ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಪ್ತಾಶ್ವಾಸಂ

೧೫೫

ಉ || ನನ್ನಿಗೆ ಬನ್ನವಾದೊಡಯಶಂ ಪಿರಿದಪ್ಪುದು ತಂದೆಗೆಂಬಿದಂ |
ನಿನ್ನ ವಿಯೋಗದಿಂ ಜನನಿಗಪ್ಪುದು ಜೀವ ವಿಯೋಗವೆಂಬಿದಂ ||
ನಿನ್ನ ನೆಗಟಿಗಂ ಮಹಿಮೆಗಂ ಪಿತೃವಾಕ್ಯಮೆ ಕೃತ್ಯ ಮೆಂಬಿದಂ |
ನಿನ್ನೊಳೆ ನೀನೆ ಭಾವಿಸುವುದೇಳಿಸಲಪ್ಪುದಿದಾಗದೆಂಬಿದಂ || ೧೩೦ ||


ಚ | ಕ್ರಮ ಪರಿಪಾಲನಾರ್ಥಮೆನಗಿತ್ತನಿಳಾಧಿಪತ್ತೆನೆನ್ನ ರಾ |
ಮನಧಿರಾಜ ಸತ್ಯ ಪರಿಪಾಲನೆಗಾಂ ನಿನಗಂತಅಂದದ ||
ಕ್ರಮಮಣಮಲ್ಲು ನೀಂ ತಳೆವುದೊರ್ನನದಿಂ ಯುವರಾಜ ರಾಜ್ಯಭಾ |
ರಮನಧಿರಾಜ ವಾಕ್ಯ ಮನಗಂ ನಿನಗಂ ಕರಣೀಯವಲ್ಲವೇ || ೧೩೧ ||


ಎಂದು ರಾಮನನುಜನಂ ರಾಜ್ಯದೊಳ್ ನಿಲ್ವಂತೆ೦ತಾನುಮೊಡಂಬಡಿಸೆ
ವಿಸ್ಮಯಂಬಟ್ಟು-


ಉ || ಏದೊರೆಯ ಮಹಾಪುರುಷರಾದ ರಿದಂ ಪಿಡಿದೊರ್ವರೊರ್ವರೊಳ್ |
ಕಾದಿದರೋಡಿದರ್ ಮಡಿದರಲ್ಲದೆ ತಂದೆಯ ನನ್ನಿಗಿತ್ತರಾರ್ ||
ಮೇದಿನಿಯಂ ಜರತೃಣಮನೀವವೊಂದು ಕಡಂಗಿ ಬಣ್ಣಿಸಿ |
ತ್ಯಾದರದಿಂ ಮಹೀಭುಜ ಸಭಾ ವಲಯಂ ಬಲಭದ್ರರಾಮನಂ || ೧೩೨ ||


ಮ || ಉಲ್ವಿನಾಥರನೇಕರುಂ ಮಡಗಿ ಭಂಡಾರಂಗಳಂ ಲೋಭದಿಂ |
ಪೆಲ್ವಾವಾಗಿ ಪಿಶಾಚವಾಗಿ ಪಲಕಾಲಂ ಕಾದುಕೊಂಡಿರ್ಪರಾ ||
ರುಚಕ್ರಮನಿಂತು ಕೊಟ್ಟರನುಜ೦ಗೆ೦ದಾ ಸಭಾವಿಷ್ಟರೋ |
ರೊಲ್ವರ್ ಬಣ್ಣಿಸಿದರ್ ಪರಾರ್ಥ ಗುಣ ಕಾರಾಮನಂ ರಾಮನಂ || ೧೩೩ ||


ಕಂ ॥ ಕಾಗಿಣಿಗೆ ಮರಂ ಬೀವಿ
ಲೈಗಿರ್ಕು೦ ಕಡಲ ಕಡೆವರಂ ನಿಮಿರ್ದ ಮಹೀ ||
ಭಾಗಮನನುಜಂಗಿತ್ತ೦
ಭಾಗಿಗಳಾರ್ ಸೀರಪಾಣಿಯೊರೆಗಂ ದೊರೆಗಂ || ೧೩೪ ||


ಎಆಗುವುದೂರ್ಧ್ವಜ್ವಲನಮೆ
ತೆನೆನಿಸಿದ ದೀಪವರ್ತಿ ನಿಧಿಗಾ ನಿಧಿಯಂ ||
ತೊರೆದಂ ದಲೆಂದೊಡಾರ್ಫಿನ
ತಜಿಸಲವಂ ಕ೦ಡನೇಕಕುಂಡಲನೆ ವಲಂ|| ೧೩೫ ||


ವಸುಮತಿಯಂ ಮೃತ್ವಿಂಡ
ಕ್ಕೆ ಸಮಂಗ೦ಡಾಯಿ ಕೊಟ್ಟು ತಂದೆಯ ಪಟಿಯಂ ||