ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಲೇಖಕನ ಅರಿಕೆ

ಯಕ್ಷಗಾನ ರಂಗದ ವಿವಿಧ ವಿಷಯಗಳಿಗೆ ಸಂಬಂಧಿಸಿ, ಬೇರೆ ಬೇರೆ ಸಂದರ್ಭಗಳಿಗಾಗಿ ನಾನು ಬರೆದ ಲೇಖನಗಳು, ಮಾಡಿದ ಉಪನ್ಯಾಸಗಳು ಈ ಸಂಕಲನದ ರೂಪದಲ್ಲಿ ಪ್ರಕಟ ವಾಗುತ್ತಿವೆ. ಸಂದರ್ಭಗಳನ್ನು ಅಲ್ಲಲ್ಲಿ ಸೂಚಿಸಿದೆ. 'ಶರಶೇತು ಬಂಧನ : ಒಂದು ಅಧ್ಯಯನ ಈ ಸಂಕಲನಕ್ಕಾಗಿಯೇ ಬರೆದದ್ದು.
ಈ ಲೇಖನಗಳನ್ನು ನನ್ನಿಂದ ಬರೆಯಿಸಿದ ಸಂಸ್ಥೆಗಳಿಗೆ, ಗೋಷ್ಠಿಗಳ ಸಂಯೋಜಕರಿಗೆ ನಾನು ಅಭಾರಿಯಾಗಿದ್ದೇನೆ. ಈ ಕೃತಿಗೆ ತಮ್ಮ ಮುನ್ನುಡಿಯ ಮೂಲಕ ಗೌರವವನ್ನು ತಂದಿತ್ತ, ಸಾಹಿತ್ಯ, ಕಲೆಗಳ ಅಭಿಜ್ಞರೂ, ಹಿರಿಯ ವಿದ್ವನ್ಮತ್ರರೂ ಆದ ಡಾ|| ಬಿ. ಎ. ವಿವೇಕ ರೈ ಅವರಿಗೆ ನಾನು ಋಣಿಯಾಗಿದ್ದೇನೆ.
ಕಲಾತ್ಮಕ ಮುಖಚಿತ್ರವನ್ನು ಒದಗಿಸಿದ, ಉತ್ತಮ ಚಿತ್ರಕಲಾವಿದ ಶ್ರೀ ಮೋಹನ ಸೋನಾ ಅವರಿಗೆ, ಛಾಯಾಚಿತ್ರಗಳನ್ನು ಒದಗಿಸಿದ ಪ್ರಸಿದ್ಧ ಚಿತ್ರಗ್ರಾಹಕರಾದ ಶ್ರೀ ಯಜ್ಞ ಮತ್ತು ಶ್ರೀ ಕೀರ್ತಿ ಅವರಿಗೆ ನನ್ನ ನೆನಕೆಗಳು.
ಯಕ್ಷಗಾನದ ಬಗೆಗೆ ನನ್ನೊಂದಿಗೆ ಚರ್ಚಿಸುತ್ತ, ಆಸಕ್ತಿ, ವಿಮರ್ಶಾ ಪ್ರಜ್ಞೆಗಳಿಗೆ ಚಾಲನೆ ನೀಡಿದ ನನ್ನ ಸಹಕಲಾವಿದರಿಗೆ, ಮಿತ್ರರಿಗೂ, ವಿಶೇಷತಃ ಕೆಲವು ಉಪಯುಕ್ತ ಸೂಚನೆಗಳನ್ನು ನೀಡಿದ ವಿಮರ್ಶಕ, ತಜ್ಞರಾದ ಶ್ರೀ ಅಮೃತ ಸೋಮೇಶ್ವರ ಮತ್ತು ಡಾ|| ಪುರುಷೋತ್ತಮ ಬಿಳಿಮಲೆ ಅವರಿಗೂ ನಾನು ಕೃತಜ್ಞ.
ಈ ಸಂಕಲನವನ್ನು ಮುದ್ರಿಸಿ, ಪ್ರಕಾಶಿಸಿದ ನ್ಯೂಸ್ಟಾರ್‌ ಪಬ್ಲಿಕೇಶನ್ಸ್‌ನ ವಿತ್ತು ಶ್ರೀ ಮುನಿಯಾಲು ಗಣೇಶ ಶೆಣೈ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು. ಹಲವು ತೊಡಕುಗಳ ಮಧ್ಯೆ, ಅವರು ಮಾಡಿದ ಪರಿಶ್ರಮ ದೊಡ್ಡದು.
ನನ್ನ ಕಲಾ, ಸಾಹಿತ್ಯ ಆಸಕ್ತಿಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತ ಬಂದಿರುವ ನಮ್ಮ ಕಾಲೇಜಿನ ಆಡಳಿತ ಮಂಡಳಿ, ಪ್ರಿನ್ಸಿಪಾಲರಾದ ಶ್ರೀ ಎನ್. ಮಾಧವಾಚಾರ ಮತ್ತು ನನ್ನ ನಿಯ ಸಹೋದ್ಯೋಗಿಗಳ ಸೌಜನ್ಯ ಸ್ಮರಣೀಯ.

ಎಂ. ಪ್ರಭಾಕರ ಜೋಶಿ


ಬೆಸೆಂಟ್ ಪದವಿ ಪೂರ್ವ ಕಾಲೇಜು
ಮಂಗಳೂರು-575003.