ಪುಟ:ರಾಣಾ ರಾಜಾಸಿಂಹ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭;

ಕಾಣಾ ರಾಜಸಿಂಹ [ಪ್ರಕರಣ • | .ಯದಾಗಿತ್ತು ಶತ್ರುಗಳ ಸ್ತ್ರೀಯರಿಗೂ, ವೃದ್ಧರಿಗೂ, ಬಾಲಕರಿಗೂ ದುಃಖಕೊಡಬಾರದೆಂದು ಮಹತ್ವದ ಕಟ್ಟಪ್ಪಣೆಯಿತ್ತು ಈ ತರಹದ ನಿಯಮಗಳನ್ನು ಪಾಲಿಸುತ್ತಿದ್ದದರಿಂದ ರಾಜಸಿಂಹನಿಗೆ ಯಶಸ್ಸು ಒಂದೇ ಬರುತ್ತಿತ್ತು. ಆಕಬರಶಹನ ಸಹಾಯಕ್ಕೆ ಹೋಗುವ ದಂಡು ಮಧ್ಯದಲ್ಲಿಯೆ ಮಣ್ಣು ಪಾಲಾಯಿತು ದಿಲೇರಖಾನನು ಪರಾಭೂತನಾದನು ಗೋಪೀ ನಾಧರಾದೋಡ, ವಿಕ್ರಮಸಿಂಹ, ಸೋಳಂಖ, ಬಹಾದ್ದೂರ ಪ್ರತಾಪಸಿಂಹ ಇವರ ಅಲೌಕಿಕಯುದ್ಧ ಕೌಶಲ್ಯದೆದುರಿಗೆ ದಿಲೇರಖಾನನು ಸ್ಥಿರಗೊಳ್ಳದೆ ರಣರಂಗವನ್ನು ಬಿಟ್ಟು ಬಿಡಬೇಕಾಯಿತು ಶತ್ರುಗಳ ಒಲವು ಹಚ್ಚಾ ಯಿತು ಅವರಿಗೆ ಎಲ್ಲ ಕಡೆಯಿಂದಲೂ ಸಹಾಯವು ದೂರಯಹತ್ತಿತು. ಇದನ್ನು ಕಂಡು ಔರಂಗಜೇಬನ ಶರೀರವು ಕುಶಿಬಿಟ್ಟಿತು. ಒರೇನಾ ಲೈದುಸಾವಿರ ಸೇನೆಯ ಎದುರಿಗೆ ತನ್ನ ಅತ್ಯಗಾಧವಾದ ಸೇನೆಯ ಪರಾಭವವಾದದ್ದನ್ನು ಕಂಡು ಆತನಿಗೆ ನಾಚಿಕೆ ಜನಿಸಹತ್ತಿತು ಆ ಧೂರ್ತನಾದ ಬಾದಶಹನಿಗೆ ಈ ಕಾಲಕ್ಕೆ ತಾನು ಮರಳಿಹೋಗುವದು ಉತ್ತಮವೆಂದು ಕಂಡುಬಂತು ಮಳಗಾಲದ ಆರಂಭವಾದ್ದರಿಂದ ಆ ರಾಜಸ್ತಾನದ ಪರ್ವತಪ್ರದೇಶದಲ್ಲಿ ಸ್ಥಿರಗೊಂಡು ನಿಲ್ಲುವಂತಿರಲಿಲ್ಲ. ಹಿಂದಿನ ಪ್ರಸಂಗದ ನೆನಪಾದಕೂಡಲೆ ಆತನ ಮೈಮೇಲ ರೋಮಾಂಚ ಗಳಳಹತ್ತಿದವು ಈ ತರಹದ ಪ್ರಸಂಗವನ್ನು ಸ್ವತಃ ತಾನೇ ಸಹನಮಾಡ ಬೇಕಾದದ್ದರಿಂದ ಆತನಿಗೆ ಬಹಳ ಕೆಡಕೆನಿಸಿತು « ರಾಜಸಿಂಹನು ಬಾದ ಶಹನನ್ನು ಬಂದಿಯಾಗಿಟ್ಟಿದ್ದನು ” ಎಂಬ ಶಬ್ದವು ಆತನನ್ನು ಎಶೇಷವಾಗಿ ಬಾಧಿಸಹತ್ತಿತು “ ನಾನು ಭರತಖಂಡದ ಸಮ್ರಾಟನೆನಿಸಿಕೊಳ್ಳುತ್ತೇನೆ. ನನ್ನನ್ನು ಈ ರಾಜಸಿಂಹನಂಧ ಸಾಧಾರಣ ಸಂಸ್ಥಾನಿಕನು ಅಳಕಿನಲ್ಲಿಡ ಬೇಕೆಂದರೆ ಎಂಧ ಲಜ್ಜಾಸ್ಪದವಾದ ಸಂಗತಿಯು ! ಇದರ ಪ್ರತೀಕಾರ ವನ್ನು ಎಂದಾದರೊಂದುದಿನ ತೀರಿಸಿಕೊಳ್ಳಲೇಬೇಕು ' ಎಂದು ಮನಸಿ ನಲ್ಲಿ ಸಂಕಲ್ಪ ಮಾಡಿಕೊಂಡನು. ಅಮೇಶ ತನ್ನ ಛಾವಣಿಯನ್ನು ಕೀಳು