ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಹಿಮ್ಮೇಳ


ಭಾರತದ ಸಾಂಪ್ರದಾಯಿಕ ರಂಗಭೂಮಿಯ ಹೆಚ್ಚಿನ ಎಲ್ಲ ಪ್ರಕಾರ ಗಳಲ್ಲೂ, ಹಾಡುಗಳು ಮತ್ತು ಮಾತು-ಇವು ಬೆರೆತಿರುವ ರೀತಿ ಸ್ಥೂಲವಾಗಿ ಒಂದೇ ತೆರನಾದುದು. ಅದು ಎಷ್ಟು ವಿಶಿಷ್ಟವಾದುದೆಂದರೆ, ಹಾಡುಗಳು ಮತ್ತು ಮಾತು ಸೇರಿ, ನಮಗೆ ಒಂದು ಸಮಗ್ರ ಅನುಭವವನ್ನು ನೀಡುತ್ತವೆ. ಹಾಡು, ಮಾತುಗಳು ರಚನೆ, ಅಭಿವ್ಯಕ್ತಿಯ ವಿಧಾನ ಪರಿಣಾಮದಲ್ಲಿ ಮೂಲ ಭೂತ ವ್ಯತ್ಯಾಸ ಇದ್ದರೂ ಸಹ ಅವು ರಂಗಪ್ರಕಾರಗಳಲ್ಲಿ ಹೆಣೆದುಕೊಂಡಿರುವ ರೀತಿ, ಆ ಸೇರ್ಪಡೆ ಬೆಳೆದುಬಂದಿರುವ ರೀತಿಯಿಂದ, ಅವೆರಡು ಒಂದಾಗಿ ಒಂದು ಬಗೆಯ ಅವಿನಾದ್ವೈತದ ಸ್ವರೂಪವುಳ್ಳ ಅನುಭವ ಪ್ರಪಂಚವನ್ನು ನಮಗೆ ತೆರೆದು ಕೊಡುತ್ತವೆ. ಹೀಗಾಗಿ, ರಂಗಭೂಮಿಯ ಸಮಗ್ರತೆಯ ಒಂದು ಕಲ್ಪನೆ ಅದರ ರಚನಾ ವಿನ್ಯಾಸದಲ್ಲಿಯೇ ಇದೆ ಅನ್ನಬಹುದು, ಅಂತಹ ರಚನಾ ವಿನ್ಯಾಸದ ಸ್ವರೂಪದ ಗ್ರಹಿಕೆ ಕಲಾವಿದನಿಗೂ, ವಿಮರ್ಶಕ, ಅಭ್ಯಾ ಸಕರಿಗೂ ಇರುವುದು ಅವಶ್ಯವಾಗಿದೆ. ನಮ್ಮ ಹಳೆಯ ರಂಗಕಲೆಗಳಲ್ಲಿ ಹಾಡುಗರ ಸ್ಥಾನವು ಅಲಂಕರಣದ ಸ್ಥಾನವಲ್ಲ, ಅಥವಾ ಪೂರಕ ಸಾಮಗ್ರಿಯ ಸ್ಥಾನವೂ ಅದಲ್ಲ. ಹಾಡುಗಳು-ಹಿಮ್ಮೇಳ-ಕಲಾಪ್ರಕಾರದ ಶರೀರದ ಸಾವ ಯವ ವ್ಯಾಪಿಯಾದ ಅವಿಭಾಜ್ಯ ಸಂಬಂಧ ಹೊಂದಿ ಅಲ್ಲಿ ಇರುತ್ತವೆ. ಅಂದರೆ ಇಂದು ನಾವು 'ನಾಟಕ' ವೆಂದು ಹೆಸರಿಸುವ ರೂಪಕಗಳಲ್ಲಿ ಇರುವ ಹಾಗೆ, ಕೆಲವು ವಿಷಯಗಳನ್ನು ಮಾತುಗಳಿಂದ ಕೆಲವನ್ನು ಹಾಡುಗಳಿಂದ ಹೇಳುವ ಪರಸ್ಪರ ಪೂರಕ ಸ್ಥಿತಿ ನಮ್ಮ ಸಾಂಪ್ರದಾಯಿಕ ರಂಗಕಲೆಗಳದ್ದಲ್ಲ. ಅವೆ ರಡೂ ಒಂದಾಗಿ, ಒಂದೇ ವಸ್ತು, ವಿಷಯ ಸಂಗತಿಗಳನ್ನು ಪುನರುಕ್ತಿ ವಿಧಾನ ದಿಂದ ಹೇಳುವುದೇ ಅಲ್ಲಿನ ಕ್ರಮ. ಇಲ್ಲಿ ಗಮನಿಸಬೇಕಾದ ಇನ್ನೊಂದು


ಅರ್ಕುಳ ಸುಬ್ರಾಯಾಚಾರ ಸಂಸ್ಮರಣ ಗ್ರಂಥ 'ಸ್ವರ್ಣಕಮಲ'ಕ್ಕಾಗಿ ಬರೆದುದು. 1988