ಪುಟ:ಯುಗಳಾಂಗುರೀಯ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮

ಡರೂ ಕಾಣಬಹುದು ; ಆದರೆ ಸ್ವಾಮಿಯನ್ನು ಸೇರುವುದೆನಗಿಷ್ಟವಿಲ್ಲ__
ಅಥವಾ ಚಿರಕಾಲವೂ ಅನ್ಯಪುರುಷನ ಮೂರ್ತಿಯನ್ನೇಕೆ ಮನಸ್ಸಿನಲ್ಲಿ
ಅಂಕಿತಮಾಡಿಟ್ಟುಕೊಂಡಿರಲಿ ? ದುರಂತವಾದೆನ್ನ ಮನವನ್ನು ಶಾಸನ
ಮಾಡುವುದು ಒಳ್ಳೆಯದು, ಹಾಗೆ ಶಾಸನಮಾಡದಿದ್ದರೆ ಧರ್ಮವನ್ನು ಬಿಟ್ಟು
ಪತಿತೆಯಾಗಿ ಹೋಗುವೆನು " ಎಂದು ಭಾವಿಸಿಕೊಂಡಳು.
ಆ ಸಮಯದಲ್ಲಿ ಅಮಲೆಯು ವಿಸ್ಮಯವಿಹ್ವಲೆಯಾಗಿ ಬಂದು
" ಏನೋ ಮಹದ್ವಿಪತ್ತು ಬಂದಹಾಗಿದೆ ! ಏನೂ ಗೊತ್ತಾಗುವುದಿಲ್ಲ !
ಏನಾದೀತೊ ! ಹೇಳುವುದಕ್ಕಾಗುವುದಿಲ್ಲ " ವೆಂದು ಭಯಗೊಂಡು ಹೇಳಿ
ದಳು.
ಹಿರಣ್ಮಯಿ - ಏನಾಯಿತು ?
ಅಮಲೆ - ರಾಜರ ಅರಮನೆಯಿಂದ ನಿನಗೆಸಲವಾಗಿ ಪಲ್ಲಕ್ಕಿ, ದಾಸ
ದಾಸಿಯರು ಬಂದಿದ್ದಾರೆ - ನಿನ್ನನ್ನು ಕರೆದುಕೊಂಡು ಹೋಗುವರಂತೆ.
ಹಿರಣ್ಮಯಿ - ನಿನಗೆ ಹುಚ್ಚು ಹಿಡಿಯಿತು. ನನ್ನನ್ನು ಅರಮನೆಗೇಕೆ
ಕರೆದುಕೊಂಡು ಹೋಗುವರು ?
ಹೀಗೆ ಮಾತಾಡುತಿರುವಾಗ, ರಾಜದೂತಿಯು ಬಂದು ಪ್ರಣಾಮ
ವನ್ನು ಮಾಡಿ, " ರಾಜಾಧಿರಾಜ ಪರಮ ಭಟ್ಟಾರಕ ಶ್ರೀ ಮದನದೇವನು
ಹಿರಣ್ಮಯಿಯನ್ನು ಈ ನಿಮಿಷದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಅರಮನೆಗೆ
ಕರತರಬೇಕೆಂದು ಆಜ್ಞಾಪಿಸಿರುವನು " ಎಂದಳು.
ಹಿರಣ್ಮಯಿಯು ಆಶ್ಚರ್ಯಪಟ್ಟಳು ; ಆದರೆ ಬರುವುದಿಲ್ಲವೆಂದು ಹೇಳು
ವುದಕ್ಕೆ ಆಗದು ; ರಾಜಾಜ್ಞೆಯು ಅಲಂಘ್ಯವಾದುದು. ಅದಲ್ಲದೆ ರಾಜಾ
ಮದನ ದೇವನ ಅರಮನೆಗೆ ಹೋಗಲಾದ ಶಂಕೆಯೂ ಇಲ್ಲ ; ಆತನು
ಪರಮ ಧಾರ್ಮಿಕನೆಂತಲೂ ಜಿತೇಂದ್ರಿಯನೆಂತಲೂ ಖ್ಯಾತನಾಗಿದ್ದಾನೆ ;
ಅವನ ಪ್ರತಾಪದಿಂದಾವ ರಾಜಪುರುಷನಿಗಾಗಲಿ, ಹೆಂಗಸರಮೇಲೆ ಅತ್ಯಾ
ಚಾರವನ್ನು ನಡೆಯಿಸಲು ಧೈರ್ಯವಿರದು.
ಹಿರಣ್ಮಯಿಯು ಅಮಲೆಯನ್ನು ಕುರಿತು, " ಅಮಲೆ ! ನಾನು ರಾಜ
ಸಂದರ್ಶನಕ್ಕೆ ಹೋಗಲು ಸಿದ್ದವಾಗಿದ್ದೇನೆ, ನೀನೂ ಸಂಗಡ ಬಾ " ಎಂದಳು.
ಅಮಲೆಯು ಒಪ್ಪಿಕೊಂಡಳು.