ಪುಟ:ಯುಗಳಾಂಗುರೀಯ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦

ಕೂಡದು ; ಕನ್ಯಗೆ ಕನ್ಯಾತ್ವವನ್ನು ಹೋಗಲಾಡಿಸುವುದೇ ಈ ವಿವಾಹದ.
ಉದ್ದೇಶವಾಗಿದೆ. ಈ ಜನ್ಮದಲ್ಲಿ ನೀವಿಬ್ಬರೂ ಪರಸ್ಪರ ನೋಡುವಿರೋ
ಇಲ್ಲವೋ ಅದನ್ನು ಹೇಳುವುದಕ್ಕಾಗುವುದಿಲ್ಲ. ಒಂದುವೇಳೆ ನೋಡಿ
ದರೂ ಪರಸ್ಪರ ಗುರುತು ಹಿಡಿಯಲಾರಿರಿ, ಗುರುತು ಹಿಡಿಯುವುದಕ್ಕೆ
ನಾನೊಂದುಪಾಯವನ್ನು ತೋರಿಸಿಕೊಡುವೆನು; ನನ್ನ ಕೈಯಲ್ಲೀಗ ಎರಡು
ಉಂಗುರಗಳಿವೆ; ಎರಡೂ ಒಂದೇಪ್ರಕಾರವಾಗಿ ಮಾಡಲ್ಪಟ್ಟುದು ; ಉಂಗು
ರಕ್ಕೆ ಹಾಕಿರುವ ಹರಳುಗಳು ಪ್ರಾಯಶಃ ಎಲ್ಲಿಯೂ ಸಿಕ್ಕತಕ್ಕುವಲ್ಲ ;
ಎರಡು ಉಂಗುರಗಳ ಹರಳುಗಳಲ್ಲಿಯೂ ಹಿಂದುಗಡೆಯಲ್ಲಿ ಒಂದೊಂದು
ಮಯೂರವನ್ನು ಒಂದೇ ಸಮನಾಗಿ ಕೆತ್ತಿದೆ ; ಒಂದುಂಗುರವನ್ನು ವರ
ನಿಗೂ ಒಂದುಂಗುರವನ್ನು ವಧುವಿಗೂ ಕೊಡುವೆನು ; ಅ೦ತಹ ಉಂಗುರವು
ಮತ್ತಾರಿಗೂ ಸಿಗದು, ಮತ್ತಾರಲ್ಲಿಯೂ ಇಲ್ಲ. ಅದರಲ್ಲಿ ಕೆತ್ತಲ್ಪಟ್ಟಿರುವ
ಮಯೂರವು ಬೇರೊಬ್ಬರು ಕೆತ್ತುವುದಕ್ಕಾಗುವುದಿಲ್ಲ ; ನಾನೇ ಸ್ವಂತ
ವಾಗಿ ಕೆತ್ತಿ ಮಾಡಿದುದು ; ವಧುವಾವ ಪುರುಷನ ಕೈಯಲ್ಲಾ ಉಂಗುರ
ವನ್ನು ನೋಡುವಳೋ ಅವನೇ ಅವಳಿಗೆ ಪತಿಯು ; ಅದೇಪ್ರಕಾರ ವರ
ನಾವಳ ಕೈಯಲ್ಲಾ ಉಂಗುರವನ್ನು ನೋಡುವನೋ ಅವಳೇ ಅವನಿಗೆ
ಪತ್ನಿ : ನೀವಿಬ್ಬರೂ ಈ ಉಂಗುರಗಳನ್ನು ಕಳಿಯಕೂಡದು, ಅವುಗಳನ್ನಾ
ರಿಗೂ ಕೊಡಕೂಡದು, ಅನ್ನಕ್ಕೆ ಇಲ್ಲದಿದ್ದರೂ ಅದನ್ನು ಮಾರಕೂಡದು ;
ಅಲ್ಲದೆ ಇಂದಿನ ಮೊದಲ್ಗೊಂಡು ಐದುವರ್ಷಗಳ ತನಕ ನಿಮ್ಮಿಬ್ಬರಲ್ಲೊ
ಬ್ಬರೂ ಈ ಉಂಗುರಗಳನ್ನು ಧರಿಸಕೂಡದು ; ಇಂದು ಮಾಘಶುದ್ಧ
ಪಂಚಮಿ. ರಾತ್ರಿ ಹನ್ನೊಂದು ಘಳಿಗೆ ಮೇಲಾಗಿದೆ, ಮುಂದೆ ಐದನೆಯ
ವರ್ಷದ ಮಾಘಶುದ್ಧ ಪಂಚಮಿಯ ರಾತ್ರಿ ಹನ್ನೊಂದು ಘಳಿಗೆಗಳಾಗುವವ
ರೆಗೆ ಈ ಉಂಗುರಗಳನ್ನು ನೀವಾರೂ ಧರಿಸಕೂಡದು, ಧರಿಸುವುದನ್ನು
ನಿಷೇಧಿಸಿದ್ದೇನೆ; ನನ್ನೀ ಅಪ್ಪಣೆಯನ್ನು ಮೀರಿದರೆ ಗುರುತರವಾದ ಅಮಂಗ
ಳವು ಸಂಭವಿಸುವುದು ” ಎಂದು ಹೇಳಿದನು.
ಹೀಗೆಂದು ಹೇಳಿ ಆನಂದಸ್ವಾಮಿಯು ಹೊರಟುಹೋದನು.ಧನ
ದಾಸನು ಮಗಳ ಕಣ್ಣುಗಳನ್ನು ಬಿಚ್ಚಿದನು. ಹಿರಣ್ಮಯಿಯು ಕಣ್ಣುಬಿಟ್ಟು
ನೋಡಿದಳು; ಪುರೋಹಿತನೂ ಅವಳ ತಂದೆಯೂ ಅಲ್ಲಿಬ್ಬರೇ ಇದ್ದರು ;