ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥಗಾರಿಕೆಯ ವ್ಯಾಪ್ತಿ ವಿಸ್ತಾರ, ಯಕ್ಷಗಾನದ ಸಂವಾದಿ ಕಲೆಗಳು, ತಾಳಮದ್ದಳೆಯ ಬೌದ್ಧಿಕತೆ, ಅರ್ಥಗಾರಿಕೆಯಲ್ಲಿ ತನ್ನ ಆಯಾಮ, ಸಂಘಟನೆ ದಾಖಲಾತಿ, ಜಾಗತಿಕ ಪ್ರಸರಣ ಮುಂತಾದ ವಿಸ್ತ್ರತ ಚರ್ಚೆಯಿದೆ. ಈ ಕೃತಿಯನ್ನು ಓದಿದವರಿಗೆ ಜೋಶಿಯವರ ವ್ಯಕ್ತಿತ್ವದೊಂದಿಗೆ ಯಕ್ಷಗಾನದ ಕಲಾ ಶ್ರೇಷ್ಠತೆಯ ಅರಿವಾಗುತ್ತದೆ. ಈ ಕಾರಣಕ್ಕಾಗಿ ಪ್ರಕಾಶಕ ಕಲ್ಲೂರು ನಾಗೇಶರನ್ನು ಮತ್ತು ಡಾ. ಸುಂದರ ಕೇನಾಜೆಯವರನ್ನು ನಾನು ಅಭಿನಂದಿಸುತ್ತೇನೆ.
ಲೇಖನದ ಕೊನೆಯಲ್ಲಿ ನಾನು ಹೇಳಬೇಕಾದುದು ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಗ್ರಂಥ ಮಾಲೆಯ ಮೂಲಕ ಹೊರಬಂದ 'ಪ್ರಗಲ್ಯ ಚಿಂತಕ ಅರ್ಥವಿಹಾರಿ ಡಾ. ಎಂ. ಪ್ರಭಾಕರ ಜೋಶಿ' ಕೃತಿಯ ಬಗ್ಗೆ ಲೇಖಕ ಚಂದ್ರಶೇಖರ ಮಂಡೆಕೋಲು ಜೋಶಿಯವರ ಜೀವನ ಸಾಧನೆಗಳನ್ನು ದಾಖಲಿಸಿಕೊಟ್ಟಿದ್ದಾರೆ. ಜೋಶಿಯವರು ಹುಟ್ಟಿದ ಕಾರ್ಕಳ ತಾಲೂಕಿನ ಮಾಳದ ಪರಿಸರ, ಬಾಲ್ಯ, ತಂದೆ ತಾಯಿ, ಕುಟುಂಬ ಜೀವನಗಳ ಬಗ್ಗೆ ಹೇಳುವ ಮೂಲಕ ಯಕ್ಷಗಾನ ಕಲೆ, ಸಾಹಿತ್ಯ, ಸಾಧನೆ ಜೋಶಿಯವರಿಗೆ ವಂಶ ಪಾರಂಪರ್ಯವಾಗಿ ಬಂದಿದೆ. ಸಂಸ್ಕೃತಿ ಪಾಂಡಿತ್ಯ, ಸಾಧನೆ ಅವರ ಹುಟ್ಟು ಗುಣ ಎನ್ನುತ್ತ “ಜೋಶಿ ಎಂದರೆ ಜ್ಯೋತಿಷಿ. ಜೋಶಿಯವರಿಗೆ ಯಕ್ಷಗಾನದ ಮಟ್ಟಿಗೆ ದೊಡ್ಡ ಹಿನ್ನೆಲೆ ಯಂತಿದ್ದವರು ಅಜ್ಜ (ಮಾತಾಮಹ) ಅನಿರುದ್ಧ ಭಟ್ಟರು” ಎನ್ನುತ್ತ

ಕುಟುಂಬ ಹಿನ್ನೆಲೆ, ಮಾಳದ ಯಕ್ಷಗಾನ, ಜೋಶಿಯವರ ಶಿಕ್ಷಣ, ತಾಳಮದ್ದಳೆಯ ಆರಂಭದ ಹಂತಗಳನ್ನು ವಿವರಿಸುತ್ತ ಮಾಳದಲ್ಲಿ ಹುಟ್ಟಿದ ತೊರೆ ತೆರೆಯಾಗಿ ಸಮುದ್ರವಾದ ಕತೆಯನ್ನು ಸುಂದರವಾಗಿ ನೀಡಿದ್ದಾರೆ. ಮಂಡೆಕೋಲು ಇವರ ಈ ಕೃತಿ ಜೋಶಿಯವರ ಸಾಧನೆಯ ನಡೆಯ ಪೀಠಿಕೆಯ ಚಂಡೆಕೋಲು.
ಇಷ್ಟೆಲ್ಲಾ ಜೋಶಿಯವರ ಬಗ್ಗೆ ಓದಿದರೂ ಕೂಡಾ ಅವರು ಯಾರ ಅಳತೆಗೂ ಅರ್ಥವಾಗದ ಅರ್ಥಧಾರಿ ಎನ್ನುವುದು ಸತ್ಯ ಅನಿಸಿಕೆ. ಯಾವಾಗ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದೇ ಯೋಚಿಸಲಾಗದ ವ್ಯಕ್ತಿತ್ವ, ಪುರಾಣ ಲೋಕವನ್ನು ತುಳುನಾಡಿಗೆ ತರುವ ತುಳುನಾಡನ್ನು ಪುರಾಣಕ್ಕೊಯ್ಯುವ ಸಾಮರ್ಥ್ಯ ಅವರಲ್ಲಿದೆ. ಏಳು ಭಾಷೆಗಳ ಪಂಡಿತರಾಗಿ, ಪ್ರಾಂಶುಪಾಲರಾಗಿ, ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಮಿಂಚಿದ ಜೋಶಿ ಯಾವ ವಿಷಯದ ಬಗ್ಗೆಯೂ ಮಾತನಾಡಬಲ್ಲ ವಾಗಿ, ಕೃಷ್ಣನ ಚಾಣಾಕ್ಷತನ, ಭೀಮನ ಗಂಡುತನ, ಧರ್ಮರಾಯನ ಸಮಾಧಾನವನ್ನು ಮೈಗೂಡಿಸಿಕೊಂಡ ಮಾಳದ ಪ್ರಭಾಕರ ಜೋಶಿಯವರು ಶತಾಯುಷಿಯಾಗಿ ಬಾಳಬೇಕು. ಅವರ ಬೌದ್ಧಿಕ ಚಿಂತನೆಗಳು ಸಮಾಜಕ್ಕೆ ಪರಿಷ್ಕಾರದ ಪಾಠವಾಗಬೇಕು ಎನ್ನುತ್ತಾ ನನಗೆ 'ಯಕ್ಷ ಪ್ರಭಾಕರ'ದ ಬಗ್ಗೆ ಬರೆಯಲು ಅವಕಾಶ ಕೊಟ್ಟ ಯಕ್ಷಮಿತ್ರ ಕದ್ರಿ ನವನೀತ ಶೆಟ್ಟಿಯವರಿಗೆ, ಪಟ್ಲ ಫೌಂಡೇಶನಿನ ಪಟ್ಲ