ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೨೦ ನೋವು
ಮನಸಿನೊಳಗಿದ್ದುದನ್ನು ಬದಿಗೆ ತಳ್ಳಿ, ತಲೆ ಎತ್ತಿ ಗೌಡರೆಂದರು: "ಮನುಷ್ಯ ಮಾಡಿರೋ ಕೆಲಸ ಇದಲ್ಲ." ಗೌಡರ ಧ್ವನಿ ಕೇಳಿದ ನಿಂಗಿ ಮತ್ತಷ್ಟು ಗಟ್ಟಿಯಾಗಿ ಎದೆ ಬಡಿದುಕೊಂಡು ಅಳ ತೊಡಗಿದಳು. ಒಬ್ಬನೆಂದ: " ಸುಮ್ನಿರು. ಓದ ಜೀವ ಬತ್ತದಾ?" నింగి ಪ್ರಲಾಪಿಸಿದಳು: " ಒಲ ಒಲ ಅಂತ ಉಚ್ಮುಂಡೆ ಮಾಡ್ಡ. ಬ್ಯಾಡ ಅಂದ್ರೆ ಕೇಳ್ನಿಲ್ಲಪೋ...” ನೆರೆದವರು ಗೌಡರು ಇನ್ನೇನು ಹೇಳುವರೋ ಎಂದು ಅವರ ಕಡೆಗೇ ನೋಡಿದರು. ಶಾಮೇಗೌಡರು ತಲೆಯಾಡಿಸಿ ನಿಟ್ಟುಸಿರು ಬಿಟ್ಟರೇ ಹೊರತು, ಏನನ್ನೂ ಆಡಲಿಲ್ಲ. ಜನಸಂದಣಿಯಿ೦ದ ಮಾತುಗಳು ಬಂದುವು: –" ಕೈಚೀಲ ಎಣದತ್ರಾನೇ ಬಿದ್ದಿತ್ತು.” –" ಒಂದು ಸಣ್ಣ ಸರ್ಟು, ಎಲೆ ಅಡಿಕೆ, ಒಂದೊಂದು ರೂಪಾಯಿನ ಐದು ನೋಟು ಅಷ್ಟೇ." –" ಸರ್ಟು ಐದನಿಗೇಂತ ಕೊಂಡಿರ್ಬೇಕು.” –" ಕಾಸು ಯಾರೂ ಮುಟ್ಟಿಲ್ಲ." ಧ್ವನಿ ಏರಿಸಿ ಗೊಗ್ಗರ ಗಂಟಲಲ್ಲಿ ಗೌಡರೆಂದರು: ಯೋಳ್ಲಿಲ್ವ? ಮನಿಷ್ನಾದೋನು ಮಾಡಿರೋ ಕೆಲಸ ಇದಲ್ಲ." ಜನರ ಗು೦ಪಿನಿಂದ ಮಾತುಗಳು ಮತ್ತೂ ಕೇಳಿಸಿದುವು: –" ವಕೀಲರ್ನ ನೋಡೋಕೆ ಅಂತ ನಿನ್ನೆ ಒತ್ತಾರೆ ನಗರಕ್ಕೆ ಓದ್ದಂತೆ." –" ನಿನ್ನೆ ರಾತ್ರಿ ವಾಪ್ಸು ಬರುವಾಗ ಇಂಗಾಗಿರ್ಬೇಕು." –" ಪಾಪ! ಒಳ್ಳೇ ಕೆಲಸಗಾರ!" –"ತನ್ನದೇ ಒಲ ಇರಬೇಕೂಂತ ಎರಡೆಕರೆ ಕೊಂಡ. ಅನುಬೋಗಿಸೋ ಅದೃಷ್ಟ ఇర్నిల్ల" ಗಟ್ಟಿಯಾಗಿ ಗೌಡರೆಂದರು: "ಈರ! ಮಾದ! ಹೆಣ ಇಟ್ಕೂಂಡು ಸುಮ್ಕೆ ಯಾಕ್ನಿಂತಿದೀರಾ? ಮುಂದಿನ ಕೆಲಸ ಮುಗಿಸ್ಬಿಡಿ." ಗವಿಯಾಗಿದ್ದ ಗಂಟಲಿನಿಂದ ಮಾದನೆಂದ: "ಆಗಲಿ, ಒಡೆಯಾ." "ಓಗಿ ನಿಮ್ನಿಮ್ಮನೆಗಳಿಗೆ" ಎಂದರು ಗೌಡರು ನೆರೆದಿದ್ದವರತ್ತ ನೋಡಿ. ಊರ ಅಕ್ಕಸಾಲಿಗ ವೀರಾಚಾರಿ ನಿಂತಿದ್ದ, ಜನರ ನಡುವೆ. "ಆಚಾರಿ, ಇಲ್ಲಿ ಬಾ,” ಎಂದರು ಗೌಡರು. ಆತ ಹತ್ತಿರ ಬಂದಾಗ, ಪಿಸು ಧ್ವನಿಯಲ್ಲಿ, " ಅಬ್ದುಲ್ಲ ಹಟ್ಟೀಲಿದ್ರೆ ಕರಕೊಂಡ್ಬಾ," ಎಂದರು. ಒಳಗಿನ ಸಂದೇಹದ ಕೆಂಡಕ್ಕೆ ತಿದಿಯೊತ್ತಿದಂತಾಗಿ ವೀರಾಚಾರಿ, ಅಬುಲ್ಲ ವಾಸವಾಗಿದ್ದ