ಪುಟ:ಪರಂತಪ ವಿಜಯ ೨.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೧

೯೭


ಜವಾನ- ತಮಗೆ ಕೊಡಬೇಕೆಂದು ಒಂದು ಕಾಗದವನ್ನು ಕೊಟ್ಟಿರುತ್ತಾಳೆ.
  ಎಂದು ಹೇಳಿ, ಕಲಾವತಿಯ ಕಾಗದವನ್ನು ಒಪ್ಪಿಸಿ ಹೊರಟು ಹೋದನು. ಶಂಬರನು ಲಕ್ಕೋಟನ್ನು ಒಡೆದು ಓದಿದನು. ಅದರಲ್ಲಿ ಬರೆದಿದ್ದುದೇನೆಂದರೆ:-
  ಖೂನಿಗಳನ್ನು ಮಾಡುವುದರಲ್ಲಿ ಸಮರ್ಥನಾದ ಕೃತಘ್ನ ಶಂಬರನೇ! ಈದಿನ ನಾನು ತಂದೆಯ ಮನೆಯನ್ನು ಬಿಟ್ಟು ಹೊರಟು ಹೋಗಿರುತ್ತೇನೆ. ಇನ್ನೆಷ್ಟು ದಿವಸಗಳು ನಿನಗೆ ಆಯುಸ್ಸು ಇರುತ್ತದೆಯೋ, ಅಷ್ಟು ದಿವಸಗಳು ನನ್ನ ಮನೆಯನ್ನೂ ಆಸ್ತಿಯನ್ನೂ ನೀನು ಅನುಭವಿಸಬಹುದು. ಆದರೆ, ನಿನ್ನ ಆಯುಸ್ಸು ಮಿತವಾಗಿರುವುದು. ನಿನ್ನ ದೇಹವು ಜೀವವನ್ನು ಧರಿಸಿಕೊಂಡಿರುವಾಗಲೇ, ನೀನು ನಿನ್ನ ದುಷ್ಕೃತ್ಯಗಳಿಗೆ ಪರಿಹಾರವನ್ನು ಮಾಡಿಕೊಳ್ಳಲು ಶಕ್ತಿಯಿದ್ದರೆ ಮಾಡಿಕೋ, ನನಗಿದ್ದ ದ್ರವ್ಯವನ್ನೆಲ್ಲ ನಾನು ತೆಗೆದುಕೊಂಡಿರುವೆನು. ಇದರಲ್ಲಿ ಒಂದು ಕಾಸೂ ನಿನಗೆ ಸಿಕ್ಕುವುದಿಲ್ಲ. ಜಾಗರೂಕನಾಗಿರು. ಕಲಾವತಿಯು ಸಾಮಾನ್ಯಳಲ್ಲ. ದುರ್ಮಾರ್ಗರನ್ನು ಯಮಪುರಿಗೆ ಕಳುಹಿಸುವುದಕ್ಕೋಸ್ಕರ ಹುಟ್ಟಿರತಕ್ಕ ಮೃತ್ಯುವೇ ಕಲಾವತಿ ಎಂದು ತಿಳಿದುಕೋ, ನಿನ್ನ ಪಾಪಕೃತ್ಯಗಳಿಗೆ ಅನುರೂಪವಾದ ಯಾತನೆಗಳನ್ನನುಭವಿಸುವುದಕ್ಕೋಸ್ಕರ-ನಿನ್ನನ್ನು ಕೆಲವು ಘಂಟೆಗಳೊಳಗಾಗಿಯೇ ನರಕಕ್ಕೆ ಕಳುಹಿಸದಿದ್ದರೆ, ನಾನು ಸತ್ಯಶರ್ಮನ ಮಗಳೇ ಅಲ್ಲ.

-ಕಲಾವತಿ


  ಈ ಕಾಗದವನ್ನು ಓದಿ, ಅತ್ಯಂತ ಆಗ್ರಹದಿಂದ, ಅದನ್ನು ಶಂಬರನು ಛಿದ್ರಛಿದ್ರವಾಗಿ ಹರಿದು ಬಿಸುಟನು. ಆಮೇಲೆ ಆತ್ಮಗತವಾಗಿ “ಇವಳು ಮಹಾ ಪಾಪಿಷ್ಠ ಹೆಂಗಸು. ನೂರುಜನ ಕಿರಾತರೊಡನೆ ಯುದ್ದ ಮಾಡುವುದು ಸುಲಭ; ಈ ಚಂಡಾಲ ಸ್ತ್ರೀಗೆ ಪ್ರತಿಭಟನಾಗಿರುವುದು ಕಷ್ಟ. ಇರಲಿ, ಇವಳನ್ನೇ ಯಮಪುರಿಗೆ ಕಳುಹಿಸುವೆನು.” ಎಂದು ಆಲೋಚಿಸಿದನು.
  ಕಲ್ಯಾಣಪುರದ ಭೋಜನಶಾಲೆಯಲ್ಲಿ, ಪರಂತಪನ ಭೃತ್ಯನಾದ ಮಂಜೀರಕನು ಆಗತಾನೆ ಬಂದು ಇಳಿದನು. ಆ ಭೋಜನ ಗೃಹದ ಎಲ್ಲಾ ಕೊಟ್ಟಡಿಗಳಿಗೂ ಹೋಗಿ ಹುಡುಕಿ, ತಾನು ಯಾರನ್ನು ಹುಡುಕುತಿದ್ದನೋ