ಪುಟ:ಪರಂತಪ ವಿಜಯ ೨.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦

ಪರಂತಪ ವಿಜಯ


ಸಹೋದರನ ಪುತ್ರನಾದ ಶಂಬರನೂ, ಇದರಲ್ಲಿಯೇ ವಾಸಮಾಡುತಿದ್ದರು. ಪರಂತಪನು, ಮಾಧವನು ಹೇಳಿದ್ದ ಮೇರೆಗೆ, ಅವನ ಶವವನ್ನು ಪೆಟ್ಟಿಗೆಯಲ್ಲಿ ಹಾಕಿ ಭದ್ರಪಡಿಸಿಕೊಂಡು ಬಂದು, ಕಲ್ಯಾಣಪುರವನ್ನು ಸೇರಿದನು. ಅಪ್ಪರಲ್ಲಿಯೇ, ಅಲ್ಲಿ ಅವನನ್ನೇ ನಿರೀಕ್ಷಿಸುತ್ತಿದ್ದ ಇವನ ಭೃತ್ಯನಾದ ಮಂಜೀರಕನು ಇದಿರುಗೊಂಡು ಬಂದು, ಇವನನ್ನು ಕರೆದುಕೊಂಡು ಹೋಗಿ, ತಾನು ಮೊದಲು ಗೊತ್ತು ಮಾಡಿದ್ದ ಬಿಡಾರದಲ್ಲಿ ಇಳಿಸಿದನು. ಪರಂತಪನು, ತನ್ನಲ್ಲಿದ್ದ ದ್ರವ್ಯವನ್ನೆಲ್ಲ ರಹಸ್ಯವಾಗಿ ಅಲ್ಲಿಯೇ ಒಂದು ಸ್ಥಳದಲ್ಲಿಟ್ಟು, ಮಾಧವನ ಶವವನ್ನು ತೆಗೆಸಿಕೊಂಡು ಸುಮಿತ್ರನ ಮನೆಗೆ ಹೋದನು. ಆಗ ತಾನೆ ಕತ್ತಲೆಯಾಗುತಿದ್ದಿತು. ಆ ಸುಮಿತ್ರನ ಮನೆಯಲ್ಲಿ, ಮಹೋತ್ಸವ ಸೂಚಕವಾದ ಅನೇಕ ದೀಪಗಳನ್ನು ಹತ್ತಿಸಿದ್ದರು; ಅನೇಕ ಜನಗಳು ರಥಾ ರೂಢರಾಗಿ ಆ ಸುಮಿತ್ರನ ಮನೆಯ ಬಾಗಿಲಿಗೆ ಬರುತ್ತಿದ್ದರು. ಪರಂತಪನು ಇದನ್ನೆಲ್ಲ ನೋಡಿ, ಆ ಮಹೋತ್ಸವಕ್ಕೆ ಕಾರಣವೇನೆಂದು ಅಲ್ಲಲ್ಲಿ ವಿಚಾರಿಸಲು, ಆ ರಾತ್ರಿ ಚಂದ್ರಮುಖಿಯನ್ನು ಶಂಬರನಿಗೆ ಕೊಡುವುದಾಗಿ ನಿಶ್ಚಿತಾರ್ಥವಾಗುವುದೆಂದು ತಿಳಿಯಿತು. ಆಗ ಪರಂತಪನು, ಇಂಥ ಮಹೋತ್ಸವಕಾಲದಲ್ಲಿ ಸುಮಿತ್ರನಿಗೆ ಈ ಅಶುಭ ಸಮಾಚಾರವನ್ನು ಹೇಳಿ ಅವನ ಮನಸ್ಸನ್ನು ಸಂಕಟಪಡಿಸುವುದು ಸರಿಯಲ್ಲವೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡು, ಹಿಂದಿರುಗಿ ತನ್ನ ಬಿಡಾರಕ್ಕೆ ಹೋದನು. ಅದರೆ, ಇವನು ಮೊದಲೇ ಗ೦ಧರ್ವಪಯರಿಯಿಂದ-ಮಾಧವನು ಸ್ವರ್ಗಸ್ಥ ನಾದನೆಂದೂ, ಅವನ ಶವವನ್ನು ತಾನೇ ತೆಗೆದಕೊಂಡು ಬರುವುದಾಗಿಯ ಸುಮಿತ್ರನಿಗೆ ಬರೆದಿದ್ದ ಲೇಖನವು ಮಾತ್ರ ಆ ಕಾಲಕ್ಕೆ ಸರಿಯಾಗಿ ಸಮಿತ್ರನ ಕೈಗೆ ತಲುಪಿತು. ಅಷ್ಟರೊಳಗಾಗಿಯೇ, ನಿಶ್ಚಿತಾರ್ಥ ಮಹೋತ್ಸವಕ್ಕಾಗಿ ಅನೇಕ ಬಂಧುಮಿತ್ರರು ಬಂದು ಸೇರಿದರು. ಸುಮಿತ್ರನು, ಆಗತಾನೆ ಬಂದಿದ್ದ ಲೇಖನವನ್ನು ಒಡೆದು ನೋಡಿ, ಕೊಡಲೆ ಸಿಡಿಲಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಮೂರ್ಛೆಯಿಂದ ಕೆಳಗೆ ಬಿದ್ದನು. ಸಭೆಯಲ್ಲಿದ್ದವರೆಲ್ಲರೂ, ಕಾರಣ ತಿಳಿಯದೆ ಸಂಭ್ರಾಂತರಾಗಿ, ಹಾಹಾಕಾರಮಾಡುತಿದ್ದರು. ಆಗ ಆ ಶಂಬರನು, ಬಹಳ ಗಾಬರಿಯಿಂದ ಬಂದು ಆ ಕಾಗದವನ್ನು ಓದಿದನು. ಇವನಿಗೆ ಆ ಕಾಗದನ್ನು ನೋಡುವಾಗಲೇ, ಸಂತೋಷದಿಂದ ಮುಖವು ವಿಕ