ಪುಟ:ರಮಾನಂದ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಸತೀಹಿತ್ಯ ಷಿಣಿ 5 ಸೌಮ್ಯ:-(ಆತುರದಿಂದ) ಯುವಾನನೇ ಏನಾಗಿದೆ ? ಇದೇಕೆ ಹೀಗೆ ಆರ್ತನಾಗಿರುತ್ತೀಯೆ? ಬೇಗ ಹೇಳು. ಯುವಾನ:-ಕುಮಾರನಿಗೂ ಮತ್ತು ನಮಗೂ ಗ್ರಹಚಾರವು ಕ್ರೂರವಾಗಿ ತಿರುಗಿದೆ. ಪ್ರತಿಯೊಂದು ವಿಚಾರವೂ ವಿಷಮವಾಗಿಯೇ 5 ಪರಿಣಮಿಸಿರುತ್ತದೆ. ಸಾಲದುದಕ್ಕೆ ಈ ನಟ್ಟಿರುಳಲ್ಲಿ ನೀವು ಇಲ್ಲಿ ರು ವುದಂತೂ ಹೇಳಿ ಕೇಳುವಂತೆಯೇ ಇಲ್ಲ. - ರಮಾ:-- (ಭಯಚಕಿತನಾಗಿ), ಭಗವತ್ಸಹಾಯವಿದ್ದರೆ, ಎಲ್ಲವೂ ಸುಖರೂಪವಾಗಿಯೇ ತಿರುಗುವುವು. ಅದಿಲ್ಲವಾದರೆ ಯಾರು ಹೇಗಿ ದ್ದರೂ ಕಷ್ಟವು ತಪ್ಪಿದುದಲ್ಲ. ಅದಿರಲಿ; ವಿಚಾರವೇನೆಂಬುದನ್ನು 10 ಸ್ಪಷ್ಟ ಪಡಿಸು, ಯುವಾನ:-(ಕಂಪಿತಸ್ವರದಿಂದ) ಕುಮಾರ ! ಏನು ಹೇಳಲಿ ? ನಾನು ನಾಳೆಯ ಪಾಠವನ್ನು ಮನನಮಾಡಿಕೊಳ್ಳುತ್ತ ನನ್ನ ಕಿರುಮನೆ ಯಲ್ಲಿ ಒಳಗೆ ಕುಳಿತಿದ್ದೆನು, ಗುರುಗಳು ನಳ, ಕಳಿಂಗ, ರವಿವರ್ಮ ರೊಡನೆ ಅಲ್ಲಿಗೆ ಬಂದು ನನ್ನನ್ನು ಕೂಗಿದರು, ನಾನು ಸಂಗತಿಯೇ 15 ನೆಂಬುದನ್ನು ತಿಳಿಯದೆ, ಭಯ ಕೌತುಕದಿ೦ದ ಗುರುಗಳ ಮುಂದೆ ಬಂದು ನಿಂತನು. ರಮಾ:-(ಆತುರದಿಂದ) ಆಮೇಲಾಮೇಲೆ? ಯುವಾನ:- ಆ ಬಳಿಕ, ಅವರು ನನ್ನನ್ನು ಕುರಿತು...“ರಮಾ ನಂದನೆಲ್ಲಿ ಹೋದನು? ಉಳಿದವರೆಲ್ಲಿ ರುವರು? ” ಎಂದು ಕೇಳಿದರು. 20 ನಾನು ಯಾರು ಎಲ್ಲಿ ಹೋಗಿರುವರೋ ನನಗೆ ತಿಳಿಯದೆಂದು ಮೆಲ್ಲನೆ ಹೇಳಿದೆನು, ಗುರುಗಳು ಮತ್ತೂ ಆಗ್ರಹದಿಂದ ನನ್ನನ್ನ ಹಿಂದೆಯೇ ಬರುವಂತೆ ಹೇಳಿ, ರವಿವರ್ಮಾದಿಗಳೊಡನೆ ' ನಿನ್ನ ಕಿರುಮನೆಯ ಕಡೆಗೆ ನಡೆದರು, ನಾನೂ ಕೂಡ ಮರುಮಾತಿಲ್ಲದೆ ಅವರ ಹಿಂದೆಯೇ ಹೋದೆನು ? 25 ರಮಾ:-ಆ ಬಳಿಕ?