ನು ಗೋವಿಂದ ಕರೆದೊಯ್ದ. ದೊಡ್ಡಮ್ಮನ ಸೂಚನೆಯಂತೆ ಬೀರ ಹೋಟೆಲಿಗೆ ಓಡಿದ, ' ಚಿಕ್ಬುದ್ದಿಯೋರನ್ನು' ಕರೆದು ತರಲು. ಜಗಲಿಯಲ್ಲಿ ವಿಷ್ಣುಮೂತಿ೯ ಅಂದರು : "ఇದೊಳ್ಳೇ ಗ್ರಹಚಾರವಾಯ್ತಲ್ಲ." ಮೋಹನರಾಯರೆಂದರು : " ಹಿಸ್ಟೀರಿಯಾ." " ದೊಡ್ಡದಲ್ಲ ಅಂತೀರಾ ?" " ಹಿಸ್ಟೀರಿಯಾ ವಿಷ್ಣುಮೂತಿ೯ಗಳೇ, ಸೋಂಕು ಜಾಡ್ಯ ಅಲ್ಲ." " ನಮ್ಮ ಮಕ್ಕಳಿಗೆ-” " ಸೋಂಕು ಜಾಡ್ಯವಲ್ಲ ಅಂದೆ." " ಹಾಗಾದರೆ ಪರವಾಗಿಲ್ಲ ಅನ್ನಿ." " ಗೊತ್ತಾಯ್ತು. ಮನೆಯಳಿಯ ಮಾಡ್ಕೊಳ್ಳೋಣ ಅಂತ ನಿಮ್ಮ ಯೋಚ್ನೆ.
ನಗರದಲ್ಲಿ ಅವನೂ ವಕೀಲನಾಗ್ತಾನೆ. ನನ್ನ ಮಗೂನ ಮಾತ್ರ-"
" ಇಂಥಾದ್ದಕ್ಕೆಲ್ಲ ಯಾರಾದರೂ ಹೆದರ್ತಾರೆಯೆ ವಿಷ್ಣುಮೂರ್ತಿಗಳೇ ?" "ಸరి, ಬಿಡಿ."] అತಿಥಿಗಳು ಮತ್ತೊಮ್ಮೆ ರತ್ನಗಂಬಳಿಯ ಮೇಲೆ ಆಸೀನರಾದರು. ಶ್ರಿನಿವಾಸಯ್ಯ ಅಂಗಳಕ್ಕಿಳಿದು, ಮೂಲೆಯಲ್ಲಿ ಕುಳಿತಿದ್ದ ಬೀರನನ್ನು ನೋಡಿದರೂ ಮಾತನಾಡಿಸದೆ, ತಾವೊಬ್ಬರೇ ಅತ್ತ ಇತ್ತ ನಡೆದರು. ಗಿಡಗಳಿಂದ ತಾವು ಆಯ್ದ ಎಲೆಗಳೊಡನೆ ದೊಡ್ಡಮ್ಮ ಒಳಕ್ಕೆ ಬಂದರು. ನೇರವಾಗಿ ದೇವರ ಮನೆಗೆ ಹೋಗಿ ಅಲ್ಲಿ ಆ ಎಲೆಗಳನ್ನು ತೇದು ರಸ ಹಿಂಡಿದರು. ಅದಕ್ಕಿಷ್ಟು ನೀರು