ಪುಟ:ಭವತೀ ಕಾತ್ಯಾಯನೀ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



--೧೭--

ಕೊಂಡಿದ್ದರೆ, ಪ್ರಾಣವೇನೂ ಹೋಗುವದಿಲ್ಲ. ಮನಸ್ಸುಮಾತ್ರ ಕ್ಷೀಣವಾಗಿಹೋಗುತ್ತದೆ. ಆಗ ನಾವು ಕಲಿತದ್ದೂ ಕೂಡ ಮರೆತಂತಾಗಿ ಯಾವದೂ ನೆನಪಿಗೆ ಬರುವದಿಲ್ಲ. ಇದು ಅನುಭವದ ಮಾತೇಸರಿ. ನಿರಾಹಾರ ಮಾಡಿದ ಮನುಷ್ಯನಿಗೆ ಯಾವದೂ ಬೇಡಾಗು ತ್ತದೆಂಬುವದು ಸ್ಪಷ್ಟವಿರುವದು. ಬಹುದಿವಸ ನಿರಾಹಾರ ಮಾಡಿದ ಮನುಷ್ಯನು ಮತ್ತೆ ಅನ್ನವನ್ನು ಉಣ ಹತ್ತಿದರೆ ಒಂದೊಂದುದಿವಸದ ಅನ್ನದಿಂದ ಒಂದೊಂದು ಅಂಶದಂತೆ ಹದಿನೈದು ದಿವಸಗಳಲ್ಲಿ ಹದಿನೈದು ಅಂಶಗಳು ಕೂಡಿಕೊಳ್ಳಲಾಗಿ , ಮನಸ್ಸುಪರಿಪೋಷ ವನ್ನು ಹೊಂದಿ ಷೋಡಶಕಲಾತ್ಮಕವಾದ ಕೂಡಲೆ ಮೊದಲಿನಂತೆ ಕಲಿತ ವಿಷಯಗಳೆಲ್ಲ ನೆನಪಿಗೆ ಬರುತ್ತವೆ . ಒಂದು ಬೆಂಕಿಯ ಕಿಡಿಯು ಇರುತ್ತದೆಂದು ತಿಳಿಯೋಣ. ಇದ ರಲ್ಲಿ ದಹನಶಕ್ತಿಯಿದ್ದರೂ ಅಷ್ಟು ವ್ಯಕ್ತವಾಗಿರುವದಿಲ್ಲ. ಅದನ್ನು ಮುಟ್ಟಿದರೆ ಬಹಳ ಸುಡುವದಿಲ್ಲ. ಆದರೆ ಇದಕ್ಕೆ ಒಣತರಗುಗಳನ್ನೂ, ಒಣಹುಲ್ಲನ್ನೂ ಕೂಡಿಸಿ ಗಾಳಿ ಹಾಕಿ ಹೊತ್ತಿಸಿದರೆ ಈ ಸಣ್ಣ ಬೆಂಕಿಯ ಕಿಡಿಯು ಪರಿಪುಷ್ಟವಾಗಿ ಊರಿಗೆ ಊರನ್ನೇ ಸುಡಬಹುದು. ಇದೇ ಮೇರೆಗೆ ಮನಸ್ಸಾದರೂ ಪರಿಪುಷ್ಟವಾಯಿತೆಂದರೆ ಸಕಲವನ್ನೂ ಗ್ರಹಿಸುವ ಸಾಮರ್ಥ್ಯವನ್ನು ಹೊಂದುತ್ತದೆ .

ಈ ಪ್ರಕಾರವಾಗಿ ಮನಸ್ಸು ಅನ್ನಜನ್ಯವೆಂದು ಸಿದ್ದವಾದಬಳಿಕ, ಅದರ ಶುದ್ದಿ

ಯಾದರೂ ಅನ್ನದಿಂದಲೇ ಆಗುತ್ತದೆಂದು ಸಿದ್ದವಾಗುತ್ತದೆ . ಅನ್ನದಲ್ಲಿ ಸಾತ್ವಿಕ,ರಾಜಸ, ತಾಮಸವೆಂದು ಮೂರು ವರ್ಗಗಳಿರುತ್ತವೆ. ಇವುಗಳಲ್ಲಿ ರಾಸಜ-ತಾಮಸಗಳನ್ನು ಬಿಟ್ಟು ಸಾತ್ಬಿಕಾನ್ನವನ್ನೇ ಸ್ವೀಕರಿಸಿ ಮನಸ್ಸಿನ ಪೋಷಣವನ್ನು ಮಾಡಬೇಕು. ಈ ಸಾತ್ವಿಕಾನ್ನದಿಂದ ಸುಶಿಕ್ಷಿತವಾದ ಮನಸ್ಸು ಸಿದ್ದವಾಗುತ್ತದೆ . ಮನಸ್ಸು ಸುಪರಿ ಶುದ್ಧವಾಗಬೇಕಾದರೆ ಯೋಗ್ಯವಾದ ಆಹಾರವನ್ನು ಕೊಡಬೇಕೆಂದು ಛಾಂದೋಗ್ಯದಲ್ಲಿ ಸನತ್ಕುಮಾರ ನಾರದರ ಸಂವಾದದ ಪ್ರಕರಣದಲ್ಲಿ ನಿರೂಪಿಸಲ್ಪಟ್ಟಿದೆ. "ಆಹಾರ ಶುಧ್ಯಾ ಸತ್ವಶುದ್ಧಿಃ ಸತ್ವಶುದ್ದೌ ಧ್ರುವಾಸ್ಮೃತಿಃ ಸ್ಮತಿಲಂಬೇ ಸರ್ವಹೃದಯಗ್ರಂ ಥೀನಾಂ ವಿಪ್ರಮೋಕ್ಷಃ” ಆಹಾರಗಳು ಶುದ್ಧವಾಗೋಣದರಿಂದ ಅಂತಃಕರಣವು ಶುದ್ದ ವಾಗುತ್ತದೆ. ಅಂತಃಕರಣವು ಶುದ್ಧವಾದಮೇಲೆ ನಿಶ್ಚಲವಾದ ಪರಮೇಶ್ವರನ ಸ್ಮರ ಣವು ಹುಟ್ಟುತ್ತದೆ. ಇಂಥ ಸ್ಮರಣದಿಂದ ಮನಸ್ಸಿನ ಗ್ರಂಥಿಗಳು, ಅಂದರೆ ಹೆಂಡಿರು. ಮಕ್ಕಳು ಮುಂತಾದ ವಸ್ತುಗಳಮೇಲಿನ ಸ್ನೇಹದ ಗ್ರಂಥಿಗಳು ದೂರವಾಗುತ್ತವೆ. ಎಂದು ಅಲ್ಲಿ ಹೇಳಿರುತ್ತದೆ.

ಇನ್ನು, ಆಹಾರವೆಂದರೇನು ? ಅನ್ನವೆಂದರೇನು ? ಎಂಬವನ್ನು ವಿಚಾರಿಸುವಾ.

“ಆಹ್ರಿಯಂತಇತ್ಯಾಹಾರಾಃ” ಅಂದರೆ ಪಂಚಜ್ಞಾನೇಂದ್ರಿಯಗಳು ಸೇವಿಸುವ ಶಬ್ದ ಸ್ಪರ್ಶ ಮುಂತಾದ ವಿಷಯಗಳು ಆಹಾರಗಳೆನಿಸುವವು. "ಅದ್ಯತಇತ್ಯನ್ನಂ ” ಅಂದರೆ, ನಾವು ತಿನ್ನುವ ಧಾನ್ಯ.ಫಲ-ಶಾಕ ಮುಂತಾದವುಗಳು ಅನ್ಮಗಳೆನಿಸುವವು .

ಆಹಾರಗಳಲ್ಲಿ ರಾಜಸ.ತಾಮಸಗಳನ್ನು ಬಿಟ್ಟು ಯಾವಾಗಲೂ ಸಾತ್ವಿಕವಾದ

ವನ್ನೇಗಹಿಸುತ ಹೋಗಬೇಕು; ಅಂದರೆ, ಸಾತ್ವಿಕರೂಪವನ್ನೂ, ಸಾತ್ವಿಕರಸವನ್ನೂ,