ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨

ರಾಮಚಂದ್ರಚರಿತಪುರಾಣಂ

      
       ಅನಂತರಮವನಿಪತಿ ಸತಿಗೆ ಸಮಯೋಚಿತ ಪರಿಚರ್ಯಾಚತುರೆಯರಂ ನಿಯೋಜಿಸಿ ಬಿಜಯಂಗೆಯ್ವುದುಂ ಕತಿಪಯ ದಿವಸಂಗಳ್ ನಿರತಿಶಯ ಸುಖಸ್ವರೂಪ೦ಗಳಾಗಿ
ಪೋಗೆ--

       ಕಂ|| ಎಳವಸಿಳೊಳ್ ಸತಿಯ ಮೊಗಂ,
             ಬೆಳರ್ತುದನ್ವರ್ಥಮಾಯ್ತು ಚಂದ್ರಾನನೆಯೆಂ||
             ದಿಳೆ ಪೊಗಳ್ವಿ ಮಾತು ನೀುಳ್ದುದು
             ಲಳಿತಾಳಕಮಾಳೆ ಸುಯ್ಗೆ ಸಾರ್ವಳಿಗಳವೋಲ್||೯೩||

             ಮಕರಾಂಕ ದ್ವಿಪಮದ ಪ
             ಟಿಕೆಯೆನಿಸಿ ಕಪೋಲಮಾಲಮಂ ಮುಟ್ಟಿದುವಾ||
             ಚಕಿತಾಕ್ಷಿಯ ಹರಿನೀಳಾ
             ಳಕಂಗಳಾನನ ಸರೋಜಿನೀ ಮಧುಪಂಗಳ್||೯೪||

             ತೋರಮೊಲೆಗಳ ಮೊಗಂಗಳ್
             ರಾರಾಜಿಸಿ ಕರ್ಪುವೆತ್ತು ಮೋಹನ ಧೂಮೋ||
             ದ್ಗಾರಿಗಳಂ ಕಾಂಚನ ಭೃಂ
             ಗಾರಿಗಳಂ ಪೋಲ್ತುವರಸಿಗಂದೆಳವಸಿರೊಳ್||೯೫||
 
             ಬಟ್ಟಿದುವೆನಿಪ್ಪ ಮೊಲೆಗಳ
             ತೊಟ್ಟು ಕರಂಗುವುದುಮೊಡನೆ ಸರ್ವಸ್ವಮುಮಂ||
             ಕೊಟ್ಟು ಕರಂಗಿದರಹಿತರ್
             ಕೆಟ್ಟುವು ವಳಿಯೊಡನೆ ವೈರಿವಂಶಾವಳಿಗಳ್||೯೬||

ಚ|| ಉದರದೊಳಿರ್ದ ಬಾಲಕನಶೇಷ ಕಲಾನಿಧಿ ತಪ್ಪದಪ್ಪನ|
     ಲ್ಲದೊಡೊಗೆದೊಂದೆ ನಾಳದೊಳೆ ಹೇಮಸರೋಜಮಮಳ್ಗಳಾಗಿಪು||
     ಟ್ಟಿದುವವರೊಳ್ ಮದಾಳಿ ನೆಲಸಿರ್ದಪುವೆಂತೆನೆ ನೀಳ್ದಬಾಸೆ ಬೀ|
     ಗಿದಮೊಲೆ ನೀಳಚೂಚಕಮಿವೇಂ ಬಗೆಗೊಂಡುವೊ ಲೋಲನೇತ್ರೆಯಾ||೯೭||

     ಕಂ|| ಉದರದೊಳಿರ್ದ ತನೂಭವ
           ನುದಾರತಾ ಗುಣದ ಪೆರ್ಮೆಯಂ ಪೇಳ್ವಿವೊಲಾ||
           ಸುದತಿಗೆ ನಿರಂತರಂ ಪಾ
           ತ್ರದಾನಮಂ ಮಾಳ್ಪಿ ಬಯಕೆ ಪುಟ್ಟಿತ್ತಾಗಳ್||೯೮||


1 ಪಾರ್ವ. ಗ ಘ.
2.ದೆನೆ. ಕ, ಖ