ಪುಟ:ಯಶೋಧರ ಚರಿತೆ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ಯಶೋಧರ ಚರಿತೆ


ದೇವ ಕನಸಿದು ಕರಂ ದೋ
ಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂ
ದಾವಣಿಗುರಿಯಂ ತರಿದೊಡೆ
ದೇವಿ ಶುಭೇತರವಿನಾಶಮಂ ದಯೆಗೆಯ್ಗುಂ೧೩


ಮುಂತರಿಪೆ ತಾಯ ವಚನದೊ
ಳ೦ತು ಶುಭೇತರ ವಿನಾಶ ಶಬ್ದಮಿಳೇಶಂ
ಶಾಂತಂ ಪಾಪಮೆನುತ್ತುಂ
ಶಾಂತಮನು ಪೇಸಿ ಮುಚ್ಚಿಕೊಂಡಂ ಕಿವಿಯಂ೧೪


ಮೇಗಂ ಬಗೆವೊಡೆ ವಧೆ ಹಿತ
ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಳ್
ಈಗಳೊ ಮೇಣ್‌ ಆಗಳೊ ಮೇಣ್‌
ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ೧೫


ಎ೦ಬ ಮಾತು ತಪ್ಪದಷ್ಟೆ! ೧೩. 'ಅಪ್ಪಾ ಈ ಕನಸು ಬಹಳ ಕೆಡುಕುಂಟಾಗುವುದನ್ನೇ
ಸೂಚಿಸುತ್ತದೆ. ಆದುದರಿಂದ ಇದನ್ನು ಕಡೆಗಣಿಸಬಾರದು. ನಿನ್ನ ಖಡ್ಗಧಾರೆಯಿಂದ,
ಕಟ್ಟಿದ ಕುರಿಯನ್ನು ಕತ್ತರಿಸಿ ಅರ್ಪಿಸಿದೆಯೆಂದಾದರೆ ಚಂಡಿಕಾದೇವಿ
ಅಮಂಗಲವನ್ನೆಲ್ಲ ದ್ವಂಸ ಮಾಡಿ ದಯೆಯನ್ನು ತೋರಿಸಿಯಾಳು' ಎಂದು
ಸಲಹೆಯಿತ್ತಳು. ೧೪. ತಾಯಿಯ ಮಾತಿನಲ್ಲಿ ಅಮಂಗಲ ವಿನಾಶದ ನುಡಿ
ಬಂದುದು ಅವನಿಗೆ ಮುಂದೆ ಬರುವ ಅಮಂಗಲವನ್ನೇ ಸೂಚಿಸಿದಂತೆ
ಭಾಸವಾಯಿತು.೪೮ ಅವನು “ಶಾಂತಂ ಪಾಪಂ! ಶಾಂತಂ ಪಾಪಂ!" ಎನ್ನುತ್ತ
ಕಿವಿ ಮುಚ್ಚಿಕೊಂಡನು. ೧೫. “ಅಮ್ಮಾ! ಮೇಲ್ಮೆಯನ್ನು ಬಯಸುವುದಾದರೆ,
ಕೊಲೆ ಮನುಷ್ಯನಿಗೆ ಹಿತವನ್ನುಂಟು ಮಾಡಲಾರದು, ಮನುಷ್ಯನ ಬಾಳುವೆ
ಶಾಶ್ವತವಾಗಿರುತ್ತದೆಯೆ? ಬುದ್ಧಿವಂತನಾದವನು ಈಗಲೋ ಇನ್ನಷ್ಟು ಹೊತ್ತಿನಲ್ಲೋ
ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೇ” ಎಂದು ತಾಯಿಗೆ