ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜಾ ರಾಮಮೋಹನರಾಯರ ಜೀವಿತ ಚರಿತ್ರ. ೧೦೧ ಯದು, ಸರ್ಕಾರದ ಕಾನೂನುಗಳನ್ನೆಲ್ಲಾ ಎಲ್ಲರಿಗೂ ಸಮಾನವಾಗಿ ಏರ್ಪಡಿಸುವುದು ಶಾಸ ನಗಳನ್ನೇರ್ಪಡಿಸುವಾಗ ಉಭಯ ಜಾತಿಗಳಲ್ಲಿಯೂ ಮುಖ್ಯರಾದವರೊಂದಿಗೆ ಆಲೋಚಿಸಿ ನಿರ್ಮಿಸುತ್ತಿರುವುದು, (3) ಯರೋಪಿಯನರು ಸ್ವಜಾತಿಯವರಾಗಿರುವುದರಿಂದ ಅವರು ಅಧಿಕಾರ ವನ್ನು ಹೊಂದುವುದಕ್ಕೆ ಹೆಚ್ಚಾದ ಅರ್ಹತೆಯಳ್ಳವರಾಗಿದ್ದರೆ ರಾಜಧಾನಿಗಳಲ್ಲಿರುವಂತೆಯೇ ಮಂಡಲಸ್ಥಾನ ಡಿಸ್ಟ್ರಿಕ್ಕು (ಹೆಡ್‌ಕ್ವಾರ್ಟರ್) ಗಳಲ್ಲಿ ಕೂಡ ಯೂರೋಪಿರ್ಯ ನ್ಯಾಯ ವಾದಿಗಳೇ ಇದ್ದಲ್ಲಿ ಅವುಗಳಿಗೆ ನಿವಾರಣೆಯ ಸಾಧನ ಒದಗುವುದು. (3) ಈಗ ಅಧಿಕಾರಗಳಲ್ಲಿ ವಿಶೇಷವಾಗಿ, ಯೂರೋಪಿಯನರು ಮಾತ್ರವೇ ಇರು ವಂತೆ ಕಾಣಬರುವುದರಿಂದ ಪ್ರಜೆಗಳು ಅವರಿಗೆ ಭಯಪಟ್ಟು ನಡೆದುಕೊಳ್ಳುತ್ತಿರುವರು, ಇನ್ನು ಮುಂದೆ ವ್ಯವಸಾಯಗಾರರು ಸುದಾ ಅವರೇ ಆಗುವುದರಿಂದ ಆ ಭಯವು ಕ್ರಮ ವಾಗಿ ತೊಲಗಿ, ವೃತ್ತಿಗಳ ವರ್ತನದಲ್ಲಿ ಸ್ನೇಹವು ತಪ್ಪಬಹುದೇ ಎಂದು ಸಂದೇಹವಾ ದರೆ ಅಧಿಕ ವಿದ್ಯಾವಂತರನ್ನೇ ಪ್ರಧಮದಲ್ಲಿ ತರುವುದು ಇದರ ನಿವಾರಣೋಪಾಯವಾಗುವುದು. (4) ಯೂರೋಪಿಯನರ ನಿವಾಸದಿಂದ ದೇಶವೂ ಅಭಿವೃದ್ಧಿ ಹೊಂದಿ, ವಿದ್ಯೆಯ, ಜ್ಞಾನವೂ, ಹೆಚ್ಚುವುದರಿಂದ ಯಾವಾಗಲಾದರೂ ಒಂದಾನೊಂದು ಕಾಲದಲ್ಲಿ ಅಮೆರಿಕದ ಸಂಯುಕ್ತ ಸಂಸ್ಮಾನಗಳವರಂತೆ ಪ್ರಜೆಗಳು ಪರತಂತ್ರದಲ್ಲಿರಲು ಒಪ್ಪದೆ ಹೋಗಲಿಕ್ಕೆ ಅಸ್ಸ ದವಾಗುವುದೆಂದು ಯಾರಾದರೂ ಭಾವಿಸಬಹುದು. ಆದರೆ ಈ ಹೋಲಿಕೆ ಸರಿಯಲ್ಲವೆಂದು ಹೇಳಬೇಕಾಗಿದೆ, ಸಂಯುಕ್ತ ರಾಜ್ಯಗಳು ತಮ್ಮ ಪಾಲಿನ ದೊರೆತನಗಳೇ ಇರಲಿಕ್ಕೆ ಅವಕಾಶ ಪಡೆದಿದ್ದವು. ಆದರೆ ಈ ಇಂಗ್ಲೆಂಡ್ ಸರಕಾರದವರು ಹಿಂದೂದೇಶದ ಮೇಲೆ ನ್ಯಾಯ ವಾದ ಪ್ರಭುತ್ವವನ್ನು ಮಾಡುತ್ತಿರುವಾಗ ಅಂತಹ ಭಯಕ್ಕೆ ಅವಕಾಶವಿಲ್ಲ. ಈ ವಿಷಯ ದಲ್ಲಿ ಕನ್ನಡ ರಾಜ್ಯವನ್ನು ದೃಷ್ಟಾಂತವಾಗಿ ತೆಗೆದುಕೊಳ್ಳಬಹುದು, ಒಂದು ವೇಳೆ ಎಂದಿ ಗಾದರೂ ದೈವಯೋಗದಿಂದ ಇಂಗ್ಲೆಂಡ್ ಮತ್ತು ಇಂಡಿಯಾಗಳಿಗೆ ಇರುವ ಪ್ರಸ್ತುತ ಸಂಬಂಧದ ರೂಪವು ಮಾರ್ಪಟ್ಟರೂ ಉಭಯದೇಶಗಳಿಗೂ ವ್ಯಾಪಾರಸಂಓಂಧವೂ, ಆ ದೇ ಶೀಯರ ಪರಸ್ಪರ ಸ್ನೇಹವೂ ಇನ್ನೂ ವೃದ್ಧಿಯಾಗುವುದು. (6) ಯುರೋಪಿಯನರ ಶರೀರ ಪ್ರಕೃತಿಗಳಿಗೆ ಹಿಂದೂ ದೇಶದ ಹವಾ, ನೀರು, ಇವುಗಳು ಅನುಕೂಲವಾಗಿ 'ಓರಲಾರವೆಂದು ಒಂದು ಸಂಶಯವಿರುವುದು, ಹಾಗಿದ್ದಲ್ಲಿ ಅವರಿಗೆ ತಂಪಾದ ಪ್ರದೇಶಗಳ ವಾಸಸ್ಥಾನವಾಗಿ ಕೊಡಬೇಕು. ರಾಮಮೋಹನನಿಗೆ ಇಂಗ್ಲೆಂಡ್‌ ಒಂದನ್ನು ಮಾತ್ರವಲ್ಲದೆ ಯರೋಸ್‌ ಖಂಡದ ಇತರ ರಾಜ್ಯಗಳನ್ನೂ ಕೂಡ ನೋಡಬೇಕೆಂಬ ಕುತೂ ಅವು ಹೆಚ್ಚಾಗಿದ್ದಿತು, ತನ್ನ ಉ ದೇಶಗಳು ನೆರವೇರಬೇಕಾದುದೇ ಈತನ ಅಭಿಪ್ರಾಯವಾಗಿ ಇದ್ದುದರಿಂದ ಅದುವರೆಗೂ ಇd ಗ್ಲೆಂಡ್ ರಾಜ್ಯವನ್ನು ಕೂಡ ಚೆನ್ನಾಗಿ ತಿರುಗಿ ನೋಡಲಿಕ್ಕೆ ಅವನಿಗೆ ಅವಕಾಶ ದೊರೆಯದೆ ಇತ್ತು. ' ಹಲವು ಪ್ರದೇಶದವರು ಈತನ ಆಗಮನವನ್ನು ನಿರೀಕ್ಷಿಸುತ್ತಿದ್ದರು. ಐರ್ಲೆಂದಿ