ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಚತುರ್ಥಾಶ್ವಾಸಂ

87

     ದಾರುತ್ತುಂ ಗೆಲೆ ಕಾದೆ ಲಕ್ಷ್ಮಣನೊಳಂ ಕಂಡಂತದಂ ಲೋಕ ಸಂ|
     ಹಾರಂಮಾಳ್ಪಿ ಕೃತಾಂತನಂತೆ ರಘುಜಂ ಕೊಂಡಂ ಧನುರ್ದಂಡಮಂ||೬೨||
 
ಚ॥ ಒದವಿದ ಚಾಪಟಂಕೃತಿ ಭಯಂಕರಮಾಗೆ ವರೂಥಭಾರದಿಂ|
     ದದಿರೆ ನೆಲ ಮನಃಪವನವೇಗದಿನೆಯ್ದಿ ಬಲಂ ಮಹಾಬಲಂ||
     ಕದನ ಮದಾವಿಲ೦ ಕರೆಯೆ ಬಲ್ಸರಿಯೆಂಬಿನಮಂಬನಂಬು ನ|
     ಟ್ಟುದೆ ನೆರನಾಗೆ ಕೂಡೆ ಗತಜೀವಿತಮಾಯ್ತು ಕಿರಾತಸಾಧನಂ||೬೩||

     ಆಗಳ್--
  
     ಕಂ||ಗೆಲ್ದಾರೆ ಜನಕಸೇನೆ ಸ
          ಡಿಲ್ದಗಿಯೆ ಕಿರಾತಸೇನೆ,ದಶರಥರಾಮಂ||
          ಬಿಲ್ಲೆಗೆದಿಸೆ ಮಾರ್ಪಡೆಯೊಳ್
          ಬಲ್ದಲೆಯರ್ ಶಬರನಾಯಕರ್ ಪಡಲಿಟ್ಟರ್||೬೪||

      ಆ ಸಮಯದೊಳ್ ಲಕ್ಷ್ಮಣಂ ಲಯಸಮಯ ಸಮುತ್ಪಾದನ ಸಮಗ್ರ ವೀರ ಗ್ರಹಾವೇಶಮನಪ್ಪುಕೆಯ್ದು--

      ಕಂ|| ಪಾರದೆ ಕೈದುವ ಬಲಮಂ
            ಪಾರದೆ ನೆರವಲಮನೊಂದೆ ತೋಳ್ವಲಂ ಸಂ||
            ಹಾರಿಸಿದಂ ಮಾರ್ಬಲಮಂ
            ವಾರಿಜನಾಭಂಗೆ ಸಂಗರಕ್ಕಿದಿರುಂಟೇ||೬೫||

      ಅ೦ತು ರಾಮಲಕ್ಷ್ಮಣರ್ ಕಡಂಗಿ ಕಾದುವಾಗಳವರ ಬಲಕ್ಕೆ ಸುಗಿದು
ಮೆಯ್ದೆಗೆವ ಬೇಡವಡೆಯಂ ಕೂಡಿಕೊಂಡು--

ಚ|| ಅದಿರದಿದಿರ್ಚಿ ತಾಗಿದ ತರಂಗತಮಂ ದಿನನಾಯಕ೦ಗಿದಿ|
     ರ್ಚಿದ ತಮದಂತೆ ಮೆಯ್ದೆಗೆಯೆ ಮಾರ್ಬಲದಾನೆಗೆ ಕೂಟಪಾಕಳಂ||
     ಕುದುರೆಗೆ ಕರ್ಣದೂಷಿಕೆ ರಥಕ್ಕೆ ಸಿಡಿಲ್ ಭಟಮಂಡಲಕ್ಕೆ ಕೆಂ|
     ಡದ ಮಳಿಯೆಂಬಿನಂ ಕರೆದನ೦ಬಿನ ಪೆರ್ಮಳಿಯಂ ಹಲಾಯುಧಂ||೬೬||

ಉ|| ಕಾದಲಿದಿರ್ಚಿ ಕೈದುವಿಡಿಯಲ್ಬಗೆದರ್ಪುದು ಮೊಗ್ಗೆ ಮಂಜಿನಂ|
     ತಾದುದು ನಂಜನೆಂಜಲಿಸಿದಂತೆವೊಲಾದುದು ಬೇಗೆ ಪರ್ವಿದಂ||


1. ಸಂಕುಲಂ. ಕ, ಖ. ; ಸೈನಿಕ೦ ರ, ಫ.
2: ದಂತ, ಚ.