ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

11

ಕಲೆಯೊಂದರ ಮೇಲೆ ಆಧುನಿಕತೆಯು ಬೀರುವ ಪರಿಣಾಮದ ಬಗ್ಗೆ ನಡೆಸುವ ಚರ್ಚೆಗಳೆಲ್ಲವೂ ಬಹುಮಟ್ಟಿಗೆ ಹೀಗೇ ಇರುತ್ತವೆ. ಈ ಚರ್ಚೆಗಳಲ್ಲಿ ಕಲೆಯ ಬಗ್ಗೆ ಅಪಾರ ಗೌರವ ಪ್ರಕಟವಾಗುತ್ತದೆ. ಮತ್ತು ಆಧುನಿಕತೆಯ ಆಗಮನವನ್ನು ತಡೆಯಲಾಗದ ಅಸಹಾಯಕತೆಯೂ ಇರುತ್ತದೆ. ಆಧುನಿಕ ಮೌಲ್ಯಗಳನ್ನು ಪರಂಪರೆಯ ಕಲೆಗಳ 'ಭಾಷೆ' ಮೂಲಕ ವಿಶ್ಲೇಷಿಸುವ, ಮೌಲ್ಯ ಮಾಪನ ಮಾಡುವ ಕೆಲಸ ಮಾತ್ರ ಇದುವರೆಗೆ ನಡೆದಿಲ್ಲ. ಯಕ್ಷಗಾನದ ಮೂಲಕ ಆಧುನಿಕತೆಯನ್ನೇ ವಿಶ್ಲೇಷಿಸುವ ಒಂದು ಪ್ರಯತ್ನವನ್ನು ಯಾರಾದರೂ ಗಂಭೀರವಾಗಿ ಮಾಡಬಹುದಾಗಿದೆ.ಅದಕ್ಕೆ ಬೇಕಾದ ದ್ರವ್ಯವನ್ನು ಇಲ್ಲಿನ ಲೇಖನಗಳು ನೀಡುತ್ತವೆ.
ಡಾ. ಜೋಶಿಯವರ ಮೂರನೇ ಆಸಕ್ತಿಯು ಯಕ್ಷಗಾನದ 'ಪ್ರದರ್ಶನ'ಕ್ಕೆ ಸಂಬಂಧಿಸಿದೆ. ಯಕ್ಷಗಾನ ಪ್ರಸಂಗ ಮತ್ತು ಪ್ರದರ್ಶನ, ಒಡ್ಡೋಲಗ, ವೈಭವ, ಕಾಲಮಿತಿ ಮತ್ತು ಪರಂಪರೆ, ಮತ್ತಿತರ ಲೇಖನಗಳಲ್ಲಿ ಅವರು ಯಕ್ಷಗಾನ ಪ್ರದರ್ಶನ ಹೇಗಿರಬೇಕು, ಹೇಗಿದ್ದರೆ ಚೆನ್ನ ಎಂಬಿತ್ಯಾದಿ ವಿಷಯಗಳ ಬಗ್ಗೆ ಬರೆಯುತ್ತಾರೆ. ಯಕ್ಷಗಾನದ ಪ್ರತಿಯೊಂದು ಪ್ರದರ್ಶನವೂ ಒಂದು ಪ್ರತ್ಯೇಕ ಹಾಗೂ ಸ್ವತಂತ್ರ ಪಠ್ಯ ಎಂಬುದನ್ನು ಗುರುತಿಸುವ ಅವರು ಯಕ್ಷಗಾನದ ಪ್ರದರ್ಶನ ಸಂದರ್ಭವು ಹೀಗೆ ನಿರ್ಣಾಯಕ ಎಂಬುದರತ್ತ ನಮ್ಮ ಗಮನ ಸೆಳೆಯುತ್ತಾರೆ - "ಆ ದಿನದ ಸಂದರ್ಭ, ಅಂದರೆ ಕಾಲ, ಕಾಲಮಿತಿ, ಸ್ಥಳ, ಪರಿಸರ, ಅಂದಂದಿನ ಘಟನೆಗಳು. ಪ್ರೇಕ್ಷಕ ಸ್ವರೂಪ, ಪ್ರೇಕ್ಷಕರ ಪ್ರತಿಕ್ರಿಯೆಗಳು ಪ್ರದರ್ಶನವನ್ನು ಪ್ರಭಾವಿಸುತ್ತದೆ. ಅದೇ ರೀತಿ ಕಲಾವಿದರ ಹೆಸರು, ಊರಿನ ಹೆಸರುಗಳು ಸಾಮಾಜಿಕ ಘಟನೆಗಳ ಧ್ವನಿ, ರಾಜಕೀಯ ಶ್ಲೇಷೆ ಮೊದಲಾದ ಅಂಶಗಳೂ ಅಶುರಂಗಕ್ಕೆ ಸಹಜವಾದ ವ್ಯಕ್ತಿ ವಿನೋದಗಳೂ ಪ್ರದರ್ಶನದಲ್ಲಿ ಹಾದು ಹೋಗುತ್ತವೆ." (ಪು: 51). ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಇಂದಿಗೂ ಜನಪ್ರಿಯವಾಗಿರುವ 'ಸಂದರ್ಭ ಸಿದ್ಧಾಂತ'ದ ಪ್ರಯೋಜನವನ್ನು ಲೇಖಕರು ಇಲ್ಲಿ ಪಡೆದುಕೊಂಡಿದ್ದಾರೆ. ಸ್ವತಃ, ತಾಳಮದ್ದಳೆಯ ಪ್ರಮುಖ ಅರ್ಥದಾರಿಯಾಗಿರುವ ಪ್ರಭಾಕರ ಜೋಶಿಯವರು ಅರ್ಥಗಾರಿಕೆಯ ಬಗ್ಗೆ ಅಲ್ಲಲ್ಲಿ ಮೌಲಿಕ ಮಾತುಗಳನ್ನು ಹೇಳಿದ್ದಾರೆ. ಯಕ್ಷಗಾನವಾಚಿಕಾಭಿನಯ ಪ್ರಧಾನವೇ? ಯಕ್ಷಗಾನದಲ್ಲಿ ಭಾಷಾ ಪ್ರಯೋಗ, ಪ್ರಸಂಗ ಮತ್ತು ಅರ್ಥ, ಭೀಷ್ಮ ವಿಜಯ ಅರ್ಥ ಮತ್ತು ಅರ್ಥೈಸುವಿಕೆ, ಅರ್ಥದಲ್ಲಿ ಪುನರಾವರ್ತನೆ - ಮೊದಲಾದ ಲೇಖನಗಳಲ್ಲಿ ಅವರು ಯಕ್ಷಗಾನದಲ್ಲಿ ಅರ್ಥಗಾರಿಕೆ ಸಾಗಬೇಕಾದ ರೀತಿಯ ಬಗ್ಗೆ ವಿವೇಚನೆ, ವಿಶ್ಲೇಷಣೆ ನಡೆಸಿದ್ದಾರೆ. ಯಕ್ಷಗಾನದ ಅರ್ಥಗಾರಿಕೆಯೊಂದು ಅಸಾಮಾನ್ಯವಾದ ಅದ್ಭುತ ಲೋಕ. ರಂಗದಲ್ಲಿ ಅದು ಅರಳಿಕೊಳ್ಳುವ ಬಗೆ ಅದ್ಭುತವಾದುದು. ಈ ಅದ್ಭುತ ಲೋಕದ ಬಗ್ಗೆ ಡಾ. ಜೋಶಿಯವರು ಬೇರೆಡೆಗಳಲ್ಲಿ ಸಾಕಷ್ಟು ಬರೆದಿದ್ದು, ಈ ಸಂಪುಟದಲ್ಲಿ ಅದರ ಔಚಿತ್ಯದ ಬಗ್ಗೆ ಹೆಚ್ಚು ಒತ್ತು ನೀಡಿ ಬರೆದಿದ್ದಾರೆ. "ಹೀಗೆ ಪ್ರಸಂಗ, ಆಕರ ಕಾವ್ಯಗಳೊಂದಿಗೆ ಪಾತ್ರಧಾರಿಯ

• ಡಾ. ಎಂ. ಪ್ರಭಾಕರ ಜೋಶಿ