ಪುಟ:ಪರಂತಪ ವಿಜಯ ೨.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧೪

೧೧೩


ಕಾಮಮೋಹಿನಿ-ನಿನ್ನ ಮರಣಕ್ಕನುರೂಪವಾದ ಮರಣವೇ ನನಗೂ ಬರುವುದು. ಈ ಚಂಡಾಲನ ಸಂಕಲ್ಪಕ್ಕೆ ಕಾಮಮೋಹಿನಿಯು ಒಳಪಡುವಳೇ ? ಹಾಗೆ ಒಳಪಟ್ಟರೆ, ಅವಳು ನಿನ್ನ ಮಗಳಾಗಿರುವುದಕ್ಕೆ ಅರ್ಹಳೇ? ಆ ವಿಷಯದಲ್ಲಿ ನೀನು ಭಯಪಡಬೇಡ. ಈ ಕಿರಾತನು ನಿನ್ನನ್ನು ಕೊಲ್ಲುವುದಾದರೆ, ನಿನು ಮಗಳ ಯೋಚನೆಯನ್ನು ಸಂಪೂರ್ಣವಾಗಿ ಬಿಟ್ಟು ಪರಬಹ್ಮನನ್ನು ಧ್ಯಾನಿಸುತ್ತ ಈ ದುಷ್ಟ ಲೋಕವನ್ನು ಬಿಟ್ಟು ತೆರಳು. ಕಾಮಮೋಹಿನಿಯು ಶೀಘ್ರದಲ್ಲಿಯೇ ನಿನ್ನನ್ನು ಅನುಸರಿಸಿ ಬರುವಳು.
  ಅಷ್ಟರಲ್ಲಿಯೇ ಶಂಬರನು ಅಲ್ಲಿಗೆ ಬಂದನು. ಕಾಮಮೋಹಿನಿಯ ಪ್ರಸನ್ನತೆಯು ತನ್ನ ವಿಷಯದಲ್ಲಿ ಉಂಟಾಗಬೇಕೆಂದು, ಅವಳ ತಂದೆಯ ಕೈಬೇಡಿಗಳನ್ನು ತೆಗೆಸಿ, ಆತನಿಗೆ ಉಪಚಾರವನ್ನು ಮಾಡಿ, ಅವನನ್ನು ಅವನ ಬಿಡಾರಕ್ಕೆ ಕಳುಹಿಸಿ, ಅವನ ಮೇಲೆ ಪಹರೆಯನ್ನು ಮಾತ್ರ ಇಟ್ಟಿದ್ದನು. ಕಾಮಮೋಹಿನಿಯನ್ನು ಉಪಾಯದಿಂದ ಸ್ವಾಧೀನ ಮಾಡಿಕೊಳ್ಳಬೇಕೆಂದು ಪ್ರಯತ್ನ ಮಾಡಿ, ಅವಳೊಡನೆ ಸಲ್ಲಾಪವಾಡಲುದ್ಯುಕ್ತನಾದನು.
ಶಂಬರ-ಎಲೆ ಕಾಮಮೋಹಿನಿಯೇ! ನಿನ್ನ ತಂದೆಯ ಹತ್ತು ವರುಷಗಳಿಂದ ಇಲ್ಲಿನ ಕಾರಾಗೃಹದಲ್ಲಿ ಅನಿರ್ವಚನೀಯವಾದ ಸಂಕಟಗಳನ್ನು ಅನುಭವಿಸಿದನು. ಈಗ ಅವನ ಕಷ್ಟಗಳೆಲ್ಲ ನಿವಾರಣೆಯಾದವು. ಕಾಮಮೋಹಿನಿ-ಇನ್ನೂ ನಿವಾರಣೆಯಾಗಿಲ್ಲ. ನಿವಾರಣೆಯಾಗುವುದಕ್ಕೆ ಉಪಕ್ರಮವಾಗಿ ಇದೆ.
ಶಂಬರ-ನಿನಗೊಸ್ಕರ ಅವನ ಕಷ್ಟಗಳನ್ನು ನಾನು ಸಂಪೂರ್ಣ ವಾಗಿ ನಿವಾರಣೆಮಾಡುವೆನು.
ಕಾಮಮೋಹಿನಿ - ಅದಕ್ಕೆ ಸಂಶಯವೇನು? ಅವನನ್ನು ಕಾರಾಗೃಹಕ್ಕೆ ಹಾಕಿದ ಪಾಪಿಷ್ಠನಾದ ಸುಮಿತ್ರನು, ನಿನ್ನ ಗುಂಡಿನ ಏಟಿನಿಂದಲೇ ಸತ್ತನು. ಈಗ ನನ್ನ ತಂದೆಯ ಮನಃಕ್ಲೇಶಕ್ಕೆ ಕಾರಣಭೂತನಾದ ನೀನೂ ಕೂಡ, ನಿನ್ನ ಪ್ರವರ್ತನದಿಂದಲೇ ಹತನಾಗುವೆ. ಈ ಯೆರಡು ಕೆಲಸವೂ ಪೂರ