ಪುಟ:ಪರಂತಪ ವಿಜಯ ೨.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೯೮

ಪರಂತಪ ವಿಜಯ


ಆ ಮನುಷ್ಯನು ಸಿಕ್ಕದೆ ಹೋದುದರಿಂದ, ಆ ಭೋಜನಶಾಲೆಯ ಯಜಮಾನನ ಕೊಟ್ಟಡಿಗೆ ಹೋದನು.
ಮಂಜೀರಕ- ಈ ಭೋಜನಶಾಲೆಯ ಯಜಮಾನನು ನೀನೇ ಅಲ್ಲವೆ?
ಯಜಮಾನ- ಅಹುದು ! ನೀನು ಯಾರನ್ನೋ ಹುಡುಕಿಕೊಂಡು ಬಂದಿರುವಂತೆ ಕಾಣುತ್ತದೆ. ಯಾರನ್ನು ಹುಡುಕುತ್ತೀಯೆ?
ಮಂಜೀರಕ-ಈಗ ಕೆಲವು ದಿವಸಗಳ ಕೆಳಗೆ ನಾನೂ ನನ್ನ ಯಜಮಾನನೂ ಇಲ್ಲಿಗೆ ಬಂದಿದ್ದೆವು. ನನ್ನ ಯಜಮಾನನು ಒಂದು ಶವವನ್ನು ತಂದು ಇಲ್ಲಿ ಇಳಿದಿದ್ದನು. ಅವನ ಪೂರ್ವೋತ್ತರಗಳನ್ನು ಬಲ್ಲೆಯಾ? ಯಜಮಾನ -ಮಾಧವನ ಶವವನ್ನು ತಂದಿದ್ದವನೋ?
ಮಂಜೀರಕ - ಅಹುದು.
ಯಜಮಾನ - ಅವನ ಹೆಸರು ಪರಂತಪನೋ?
ಮಂಜೀರಕ -ಅಹುದು.
ಯಜಮಾನ - ಅವನು ಸುಮಿತ್ರನ ಮನೆಯಲ್ಲಿ ಇಳಿದಿದ್ದನು. ಅವನಿಗೂ ಶಂಬರನಿಗೂ ದ್ವಂದ್ವ ಯುದ್ಧವಾಯಿತು, ನಾನು ಅವನ ಸಕ್ಷವಾಗಿ ಪಂಚಾಯಿತನಾಗಿದ್ದನು. ಅವನು ಶಂಬರನನ್ನು ಗುಂಡಿನಿಂದ ಹೊಡೆದು ಅವಯವ ಹೀನನನ್ನಾಗಿ ಮಾಡಿದನು ಶಂಬರನ ಗುಂಡು ಸುಮಿತ್ರನಿಗೆ ತಗುಲಿ ಅವನನ್ನು ಕೊಂದಿತು.
ಮಂಜೀರಕ-ಈ ಪರಂತಪನು ಈಗ ಎಲ್ಲಿರುವನು ?
ಯಜಮಾನ-ಅವನು ರತ್ನಾಕರಕ್ಕೆ ಹೋದನು. ತದಾರಭ್ಯ ಅವನ ವಿಷಯವೇ ನನಗೆ ತಿಳಿಯದು.
ಮಂಜೀರಕ- ಅವನ ಜತೆಯಲ್ಲಿ ಯಾರಾದರೂ ಹೋದರೋ?
ಯಜಮಾನ-ಅರ್ಥಪರನೆಂಬ ಲಾಯರು ಅವನ ಜತೆಯಲ್ಲಿ ಹೋದನು.
ಮ೦ಜೀರಕ-ಆ ಅರ್ಥಪರನು ವಾಪಸು ಬಂದನೋ ?
ಯಜಮಾನ-ಅವನನ್ನು ನಾನು ಕಾಣಲಿಲ್ಲ. ಅಲ್ಲಿಗೆ ಹೋಗುವಾಗ, ಪರಂತಪನು “ ನಾನು ರತ್ನಾಕರದಿಂದ ವಾಪಸು ಬಾರದಿದ್ದರೆ ಶಂಬರನಿಂದ ಮರಣವನ್ನು ಹೊಂದಿರುವೆನೆಂದು ನೀನು ತಿಳಿದುಕೊಳ್ಳಬಹುದು ” ಎಂಬು