ಪುಟ:ಮಾತೃನಂದಿನಿ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

P 110 ಸತೀ ಹಿತೈಷಿಣಿ ತಮ್ಮಲ್ಲಿ ಕೇವಲ ಪುತ್ರವಾತ್ಸಲ್ಯವನ್ನು ಇಟ್ಟ, ತಮ್ಮ ಶ್ರೇಯೋಭಿವೃದ್ಧಿ ಬನ್ನು ಕುರಿತು ಅನುಗ್ರಹಿಸಿರುವರು. ಅವರ ಆಜ್ಞಾನುಸಾರವಾಗಿಯೇ ನಾವು ಇಲ್ಲಿಗೆ ಬಂದಿರುವೆವು. ಕಲೆಕ್ಟರ್:- ಓಹೋ! ಹಾಗಾದರೆ ತ.cಬಾ ಕೃತಜ್ಞನಾಗಿರುತ್ತೇನೆ. ಮತ್ತೇನು, ನಿಮ್ಮ ನಿರೂಪ? ಗಣೇಶ:-ನಮ್ಮ ನಿರೂಸವಲ್ಲ. ಸ್ವಾಮಿಯವರೇ ಹೀಗಂದು ನಿರೂ ಪಿಸಿರುತ್ತಾರೆ. ಕಲೆಕ್ಕ ರಬಾಬು ! ನೀವು ನಮ್ಮ ಗುರುಪೀಠಕ್ಕೆ ಪರಮಾಪ್ತ ಸ್ಯರಾಗಿರುತ್ತಿರಿ, ನಮ್ಮ ಗುರುಪೀತಕ್ಕೂ ನಿಮಗೂ ಬಹುಕಾಲದಿಂದ ಗುರು ಶಿಷ್ಯ ಸಂಬಂಧವು ಬೆಳೆದು ಬಂದಿರುವುದನ್ನು ನೀವೂ ಚೆನ್ನಾಗಿ ತಿಳಿದೇ ಇರುತ್ತೀರಿ. ಅಲ್ಲದೆ, ಈ ವಟ್ಟಣಕ್ಕೆ ನ್ಯಾಯಾಧಿಕಾರಿಗಳಾಗಿಯೂ ಬಂದಿ ಇತ್ತೀರಿ. ಇಷ್ಟಾಗಿ ನೀವು ಗುರುಪೀಠಕ್ಕೆ ವಿರುದ್ಧಾಹಾರಿಗಳಾಗಿರುವ ರಸ್ಸು, -ಮತ್ತು ಮಠಾದಾಯ-ದೇವತಾ ಕೈಂಕರ್ಯಗಳಿಗೆಲ್ಲಕ್ಕೂ ಕಂಟಕ ನನ್ನೊಡ್ಡಿ ರುವ ನಾಸ್ತಿಕವಾದಿಗಳನ್ನು, ಶಿಷ್ಟಾಚಾರವನ್ನನುಸರಿಸಿ, ಗುರು ಹೀಠದಿಂದ ಕಳುಹಲ್ಪಟ್ಟ ಬಹಿಷ್ಕಾರ ಪತ್ರವನ್ನು ನಿರಾಕರಿಸಿ ಆಧೇಯತೆ ಯಿಂದ ಸಮಾಜಕ್ಕೆ ಕಲಂಕಪ್ರಾಯರಾಗಿರುವವರನ್ನು, ಇವರೆಲ್ಲರನ್ನೂ ನೀವು ಪ್ರಯತ್ನ ಪುರಸ್ಸರವಾಗಿ ಕರೆತರಿಸಿ, ಅವರನ್ನು ಸರಿಯಾದ ದಂಡಕ್ಕೆ ಗುರಿಪಡಿಸಿ, ಸಮಾಜಕ್ಕೂ ಗುರುಪೀಠಕ್ಕೂ ಅನುಕ್ರಮಾಗತವಾಗಿ ಬಂದಿ ರುವ ಮರ್ಯಾದೆಯನ್ನು ಮತ್ತೆ ಸ್ಪಿರಪಡಿಸಬೇಕಾದುದು ನಿಮ್ಮ ಮೇಲೆ ಬಿದ್ದ ಧಾರವಾಗಿದೆ. ನ್ಯಾಯವಿದರಾದ ನೀವೇ ಸಮಾಜದಿಂದ ಬಹಿಷ್ಕೃತ ರಾದವರೊಡನೆ ಸಹಭೋಜನಾದಿ ಸಂಸರ್ಗ ಸಹವಾಸಗಳನ್ನು ಬೆಳೆಸುವುದು ಉಚಿತವಲ್ಲವೆಂದೂ, ನಿಜನಿಷ್ಠೆಯಿಂದ ಗುರುಪೀಠದಲ್ಲಿ ಭಕ್ತಿಯನ್ನು ನೆಲೆಗೊ *ಸಿ, ಕೃತಕೃತ್ಯರಾಗಬೇಕೆಂದೂ ಈಮೂಲಕ ನಿಮಗೆ ತಿಳಿಸಿರುತ್ತೇವೆ.” ಕಲೆಕ್ಟರ್: -ಕಿರುನಗೆಯಿ೦ದ.. - ಸಂತರೇ ! ಗುರುಪೀಠಕ್ಕೆ ನಮ್ಮ ಅನೇಕವಂದನೆಗಳನ್ನು ಸಮರ್ಪಿಸಿರಿ. ಅವರ ನಿರೂಪವನ್ನು ತಿರಸಾವಹಿಸಿ ದೇನೆಂದೂ ಹೇಳಿರಿ, ಅಷ್ಟೇ ಅಲ್ಲ. ಗುರುಪೀಠದಲ್ಲಿ ಅಪರಾಧಿಗಳಾಗಿರುವ ವರಿಂದ ಸನ್ನಿಧಾನದಿಂದ ನಿರೂಪಿಸಲ್ಪಟ್ಟಷ್ಟು ದ್ರವ್ಯವನ್ನೂ ತೆಗೆದುಕೊಂಡು, ಇವರಿಂದ ಈದಿನ ಪ್ರಾಯಶ್ಚಿತ್ರಗಳನ್ನು ಮಾಡಿಸಿರುವೆನು, ಇವರಿಂದ