ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ೨9] ಮೋಹನತರಂಗಿಣಿ ದಪ್ಪಕ ರತಿಯ ವಸಂತಕೇಳಿಯ ಚಿತ್ರವಿಪ್ಪುದ ನೋಡಿ ಸಂತಸದಿ || ಚಪ್ಪರಮಂಚದ ಮೇಲೆ ಕುಂಕುಮದಲ ಸುಪ್ಪತ್ತಿಗೆಯಲ್ಲಿ ಮಂಡಿಸಿದi೧೨ ಕರಿಗಮನೆಯರತಂದ ರುರತ್ನನಯ ಹೊನ್ನ ಹರಿವಾಣದುಂಬಿದಾರತಿಯ? ತಿರುಹಿ ನಿವಾಳಿಸಿ ಜಾಲಗುಬೊಲ್ಲೆಂದೆಂದು ಸಿರಿವೆತ್ತು ನಿಂದರಿಕ್ಕಲದಿ |೧೩| ನೋಡಿದ ವರವಧಟಿಯರ ನುಣೋಗವಮಾತಾಡಿದವಿನಯಪಚರದಿ|| ಬೇಡಿದ ವಸ್ತ್ರ ಭೂಷಣಪರಿಮಳವಿತ್ತು ಮಾಡಿದ ಮನಕೆ ಸಂತಸವ ೧೪। ಇಳಯಾನ ಮನದಿಂಗಿತವಳತು ಹೂಂ ಚೆಳೆವಿಡಿದು ನೇತ್ರೆಯರು || ಎಳವೆಣ್ಣುಗಳ ಬೆಸೆಂದು ಸತಿಯರ ನಿಳಯಕ ಬೀಡಿಸಿದರು|೧೫ - ರಾಣಿಯರೋಗ ಹರೆದುದು ಪೆಂಡೆ ವಾಣಿಕವಹ ಪಟ್ಟದರಸಿ | ಚೂಣಿನೋಟದ ಸೊಬಗಿಂದೆ ಪೂಗೊಲನಕಾಣಿಸಿದಳು ಕಾಂತನೆಡೆಗೆ |೧೬

  • *

ಸುಖವೇನು ಲಕ್ಷ್ಯಸುರಾರ್ಚಿತಪದರು ಬಕುತಿಯ ಮಾನೇನುತ| ಅಕಳ೦ಕಜಾಣ ಬಾಣಾಸುರ ತನ್ನಿಯ ಮುಖವನಜವನರಿಸಿದ ||೨೯|| ದಪ್ಪಗನರ್ಧಾಂಗಿಯ ರೂಪಿಗಿಮ್ಮಡಿ ಸುಪ್ಢಾನಿತೆ ಕೇಳು || ಪುಪ್ಪಸುಗಂಧಗಂಧಿಯರು ಬಂದರು ಬಾಣನುಪ್ಪವಡವನು ಪಾಡುವೊಡೆ | ಮೇಳವ ಮಾಡಿ ದಂಡಿಗೆವಿಡಿವರು ಶುದ್ಧ ಸಾಳಗ ಸಂಕೀರ್ಣವಿಧದಿ || ಆಳಾಪ ರಾಯ ನೇಮಗಳಿಂದೆ ನೂರೆಂಟು ತಾಳಗೀತಗಳ ಪಾಡಿದರು||೩೧|| ನಾರಾಣಿ ದೇಶಾಕ್ಷಿ ಗುರ್ಜರಿ ದೇವಗಾಂಧಾರಿ ಗುಂಡಕ್ರಿಯೆಗಳಲಿ || ಆರಭಿ ಸಮಂತ ಮಲಹರಿಯಿ೦ದೆ ಕೈವಾರಿಸಿ ಖಳನ ಪಾಡಿದರು |೩೦|| ಬಲಿಗಳ ಸಂಪೂರ್ಣಚಂದ್ರ ದೈತ್ಯೇಂದ) ಪೆರ್ಬಲಿಸಮ್ಮ ವಸನತದ ಶನ ಲಲಿತಾಂಗಿಯ ತೋಳ ತೆಕ್ಕಸದ್ಯಕ್ಕೆ ದೊಲಿದೇಪೇಟಿ ಮಾಡಿದರು |೩೩|| ಅಷ್ಟದಿಗ್ರಮನೋಭಂಗ ನಿಶಾಚರಭೀಷ್ಟ ಸಾಸಿರ ಭುಜೋತ್ತುಂಗ | ಪವಾಸ್ಯಪಿತ' ಪದಭ್ಯಂಗ ಶ್ರೀ ಶಿವಲಿಂಗ ನಿಷ್ಟೆ ಏಕಿಂದು ಮಾಡಿದರು |೩೪|| ಕ. ಪ, ಆ-1. ಸುಪ್ರಭಾತದ ಹಾಡುಗಳನ್ನು , 2 ಚಮ್ಮ, 3. ಕುಮಾರಸ್ವಾಮಿಯ ತಂದೆಯಾದ ಶಿವನ.