ಪುಟ:ಯಶೋಧರ ಚರಿತೆ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಶೋಧರ ಚರಿತೆ

೭೧

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ-
ತೆಮಗೆ ಬಲೆಯಾಯ್ತು ಹಿ೦ಸನ
ಮಮೋಘಶರಮಾಯ್ತು ಕಡೆದುದಾತ್ಮಕುರಂಗಂ೨೮


ಎಂದು ಮನಂ ಮರುಗುವಿನಂ
ನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆರೆದೊ-
ಯ್ವಂದದೆ ಬಂದೀ ರಾಜ್ಯದ
ದಂದುಗಮೇಕೆಂದು ತೊಳೆಯಲುದ್ಯತನಾದಂ೨೯


ಪರಿವಾರಮಂ ಪ್ರಧಾನರ-
ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ-
ಧರನಿಂತು ತಪಕೆ ನಡೆಯ-
ಲ್ಕಿರೆ ಮೃತ್ಯುವಿನಂತೆ ಅರಸಿ ಬ೦ದಿಂತೆಂದಳ್‌೩೦


ಅರಿಯುವರು.? ೨೮. “ಅಮೃತಮತಿಯೆಂಬ ಪಾತಕಿಯ-ಮಾಯೆಯೇ
ವನವಾಯಿತು. ತಾಯಿಯಾದ ಚಂದ್ರಮತಿಯ ಮಾತೇ ನನಗೊಂದು ಬಲೆಯಾಗಿ
ಪರಿಣಮಿಸಿತು. ಹಿಂಸೆಯೇ ಅಮೋಘವಾದ ಬಾಣವಾಯಿತು. ಆತ್ಮವೆಂಬ
ಜಿಂಕೆಯು ಇದಕ್ಕೆ ಬಲಿಬಿದ್ದಿತು.”೫೧ ೨೯. ರಾಜನ ಮನಸ್ಸು ಮರುಕಕ್ಕೆ ಒಳಗಾಗಿ
ಸಂಕಟಗೊಂಡಿತು. ಅಲ್ಲಿಂದ ಹೊರಟು ಅವನು ಮನೆ ಸೇರಿದನು. ಅಲ್ಲಿಯೂ
ಉದ್ವೇಗವು ತಗ್ಗಲಿಲ್ಲ. ಅವನು ತನಗೆ ಈ ರಾಜ್ಯಭಾರದ ಹೊರಯೇಕೆ ಎಂದು
ಎಣಿಸಿಕೊಳ್ಳುತ್ತಾ ಅದನ್ನು ಬಿಟ್ಟುಬಿಡುವ ನಿರ್ಧಾರವನ್ನು ಕೈಗೊಂಡನು. ೩೦.
ಪರಿವಾರವನ್ನೂ ಪ್ರಧಾನರನ್ನೂ ಇರಿಸಿಕೊಂಡು, ತನ್ನ ಮಗನಾದ ಯಶೋಮತಿಗೆ
ರಾಜ್ಯವನ್ನೊಪ್ಪಿಸಿ ತಪಸ್ಸಿಗೆ ಹೊರಡಬೇಕೆಂದು ಸಂಕಲ್ಪಿಸಿದನು. ಅಷ್ಟರಲ್ಲಿ ಮೃತ್ಯುವೇ
ಎದುರು ಬಂದಂತೆ ಅಮೃತಮತಿ ಅಲ್ಲಿಗೆ ಬಂದಳು. ೩೧. “ದೇವಾ, ನಾನೂ