ಪುಟ:ಯಶೋಧರ ಚರಿತೆ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨

ಯಶೋಧರ ಚರಿತೆ



ಇತಿಹಾಸವೆಂಬ ವಿಮಳಾ-
ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ-
ನ್ವಿತಮಾಗಿರೆ ಕಥೇ ಬುಧಸಂ-
ತತಿಗಕ್ಷಯ ಸುಖಮನೀವುದೊಂದಚ್ಚರಿಯೇ೨೫

ಪರೆವುದು ದುರಿತತಮಿಸ್ರಂ
ಪೊರೆಯೇರುದಮಳದೃಷ್ಟಿಕುವಳಯ ವನಮಾ-
ಚರಿಪ ಜನಿಕ್ಕೆ ಯಶೋಧರ
ಚರಿತ ಕಥಾಶ್ರವಣಮೆಂಬ ಚಂದ್ರೋದಯದೊಳ್೨೬

ಶೀರ್ಷಾಭರಣವೆಂಬ ಧರೆಗು-
ತ್ಕರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ
ಹರ್ಷಮನೀವುದು ಭಾರತ
ವರ್ಷದ ಸುವಿಷಯದೊಳ್ ರಾಜಪರ೦೨೭



೨೫. ಇತಿಹಾಸವೆಂಬುದು ನಿರ್ಮಲವಾದ ಅಮೃತದ ವಾರಧಿ. ಅದರಲ್ಲಿ ಹುಟ್ಟಿದ
ಕಲ್ಪವೃಕ್ಷದಂತೆ ಈ ಕಥೆ ರಸಾತ್ಮಕವಾಗಿ ಹುಟ್ಟಿದೆ. ಇದು ಬುಧ ಸಮುದಾಯಕ್ಕೆ
ಅಪಾರವಾದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.೧೨ ೨೬.
ಯಶೋಧರ ಚರಿತವನ್ನು ಆಲಿಸುವುದೆಂದರೆ ಚಂದ್ರೋದಯವಾದಂತೆ. ಆಗ
ಕತ್ತಲೆಯಂತಿರುವ ಪಾಪವೆಲ್ಲ ತೊಲಗುತ್ತದೆ. ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ
ನಿರ್ಮಲವಾದ ಸಮ್ಯಗ್ದೃಷ್ಟಿ, ಜೀವದಯಾಷ್ಟಮಿಯನ್ನು ಆಚರಿಸುವ ಜನರಿಗೆ
ಈ ಸಮ್ಯಗ್ದರ್ಶನವು ಈ ಕಥೆಯನ್ನು ಕೇಳಿದಾಗ ನೈದಿಲೆಗಳಂತೆ ತಾನಾಗಿಯೇ
ವಿಕಾಸಗೊಳ್ಳುತ್ತದೆ. ೨೭. ಭರತ ಖಂಡದ ಅಯೋಧ್ಯಾ ದೇಶಕ್ಕೆ ರಾಜಪುರವೇ ರಾಜಧಾನಿ.
ಅದು ಇಡೀ ಲೋಕಕ್ಕೆ ಒಂದು ಶಿರೋಭೂಷಣದಂತೆ ಶೋಭಿಸುತ್ತಿತ್ತು. ಅಲ್ಲಿ ಮೇಲು
ಮಟ್ಟದ ಸೊಬಗು ನೆಲೆನಿಂತು ಎಲ್ಲ ಜನರಿಗೂ ಸಂತೋಷವನ್ನು ಕೊಡುತ್ತಿತ್ತು.