ಪುಟ:ರಾಣಾ ರಾಜಾಸಿಂಹ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧] ಮಧ್ಯದಲ್ಲಿ ಬಂದ ವಿಘ್ನ ೧೬೭ ಎಂದು ಕೇಳಿದನು ರಾಣಿಯು ಸ್ವಲ್ಪವೂ ಮಾತಾಡಲಿಲ್ಲ ಪತ್ರದ ಕಡೆಗೆ ಬೆರಳು ತೋರಿಸಿದಳು. ಪ್ರತಾಪನು ಪತ್ರವನ್ನು ತಕ್ಕೊಂಡು ಓದಹ ದನು ಪತ್ರವನ್ನು ಓದಿದೊಡನೆಯೆ ಆತನ ವೃತ್ತಿಯು ಚಮತ್ಕಾರವುಳ್ಳ ದ್ವಾಯಿತು, “ಅಡ್ಡಿಯಿಲ್ಲ ಇನ್ನೂ ನಾವು ಬದುಕಿರುತ್ತೇವೆ' ಆದ್ರೂ ಹಿಯ ಸಮಾಚಾರವನ್ನು ತೆಗೆದು ಕೊಳ್ಳುವಷ್ಟು ಶಕ್ತಿಯನ್ನು ದೇವರು ನಮಗೆ ದಯಪಾಲಿಸಿರುತ್ತಾನೆ ನೀನು ಸ್ವಲ್ಪವೂ ಹೆದರಬೇಡ, ನಾನು ಸ್ವಲ್ಪ ಜನರೊಂದಿಗೆ ಹೋಗಿ ಆತನ ಪಾರುಪತ್ಯವನ್ನು ಮಾಡುತ್ತೇನ ಪೂಜ್ಯರಾದ ಪರಮಹಂಸರನ್ನೂ ತಪಸ್ವಿನೀಮಾತೆಯನ್ನೂ ಬಿಡಿಸಿಕೊಂಡು ಬರುತ್ತೇನೆ ನೀನು ಸುಖವಾಗಿ ಇರು ? ರಾಣಿ-it ಆದರೆ ತಾವು ಯಾವಕಾರ್ಯಕ್ಕೆ ಹೊರಟಿರು ರೆಂಬ ಪರವೆಯು ತಮಗುಂಟೇನು? ನಾವು ಈಗಿರುವದು ಭಯಂಕರ ವಾದ ಅರಣ್ಯ, ಇಂಧ ಹೊತ್ತಿನಲ್ಲಿ ತಾವು ಹೋಗುವದೆಂದರೆ ಕಠಿಣವಾ ದದ್ದು ಪ್ರತಾಪ-“ ನಿನ್ನ ಸಂರಕ್ಷಣೆಯ ಬಗ್ಗೆ ಚನ್ನಾಗಿ ವ್ಯವಸ್ಥೆ ಮಾಡಿ ಹೋಗುವೆನು ಬೆಳಗಾಗುವದರೊಳಗೆ ನಾನು ಅವರ ಶಾಶನವನ್ನು ಮಾಡಿ ಪುನಃ ಇಲ್ಲಿಗೆ ಬರುತ್ತೇನೆ ಈಗ ವಿಲಂಬ ಮಾಡುವದರಿಂದ ಪ್ರಯೋಜನವಿಲ್ಲ. ಆಗಲಿ, ನಾನು ಹೋಗಿಬರುತ್ತೇನೆ ? ರಾಣಿ- ಪ್ರತಾಪರಾಯರೇ, ನೋಡಿರಿ, ನೀವು ಹೋಗುವದನ್ನು ನಾನು ತಡೆಯುವದಿಲ್ಲ ಯಾಕಂದರೆ ತಮಗೆ ಗೊತ್ತಿರಬಹುದು ನಮ್ಮ ಬ್ರರ ಲಗ್ನ ವಾಗುವದಕ್ಕೆ ನಾನು ಯಾವ ಕುಲೋತ್ಪನ್ನಳೆಂಬದು ಅವ ರಿಂದ ಸುಲಭವಾಗಿ ತಿಳಿಯುವದು ಅದು ಅವರಿಗೆ ಚನ್ನಾಗಿ ಗೊತ್ತಿರು ತದೆ. ನನ್ನನ್ನು ರಾಜೇಪದಕ್ಕೆ ನೇಮಿಸುವ ಕಾಲಕ್ಕೆ, ಇಚ್ಛೆ ತ ಕಾರ್ಯಸಫಲವಾದರೆ ನಿನ್ನ ತಂದೆತಾಯಿಗಳನ್ನು ತೋರಿಸುತ್ತೇವೆಂದು ಅವರು ಹೇಳಿರುತ್ತಾರೆ ಅದು ಪೂಜ್ಯ ಪರಮಹಂಸ, ಹಾಗು ತಪಸ್ವಿನಿಯರ ಹೂರ್ತು ಅನ್ಯರಿಗೆ ಗೊತ್ತಿಲ್ಲ ಸಾರ್ಧಕವಾಗದು ಆದ್ದರಿಂದ ಪ್ರತಾಪ ರಾಯರೇ ಹ್ಯಾಗಾದರೂ ಮಾಡಿ ಅವರನ್ನು ಸುರಕ್ಷಿತವಾಗಿ ಬಿಡಿಸಿರಿ.