ಪುಟ:ರಾಯಚೂರು ವಿಜಯ ಭಾಗ ೧ .djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ೧೦೦ ಕರ್ಣಾಟಕ ಗ್ರಂಥಮಾಲೆ w ಟ ದರೆ ಕೆಲಸಕಟ್ಟಿತು, ಒಳಕ್ಕೆ ಬಾ, ಬೇಗ ಬಾ,” ಎಂದು ಹೇಳುತ್ತಾ ಅವ ನನ್ನು ಒಳಕ್ಕೆ ಕರೆದುಕೊಂಡು ಹೋದನು. ಆ ಆಗಂತುಕನು, ಕಾರಣಾಂತರದಿಂದ ರಾಮಯಾಮಾತ್ಯನೇ ಕಂಬರ ಸೇನನೆಂದು ಹೆಸರಿಟ್ಟು ಕೊಂಡಿದ್ದನೆಂದು ಭಾವಿಸಿದನು. ಆತನು ಒಳಕ್ಕೆ ಹೋಗಿ ಒಂದು ಕಾಗದವನ್ನು ಆತನ ಕೈಗೆ ಕೊಟ್ಟು “ ಮಂತ್ರಿ ಶ್ರೇಷ್ಠರೇ ರಾಮಯಾಮಾತ್ಯರು ತಾವೇ ಎಂದು ಮೊದಲು ತಿಳಿಯದೇ ಹೋದೆ ಕ್ಷಮಿಸಿ, ನಾನು ಬಂದನೇಳ ಬಹಳ ಒಳ್ಳೆಯದು; ನನಗೆ ಬೇಗ ಪ್ರತ್ಯುತ್ತರ ವನ್ನು ಕೊಟ್ಟು ಕಳುಹಿಸಿ ” ಎಂದು ಬೇಡಿಕೊಂಡನು. ಆಗ ಕಂಬರಸೇನನು ಬಹಳ ಸಂತೋಷಭರಿತನಾಗಿ ಅಷ್ಟು ಸುಲಭ ವಾಗಿ ತನ್ನ ಕೈಗೆ ಸಿಕ್ಕಿದ ಕಾಗದವನ್ನು ತೆರೆದು ಓದಿಕೊ೦ಡನು ಅದರಲ್ಲಿ ಹೀಗೆ ಬರೆದಿತ್ತು :-

  • ಮಿತ್ರತ್ತಮರಾದ ರಾಮಯಾವಾತ್ಯರಲ್ಲಿ ತಿಮ್ಮರಸನ ವಿಜ್ಜಾ ಪನ.

ನಮ್ಮ ಸಂಕೇತವ ಮೇರೆಗೆ ಅನಂಗಸೇನೆ, ಮುಕ್ಕಾಂಬೆ ಮುಂತಾದ ವರನ್ನು ರಾಯರಿಗೆ ಸೇರಿಸಿ ಮೊದಲನೆಯಾಕೆಯನ್ನು ತೋಫಖಾನ ಸಿಗೆ ಕೊಡುವೆನೆಂದು ನಂಬಿಕೆ ಹುಟ್ಟಿನಿ ಅವನೊಡನೆ ಸ್ನೇಹವನ್ನು ಬಳಸಿ ಸುತ್ತಿರುವರೆಂದು ಕೇಳಿ ಬಹಳ ಸಂತೋಷವಾಯಿತು. ಆದಿಲ್‌ಪಹನೂ ಕೂಡ ನಿಮ್ಮ ಎಲೆಗೆ ಬಿದ್ದನೆಂದು ಕೇಳ ಮತ್ತೂ ಸಂತೋಷವಾಯಿತು. ಮರು ರಾಜ್ಯಗಳವರೂ ತಮ್ಮ ತಮ್ಮ ಸೈನ್ಯಗಳನ್ನು ಒಟ್ಟುಗೂಡಿಸಿದ ಕೂಡಲೇ ರಹಸ್ಯವಾಗಿ ಇಲ್ಲಿಗೆ ಸಮಾಚಾರ ತಿಳಿಸಿದರೆ, ನಾನೇ ಸ್ಪಲ್ಪಸೈನ್ಯ ವನ್ನು ತೆಗೆದುಕೊಂಡು ಅಹಮದ್‌ನಗರವನ್ನು ಮುತ್ತು ವೆನು, ಸಾರ ಯೌವುರು ಗೋಂಡವನ್ನು ಆಕ್ರಮಿಸುವರು. ಇವೆರಡೂ ವಶವಾದರೆ ಈಗ ಮಧ್ಯಸ್ಥವಾಗಿರುವ ಬಿಜಾಪುರರಾಜ್ಯವು ನನ್ನ ಕೈಗೆ ಸಿಕ್ಕಿದಂತೆಯೇ